Pages

ಜೂನ್ 10, 2014

ಪುಣ್ಯ ಸ್ಮರಣೆಯ ಗುರು ಗುಣ ಗಾನ

‘ಪದ್ಮಭೂಷಣ’ ಪುಟ್ಟರಾಜ4ನೆ ಪುಣ್ಯಸ್ಮರಣೆ 
ಗುರು ಗುಣ ಗಾನ
ಸಂಗೀತ, ನೃತ್ಯ ಸಮಾವೇಶ - 2014

16 ಮತ್ತು 17 ದಿನಾಲು ಸಂಜೆ 4-30 ರಿಂದ 

ರಾತ್ರಿ 9-00 ರವರೆಗೆ 

ಮೊದಲದಿನ ಕವಿಗೋಷ್ಠಿ, ಸ್ಥಳೀಯ ಕಲಾವಿದರಿಂದ ಕಾವ್ಯಗಾಯನ,ನೃತ್ಯಪ್ರದರ್ಶನ ಎರಡನೆ ದಿನ ಅಭಿಮಾನಿ ಭಕ್ತರಿಗೆ ಸಮ್ಮಾನ, ಮತ್ತು ಆಮಂತ್ರಿತ ಕಲಾವಿದರಂದ ಶಾಸ್ತ್ರೀಯ ಸಂಗೀತ ನೃತ್ಯ ಪ್ರದರ್ಶನ ನಡೆಯುವುದು. ಕವಿಗೋಷ್ಠಿ , ಕಾವ್ಯಗಾಯನ, ನೃತ್ಯ ಪ್ರದರ್ಶನ ಸೇವೆ ಸಲ್ಲಿಸಲು ಯುವ ಉದಯೋನ್ಮುಖ ಕಲಾವಿದರು ತಮ್ಮ ಹೆಸರು ನೋದಾಯಿಸಿಕೊಳ್ಳಬಹುದು ಹೆಸರು ನೋದಾಯಿಸಿಕೊಳ್ಳಲು ಕೊನೆಯ ದಿನಾಂಕ: 30 - ಜುಲೈ - 2014 ನಿಮ್ಮ ಕವನ / ಹೆಸರು puttarajsevasamiti@gamil.com ಗೆ ಕಳುಹಿಸಿ ಕೊಡಿ

ವಚನ ಸಂಗೀತೋತ್ಸವ -೨೦೧೪

ಮಠ ಮಂದಿರದ ಪವಿತ್ರ ಪ್ರಾಂಗಣದಲ್ಲಿ
‘ ಗುರುಕುಮಾರ ಪಂಚಾಕ್ಷರೇಶ್ವರ ’
ವಚನ ಸಂಗೀತೋತ್ಸವ -೨೦೧೪
(ವಚನಗಳ ನಿರ್ವಚನ, ಗಾಯನ ಮತ್ತು ಸನ್ಮಾನ )
------------------------------
ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರು ಈ ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿಕೊಳ್ಳುವ, ಅವರ ಜೀವನ ಸಾಧನೆ ಸಂದೇಶವನ್ನು ಮನೆ;ಮನಗಳಿಗೆ ತಲುಪಿಸುವ ಸರಳ, ಸುಂದರ, ಅರ್ಥಪೂರ್ಣ, ಕಾರ್ಯಕ್ರಮ ಇದಾಗಿದೆ.
ಈ ಕಾರ್ಯಕ್ರಮವು ರಾಜ್ಯದ ಮಠ ಮಂದಿರದ ಪವಿತ್ರ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲಾಗುವುದು. ೩ ತಾಸಿನ ಈ ಕಾರ್ಯಕ್ರಮದಲ್ಲಿ,‘ಪೂಜ್ಯರ ಭಾವಚಿತ್ರದ ಪೂಜೆ’ ‘ಗುರು ಪ್ರಭಾ ವಚನ ಪ್ರಾರ್ಥನೆ’ ೪೫ ನಿಮಿಷದ ‘ಪುಟ್ಟರಾಜರ ಜೀವನ ದರ್ಶನ ಉಪನ್ಯಾಸ’ ಸ್ಥಳೀಯ ಗುರುಬಂಧು ಕಲಾವಿದರಿಂದ ಮತ್ತು ನಮ್ಮ ಸೇವಾ ಸಮಿತಿಯ ಪಂ. ಪುಟ್ಟರಾಜ ಸಂಗೀತ ಸಭಾ ಸಂಗೀತ ಕಲಾ ತಂಡದಿಂದ ಹಾಗೂ ಒಬ್ಬ ಅಥವಾ ಇಬ್ಬರು ಪ್ರಶಿದ್ಧ ಗಾಯಕರಿಂದ ‘ವಚನ ಗಾಯನ’ ಏರ್ಪಡಿಸಲಾಗುತ್ತದೆ. 

