Pages

ನವೆಂಬರ್ 16, 2013

ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಸಾಧಕ ಶ್ರೇಷ್ಠರು

2004 ರಿಂದ 2014 ರ ಅವಧಿಯಲ್ಲಿ 
"ಡಾ.ಪಂ.ಪುಟ್ಟರಾಜ ಕೃಪಾಭೂಷಣಯುವ ಪುರಸ್ಕಾರ"
ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಶ್ರೇಷ್ಠ ಸಾಧಕರು
========================================================================

ಶ್ರೀ ಪ್ರಕಾಶ ಸೊಂಟಕ್ಕೆ ಬೆಂಗಳೂರು ಶಾಸ್ತ್ರಿಯ ವಾದ್ಯ ಸಂಗೀತ ಗಿಟಾರ್
ಶ್ರೀ ಫಯಾಜ್ ಅಹ್ಮದ್ ಖಾನ್ ಬೆಂಗಳೂರು ಶಾಸ್ತ್ರಿಯ ವಾದ್ಯ ಸಂಗೀತ ಸಾರಂಗಿ
ಶ್ರೀ ಶಾಂತಲಿಂಗ ದೇಸಾಯಿಕಲ್ಲೂರ ಗುಲಬರ್ಗಾ ಶಾಸ್ತ್ರಿಯ ವಾದ್ಯ ಸಂಗೀತ ತಬಲಾ
ಶ್ರೀ ಧನಂಜಯ ಹೆಗಡೆ ಬೆಂಗಳೂರು ಶಾಸ್ತ್ರಿಯ ಸಂಗೀತ ಗಾಯನ
ಶ್ರೀ ಕೈವಲ್ಯಕುಮಾರ ಗುರವ ಧಾರವಾಡ ಶಾಸ್ತ್ರಿಯ ಸಂಗೀತ ಗಾಯನ
ಶ್ರೀ ಲಕ್ಷ್ಮೀಶ ರಾವ ಮುಂಬೈ ಶಾಸ್ತ್ರಿಯ ವಾದ್ಯ ಸಂಗೀತ ತಬಲಾ
ಶ್ರೀ ಬಸವರಾಜ ಎಲ್ ಜಾನೆ ಗುಲಬರ್ಗಾ ಚಿತ್ರ ಕಲೆ
ಶ್ರೀ ಸಿದ್ದರಾಮ ಪೋಲಿಸ ಪಾಟೀಲ್ ಗುಲಬರ್ಗಾ ಸುಗಮ ಸಂಗೀತ ಗಾಯನ
ಶ್ರೀ ಬಸವರಾಜ್ ಹೊಸಮನಿ ಬಾಗಲಕೋಟ ರಂಗ ಭೂಮಿ
ಶ್ರೀ ವೀರಭದ್ರ ಸಿಂಪಿ ಗುಲಬರ್ಗಾ ಸಾಹಿತ್ಯ ಸಂಘಟನೆ
ಶ್ರಿ ಮಂಜುನಾಥ ಆಚಾರ್ಯ ಬೆಂಗಳೂರು ಶಿಲ್ಪಕಲೆ
ಶ್ರೀ ಆರ್.ಆರ್.ದೇಸಾಯಿ ಗುಲಬರ್ಗಾ ಕಲಾಪೋಷಕರು
ಶ್ರೀಮತಿ ಶುಭಾ ಧನಂಜಯ ಬೆಂಗಳೂರು ಭರತ ನಾಟ್ಯ
ಶ್ರೀಮತಿ ಲಕ್ಷ್ಮೀ ಕೌಶಿಕ ಬೆಂಗಳೂರು ಭರತ ನಾಟ್ಯ
ಕರ್ನಾಟಕ ಸಂಘ ಮುಂಬೈ ಹೊರನಾಡು ಸಂಘ ಸಂಸ್ಥೆ
ಶ್ರೀಮತಿ ವೈಷ್ಣವಿ ಹಾನಗಲ್ ಮುಂಬೈ ಶಾಸ್ತ್ರಿಯ ಸಂಗೀತ ಗಾಯನ
ಶ್ರೀಮತಿ ರಾಜಶ್ರಿ ಉಳ್ಳಾಲ ಮಂಗಳೂರು ಭರತ ನಾಟ್ಯ
ಶ್ರೀ ಬೇಲೂರು ವೇಣುಗೊಪಾಲ ಹಾಸನ ಕರ್ನಾಟಕಿ ಸಂಗೀತ ವಾದನ
ಶ್ರೀಮತಿ ಬಿ.ಪುಷ್ಪಲತಾ ಮೈಸೂರು ಸುಗಮ ಸಂಗೀತ
ಶ್ರೀ ಟಿ. ಎಂ. ಶಿರೊಳಮಠ ಬಿಜಾಪುರ ಸಂಗೀತ ಶಿಕ್ಷಕ
ಶ್ರೀ ಶರಣಪ್ಪ ಜಿ ಕಲಬುರ್ಗಿ ಗದಗ ತಬಲಾ ವಾದನ
ಕುಮಾರಿ ದೀಪಾ ದಾವಣಗೆರೆ ಸಾಂಸ್ಕೃತಿಕ ಸಂಘಟನೆ
ಡಾ. ಮೃತ್ಯಂಜಯ ಅಗಡಿ ಧಾರವಾಡ ಶಾಸ್ತ್ರಿಯ ಸಂಗೀತ ಗಾಯನ
ಶ್ರೀ ಶಫೀಕ್ ಖಾನ ಧಾರವಾಡ ವಾದ್ಯ ಸಂಗೀತ ಸಿತಾರ್
ಕುಮಾರಿ ಶ್ವೇತಾ ಪ್ರಚಂಡೆ ಪುಣೆ ಭರತ ನಾಟ್ಯ
ಶ್ರೀಮತಿ ಸ್ಮೀತಾ ಬೆಳ್ಳೂರ ಬೆಂಗಳೂರು ಶಾಸ್ತ್ರಿಯ ಸಂಗೀತ ಗಾಯನ
ಶ್ರೀಮತಿ ಅನುಪಮ ಮಂಗಳವೇಡೆ ಮುಂಬೈ ಶಾಸ್ತ್ರಿಯ ಸಂಗೀತ ಗಾಯನ
ಡಾ.ಪಂಡಿತ ರಾಠೊಡ ಗದಗ ಸಾಹಿತ್ಯ


ಅಭಿಮಾನಿ ಭಕ್ತರಲ್ಲಿ ಒಂದು ವಿಜ್ಞಾಪನೆ


ಡಾ.ಪಂ.ಪುಟ್ಟರಾಜರ ಅಭಿಮಾನಿ ಭಕ್ತರಲ್ಲಿ 
ಒಂದು ವಿಜ್ಞಾಪನೆ

ಆತ್ಮೀಯ ಅಭಿಮಾನಿ ಭಕ್ತರೇ... 

ಗಾಗಲೇ ತಾವು ಈ ಸಮಿತಿಯಪೆಗೆ ಪಾತ್ರರಾಗಿದ್ದಿರಿ ಇದಕ್ಕಾಗಿ ತಮಗೆ ಅನಂತ ಕೃತಜ್ಞೆತೆಗಳು. ಈಗ ನಮ್ಮ  ಸಮಾರಂಭಗಳಲ್ಲಿ ಅತಿಥಿ, ಕಲಾವಿದ, ಪ್ರಶಸ್ತಿಪುರಸ್ಕೃತ, ಪ್ರತಿನಿಧಿ ಗಳಾಗಿ ಭಾಗವಹಿಸಿ ಸಮಿತಿಯ ಎಲ್ಲ ಸಮಾರಂಭಗಳು ಯಶಸ್ವಿಯಾಗಲು ಕಾರಣರಾಗಿ ಪೂಜ್ಯರ ಕೃಸಮಿತಿಯು ತಮ್ಮನ್ನೂ ಒಳಗೊಂಡಂತೆ ತಮ್ಮೂರಿನಲ್ಲಿ ಇರುವ ಪೂಜ್ಯರ ಅಭಿಮಾನಿ ಭಕ್ತರೆಲ್ಲಗೂ ಸಮಿತಿಯ ದಶಮಾನೋತ್ಸವ ಮತ್ತು ಪೂಜ್ಯ ಗುರು ಪುಟ್ಟರಾಜರ ಜನ್ಮ ಶತಮಾನೋತ್ಸವ ಆಚರಣೆಯ ಸುವರ್ಣ ಸೇವಾಭಾಗ್ಯ ಕಲ್ಪಿಸಲು ಮುಂದಾಗಿ ತಮ್ಮನ್ನು ಈ ಮೂಲಕ ಸಂಪರ್ಕಿಸುತಿದ್ದೇವೆ. ತಾವು ಸಕ್ರೀಯವಾಗಿ ಪಾಲ್ಗೊಳ್ಳುವ ವಿಶ್ವಾಸವನ್ನೂ ಹೊಂದಿದ್ದೇವೆ. ಕೆಲವರು ಪೂಜ್ಯರನ್ನು ನೋಡಿರಬಹುದು ನೋಡದೇ ಇರಬಹುದು ಆದರೆ ಪೂಜ್ಯರ ವೆಕ್ತಿತ್ವದ ಬಗ್ಗೆ ಸಾಧನೆ ಸಿಧ್ಧಿಯ ಬಗ್ಗೆ ಕೇಳದೇ ಇರಲಾರರು. ಪೂಜ್ಯರು ಸಮಸ್ತ ಮನುಕುಲದ ಪ್ರಾತಿನಿಧಿಕ ವ್ಯಕ್ತಿಯಾಗಿ, ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದವರು. ಇಂತಹ ವ್ಯಕ್ತಿ ಮನುಕುಲದ ಇತಿಹಾಸದಲ್ಲಿ ಹಿಂದೆ ಇರಲಿಲ್ಲ ಮುಂದೆಸಿಗುವದೂ ಇಲ್ಲ. ಇದು ನನ್ನ ಪಾಲಿನ ಸತ್ಯ. ಇಂತಹ ಮಹಾ ಮೇರು ಚೇತನ ನಮ್ಮೊಂದಿಗಿಲ್ಲ. ಅವರ ಸಾಧನೆ ನಮ್ಮೊಂದಿಗಿವೆ. ಪೂಜ್ಯರ ಸಾಧನೆಯ ದರ್ಶನ ಮುಂದಿನ ಪೀಳಿಗೆ ನೋಡಬೇಕು ಮಾತನಾಡಬೇಕು ಸ್ಮರಿಸಿಕೊಳ್ಳಬೇಕು. ಅದಕ್ಕಾಗಿಯೇ ಈ ಸಮಿತಿ 2014-2015 ರ ಸಾಲಿನಲ್ಲಿ ವರ್ಷ ಪೂರ್ತಿ ರಾಜ್ಯದ ಹನ್ನೆರಡು  ಜಿಲ್ಲೆಗಳಲ್ಲಿ ಹನ್ನೆರಡು ಅದ್ದೂರಿ ಸಮಾರಂಭ ಹಮ್ಮಿಕೊಳ್ಳಲು ತಿರ್ಮಾನಿಸಿದೆ. ಆಯ್ದ ಹನ್ನೆರಡು ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆಯು ಒಂದು. ನಡೆದಾಡುವ ದೇವರೆಂದೇ ಖ್ಯಾತರಾಗಿ ಈ ನೆಲದ ನಕ್ಷತ್ರವಾಗಿ ಮಿನುಗಿ ಮರೆಯಾಗಿ ಹೋದರು ಕೂಡಾ  ಗುರು ಪೂಜ್ಯ ಪುಟ್ಟರಾಜರು  ನಮ್ಮ ನಿಮ್ಮೆಲ್ಲರ ಹೃದಯ ಗದ್ದುಗೆಯಲ್ಲಿ ಶಾಶ್ವತ ಸ್ಥಾನ ಹೊಂದಿದ್ದಾರೆ.