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಮ್ಮ ಸಮಿತಿಯ ತಂಡಕ್ಕೆ ಯಾವುದೇ ಸಂಭಾವನೆ ನೀಡಬೇಕಾಗಿಲ್ಲ ಆದರೆ ಪ್ರಯಾಣ ಭತ್ತೆ ಪ್ರಸಾದ ವ್ಯೆವಸ್ಥೆ ಮತ್ತು ಅವಶ್ಯವೆನಿಸಿದಲ್ಲಿ ವಸತಿ ಸೌಲಭ್ಯ ವದಗಿಸ ಬೇಕಾಗುತ್ತದೆ. ಈ ಕಾರ್ಯಕ್ರಮದ ವೇದಿಕೆಯ ಹಿಂಭಾಗದ ಬ್ಯಾನರ, ಹಿರಿಯ ಸಂಗೀತ ಸಾಧಕ ರೋಬ್ಬರಿಗೆ ನೀಡಲಾಗುವ ‘ ಗುರುಕೃಪಾ ಸತ್ಕಾರ ’ದ ಸಲಕರಣೆಗಳು ನೆನಪಿನ ಕಾಣಿಕೆ ಸಮಿತಿಯೇ ಹೊಂದಿಸಿಕೊಳ್ಳುತ್ತದೆ. ಇದಕ್ಕಾಗಿ ಸಮಿತಿಯು ಸ್ಥಳೀಯ ಸಂಘ ಸಂಸ್ಥೆ ಗಳ ಸಹಕಾರ ಪಡೆದುಕೊಳ್ಳಲು ಮುಕ್ತ ಅವಕಾಶ ಹೊಂದಿದೆ. ಕೆಳುಗರಾಗಿ ಬಂದ ಅಭಿಮಾನಿ ಭಕ್ತರಿಗೆ ಕಾರ್ಯಕ್ರಮದ ನಂತರ ಪ್ರಸಾದ ವ್ಯೆವಸ್ಥೆ ಮಾಡಬೇಕಾಗುವುದು.ಈ ಕಾರ್ಯಕ್ರಮ ಪೂರ್ಣಿಮೆಯ ದಿನ ಸಂಜೆ ೫-೩೦ ರಿಂದ ೮- ೩೦ ರವರೆಗೆ ನಡೆಯುತ್ತದೆ. ಒಟ್ಟು ೧೨ ಕಾರ್ಯಕ್ರಮಗಳು ಆಯ್ದ ಮಠ ಮಂದಿರದ ಪವಿತ್ರ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದೆ. 

ಮಠ ಮತ್ತು ಮಂದಿರದ ಆಡಳಿತ ಮಂಡಳಿಯಿಂದ ನಾವು ನೀರಿಕ್ಷಿಸುವ ಕನಿಷ್ಟ ಸೌಲಭ್ಯಗಳು 

೧. ಸಭಾ ಭವನ, ೨. ಧ್ವನಿವರ್ಧಕ, ೩. ಆಮಂತ್ರಣ ಪತ್ರಿಕೆ ೪. ಆಮಂತ್ರಿತ ಕಲಾವಿದರ ಗೌರವ ಸಂಭಾವನೆ ಮತ್ತು ಊಟ ವಸತಿ. ೫. ನಮ್ಮ ಸಮಿತಿಯ ತಂಡದ ಕಲಾವಿದರ ಪ್ರಯಾಣ ಭತ್ತೆ ಮತ್ತು ಉಟ ವಸತಿ ೬.ಕಾಯಕ್ರಮದ ನಂತರ ಪ್ರಸಾದ ವ್ಯೆವಸ್ಥೆ. ಆಮಂತ್ರಣ ಪತ್ರಿಕೆಯಲ್ಲಿ ಮತ್ತು ಸ್ಟೇಜ್ ಬ್ಯಾನರನಲ್ಲಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ-ಬೆಂಗಳೂರು ಹಾಗು ....... ಮಠ, ಮಂದಿರದ ಸಂಯುಕ್ತ ಆಶ್ರಯದಲ್ಲಿ ಎಂದು ಮುದ್ರಿಸಲಾಗುವುದು ಅದೇ ರೀತಿ ಸ್ಥಳೀಯ ಸಂಘ ಸಂಸ್ಥೆ ಪ್ರಾಯೋಜನ ನೀಡಿದರೆ ಆಮಂತ್ರಣ ಪತ್ರಿಕೆಯ ಬೆನ್ನು ಪುಟದಲ್ಲಿ ಸಹಕಾರ ಎಂದು ಅವರ ಹೆಸರು ಪ್ರಕಟಿಸಲಾಗುವುದು ಇದರಲ್ಲಿ ಬದಲಾವಣೆಗೆ ಅವಕಾಶವಿದೆ. ಈ ಕುರಿತು ನಮ್ಮದೇ ಅಂತಿಮವಲ್ಲ ಸಮಯ ಸಂಧರ್ಭಕ್ಕೆ ತಕ್ಕಂತೆ ಬದಲಾವಣೆಗೆ ಮುಕ್ತ ಅವಕಾಶವಿದೆ. 

ರಾಜ್ಯ ಸಂಚಾಲಕರು: ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ-ಬೆಂಗಳೂರು 

ಮನೆ,ಮನದ ಅಂಗಳದಲ್ಲಿ ಸಂಗೀತ

ಮನೆ,ಮನದ ಅಂಗಳದಲ್ಲಿ 
ಸಂಗೀತ ಕಾರ್ಯಕ್ರಮ
‘ಗಾನಯೋಗಿ ಆರಾಧನೆ’
(ಕಿರು ಉಪನ್ಯಾಸ, ವಚನ ಗಾಯನ)

ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರು ಈ ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿಕೊಳ್ಳುವ, ಅವರ ಜೀವನ ಸಾಧನೆ ಸಂದೇಶವನ್ನು ಮನೆ;ಮನಗಳಿಗೆ ತಲುಪಿಸುವ ಸರಳ, ಸುಂದರ, ಅರ್ಥಪೂರ್ಣ, ಸಂಸ್ಕಾರಯುತ ಕಾರ್ಯಕ್ರಮ ಇದಾಗಿದೆ. 

ಈ ಕಾರ್ಯಕ್ರಮವು ರಾಜ್ಯದ ತುಂಬ ಹರಡಿಕೊಂಡಿರುವ ಪೂಜ್ಯರ ಅಭಿಮಾನಿ ಭಕ್ತರ ಮನೆಯಲ್ಲಿ ಅವರ ದಾಸೋಹ ಸೇವೆಯಲ್ಲಿ ಹಮ್ಮಿಕೊಳ್ಳಲಾಗುವುದು. ಒಂದರಿಂದ ಒಂದೂವರೆ ತಾಸಿನ ಈ ಕಾರ್ಯಕ್ರಮದಲ್ಲಿ,‘ಪೂಜ್ಯರ ಭಾವಚಿತ್ರದ ಪೂಜೆ ’ ‘ ಗುರು ಪ್ರಭಾ ವಚನ ಪ್ರಾರ್ಥನೆ ’ಹದಿನೈದು ರಿಂದ ಇಪ್ಪತ್ತು ನಿಮಿಷದ ‘ಗುರು ಪುಟ್ಟರಾಜರ ಜೀವನ ದರ್ಶನ’ ಕಿರು ಉಪನ್ಯಾಸ, ಸ್ಥಳೀಯ ಗುರುಬಂಧು ಕಲಾವಿದರಿಂದ ಮತ್ತು ನಮ್ಮ ಸೇವಾ ಸಮಿತಿಯ ‘ಪಂ. ಪುಟ್ಟರಾಜ ಸಂಗೀತ ಸಭಾ’ ಸಂಗೀತ ಕಲಾ ತಂಡದಿಂದ ‘ವಚನ ಗಾಯನ’ ಏರ್ಪಡಿಸಲಾಗುತ್ತದೆ. 