ಎಲ್ಲರು ಸೇರಿ ಪೂಜ್ಯರ ಜನ್ಮ ಶತಮಾನೋತ್ಸವ ಸಂಭ್ರಮದಿಂದ ಆಚರಿಸೋಣ ಗುರು ಕೃಪೆಗೆ ಪಾತ್ರರಾಗೋಣ. 

------------------------------------------------------------------------------------------------------------
ಸಹಕರಿಸುವುದು ಹೇಗೆ 
ಈ ಸಮಿತಿಯ ಯಾವುದಾದರು ಒಂದು ಸದಸ್ಯತ್ವ ಪಡೆಯುವುದು, 
ತಮ್ಮ ಆಪ್ತಮಿತ್ರರನ್ನು ಸದಸ್ಯರನ್ನಾಗಿ ಮಾಡುವುದು. 
ಶತಮಾನೋತ್ಸವ ಆಚರಣೆಯನಾಯಕತ್ವ ವಹಿಸಿಕೊಂಡು ಸಕ್ರೀಯವಾಗಿ ಭಾಗವಹಿಸುವುದು,
ಪ್ರಾಯೋಜಕರನ್ನು ಮತ್ತು ದಾನಿಗಳನ್ನು ಒದಗಿಸುವದು.
------------------------------------------------------------------------------------------------------------ 
ಡಾ.ಪಂ.ಪು.ಸೆವಾಸಮಿತಿಯ ಸದಸ್ಯತ್ವ ಶುಲ್ಕವಿವರ : ಸಾಮಾನ್ಯ 250/-ರೂಪಾಯಿ, ಆಜೀವ 500/-ರೂಪಾಯಿ, ದಾನಿಗಳು 1000/-ರೂಪಾಯಿ, ಪೋಷಕರು 2500/-ರೂಪಾಯಿ, ಮಹಾಪೋಷಕರು 5000/-ರೂಪಾಯಿಗಳುಮಾತ್ರ. ನಿಗದಿಪಡಿಸಿದ ಸದಸ್ಯತ್ವ ಅರ್ಜಿ ನಮೂನೆಗಾಗಿ ಕಲಾಲೋಕ ಗದಗ ಹೆಸರಿಗೆ ಡಿ.ಡಿ.ಅಥವಾ ಚಕ್ ಕಳುಹಿಸಿ ಅರ್ಜಿ ನಮೂನೆ ಪಡೆಯಬಹುದು. ವಿಳಾಸ : ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಶ್ರೀಗಿರಿ ನಿವಾಸ ಪಂಚಾಕ್ಷರಿ ನಗರ 4ನೆಯ ಅಡ್ಡರಸ್ತೆ ಪಂಚಾಕ್ಷರಿ ನಗರ ಪೋಸ್ಟ ಬಾಕ್ಸ ನಂ,49.ಗದಗ-582101.ಕಳುಹಿಸಿ ಕೊಡಬಹುದು.ಮಾಹಿತಿಗಾಗಿ ಕಾರ್ಯಾಲದ ವೇಳೆಯಲ್ಲಿ (08372)220432 ಗೆ ಸಂಪರ್ಕಿಸಬಹುದು.ವಂದನೆಗಳೊಂದಿಗೆ ರಾಜ್ಯ ಸಂಚಾಲಕರು.

ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟಿ


ಪಂ. ಪುಟ್ಟರಾಜ ಕವಿ ಗವಾಯಿಗಳವರ ಜನ್ಮದಿನದ ಅಂಗವಾಗಿ
ಹಮ್ಮಿಕೊಂಡು ಬಂದ. ರಾಷ್ಟ್ರೀಯ ಮಟ್ಟದ ಸಂಗೀತ , ನೃತ್ಯ ಸಮ್ಮೇಳನದ
 ಸರ್ವಾಧ್ಯಕ್ಷರಾಗಿ ಗೌರವ ಸ್ವಿಕರಿಸಿದ ಸಂಗೀತ ದಿಗ್ಗಜರು 

ಪಂ.ರಾಜಗುರು ಗುರುಸ್ವಾಮಿ ಕಲಿಕೆರಿ ಗದಗ 
ಡಾ.ಶಾಮಲಾ ಜಿ ಭಾವೆ ಬೆಂಗಳೂರು 
ಡಾ.ಪಂ.ರಾಜಶೇಖರ ಮನ್ಸೂರ ಬೆಂಗಳುರು
ಡಾ. ಗಂಗೂಬಾಯಿ ಹಾನಗಲ್ ಹುಬ್ಬಳ್ಳಿ 
ಪಂ.ಮಾಧವ ಗುಡಿ ಧಾರವಾಡ

ಸಮ್ಮೇಳನಗಳ ಉದ್ಘಾಟಕರಾಗಿ ಆಗಮಿಸಿ
ಗುರುಕೃಪೆಗೆ ಪಾತ್ರರಾದ ಸನ್ಮಾನ್ಯರು

ಡಾ.ಸಂಪದಾ ಭಟ್ಟ ಬೆಂಗಳೂರು,
ಶ್ರೀ ಅಲ್ಲಮ ಪ್ರಭು ಪಾಟೀಲ ಗುಲಬರ್ಗಾ,
ಕರವೇ ರಾಜ್ಯಾಧ್ಯಕ್ಷ ಟಿ.ನಾರಾಯಣ ಗೌಡ ಬೆಂಗಳೂರು,
ನಾಟಕಕಾರ ಎಚ್.ಎನ್.ಹೂಗಾರ ಗದಗ,
ಚಿತ್ರನಟ ಮದನ ಪಟೇಲ ಬೆಂಗಳೂರು,

ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ
ಸಮ್ಮೇಳನಗಳ ಗೌರವ ಹೆಚ್ಚಿಸಿದ ಸಾಹಿತ್ಯ ದಿಗ್ಗಜರು

ಡಾ.ಜಿ.ಎಸ್.ಆಮೂರ ಧಾರವಾಡ
ಡಾ.ಪಂಚಾಕ್ಷರಿ ಹಿರೇಮಠ ಧಾರವಾಡ
ಡಾ.ಕಮಲಾ ಹಮ್ಮಿಗೆ ಧಾರವಾಡ
ಡಾ.ವೀರಣ್ಣ ರಾಜೂರ ಧಾರವಾಡ
ಡಾ.ಪ್ರದೀಪ ಕುಮಾರ ಹೆಬ್ರಿ ಮಂಡ್ಯ,
ಡಾ.ಚನ್ನವೀರ ಕಣವಿ ಧಾರವಾಡ
ಸಮಿತಿಯ ಗೌರವ ಹೆಚ್ಚಿಸಿದ್ದಾರೆ.