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ತಂಡಕ್ಕೆ ಯಾವುದೇ ಸಂಭಾವನೆ ನೀಡಬೇಕಾಗಿಲ್ಲ ಆದರೆ ಪ್ರಯಾಣ ಭತ್ತೆ ಪ್ರಸಾದ ವ್ಯೆವಸ್ಥೆ ಮತ್ತು ಅವಶ್ಯವೆನಿಸಿದಲ್ಲಿ ವಸತಿ ಸೌಲಭ್ಯ ವದಗಿಸ ಬೇಕಗುತ್ತದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮುದ್ರಣ, ವೇದಿಕೆಯ ಹಿಂಭಾಗದ ಬ್ಯಾನರ, ಆರಾಧನೆ ಭಕ್ತಿ ಸೇವೆ ವಹಿಸಿಕೊಂಡ ಕುಟುಂಬದ ಹಿರಿಯ ರೋಬ್ಬರಿಗೆ ನೀಡಲಾಗುವ ‘ಗುರುಕೃಪಾ ಸತ್ಕಾರ’ದ ಸಲಕರಣೆಗಳು ಸಮಿತಿಯೇ ಹೊಂದಿಸಿಕೊಳ್ಳುತ್ತದೆ. ಕೆಳುಗರಾಗಿ ಬಂದ ಅಭಿಮಾನಿ ಭಕ್ತರಿಗೆ ಅರ್ಧ ಕಪ್ ಟೀ ಎರಡು ಬಿಸ್ಕತ್ ನೀಡಿ ಉಪಚರಿಸಿದರೆ ಸಾಕು. 

ಸಂಗೀತ ಸಾಹಿತ್ಯ ಶಿಕ್ಷಣ ಸಮಾಜ ಸೇವೆ ಬಹು ಮುಖ್ಯವಾಗಿ ಅಂಧ ಅನಾಥರ ಸೇವೆ ಸಲ್ಲಿಸಿ, ಮರೆಯದ ಮಹಾನ್ ಚೇತನದ ಸಾಧನೆಯನ್ನು ಮುಂದಿನ ಪೀಳಿಗೆ ಮರೆಯದಂತೆ ಸ್ಮರಿಸಿಕೊಳ್ಳುವ ಮೂಲಕ, ಪೂಜ್ಯರಿಗೆ ಸಲ್ಲಿಸುವ ಸಣ್ಣ ಗೌರವ ಇದಾಗಿದೆ. ಈ ಕಾರ್ಯಕ್ರಮ ಪ್ರತಿ ತಿಂಗಳ ಎರಡನೇ ಶನಿವಾರ ಸಂಜೆ ೬-೩೦ ರಿಂದ ೮-೦೦ ರವರೆಗೆ ನಡೆಯುತ್ತದೆ. ಈ ಕಾರ್ಯಕ್ರಮದ ಸೇವಾಭಾಗ್ಯ ಕೇವಲ ೧೨ ಜನರಿಗೆ ಮಾತ್ರ ಲಭ್ಯವಾಗಲಿದ್ದು ಮೊದಲು ಬಂದವರಿಗೆ ಮೊದಲು ಅವಕಾಸ ನೀಡಲಾಗುವುದು. 

ಬನ್ನಿ ನಾವೂ ಸೇರಿ ಗುರುಸೇವೆ ಮಾಡೋಣ ಗುರು ಕೃಪೆ ಹೊಂದೋಣ