ಮಠ ಮಂದಿರದ ಪವಿತ್ರ ಪ್ರಾಂಗಣದಲ್ಲಿ
‘ ಗುರುಕುಮಾರ ಪಂಚಾಕ್ಷರೇಶ್ವರ ’
ವಚನ ಸಂಗೀತೋತ್ಸವ -೨೦೧೪
(ವಚನಗಳ ನಿರ್ವಚನ, ಗಾಯನ ಮತ್ತು ಸನ್ಮಾನ )
------------------------------
ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರು ಈ ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿಕೊಳ್ಳುವ, ಅವರ ಜೀವನ ಸಾಧನೆ ಸಂದೇಶವನ್ನು ಮನೆ;ಮನಗಳಿಗೆ ತಲುಪಿಸುವ ಸರಳ, ಸುಂದರ, ಅರ್ಥಪೂರ್ಣ, ಕಾರ್ಯಕ್ರಮ ಇದಾಗಿದೆ.
ಈ ಕಾರ್ಯಕ್ರಮವು ರಾಜ್ಯದ ಮಠ ಮಂದಿರದ ಪವಿತ್ರ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲಾಗುವುದು. ೩ ತಾಸಿನ ಈ ಕಾರ್ಯಕ್ರಮದಲ್ಲಿ,‘ಪೂಜ್ಯರ ಭಾವಚಿತ್ರದ ಪೂಜೆ’ ‘ಗುರು ಪ್ರಭಾ ವಚನ ಪ್ರಾರ್ಥನೆ’ ೪೫ ನಿಮಿಷದ ‘ಪುಟ್ಟರಾಜರ ಜೀವನ ದರ್ಶನ ಉಪನ್ಯಾಸ’ ಸ್ಥಳೀಯ ಗುರುಬಂಧು ಕಲಾವಿದರಿಂದ ಮತ್ತು ನಮ್ಮ ಸೇವಾ ಸಮಿತಿಯ ಪಂ. ಪುಟ್ಟರಾಜ ಸಂಗೀತ ಸಭಾ ಸಂಗೀತ ಕಲಾ ತಂಡದಿಂದ ಹಾಗೂ ಒಬ್ಬ ಅಥವಾ ಇಬ್ಬರು ಪ್ರಶಿದ್ಧ ಗಾಯಕರಿಂದ ‘ವಚನ ಗಾಯನ’ ಏರ್ಪಡಿಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಮ್ಮ ಸಮಿತಿಯ ತಂಡಕ್ಕೆ ಯಾವುದೇ ಸಂಭಾವನೆ ನೀಡಬೇಕಾಗಿಲ್ಲ ಆದರೆ ಪ್ರಯಾಣ ಭತ್ತೆ ಪ್ರಸಾದ ವ್ಯೆವಸ್ಥೆ ಮತ್ತು ಅವಶ್ಯವೆನಿಸಿದಲ್ಲಿ ವಸತಿ ಸೌಲಭ್ಯ ವದಗಿಸ ಬೇಕಾಗುತ್ತದೆ. ಈ ಕಾರ್ಯಕ್ರಮದ ವೇದಿಕೆಯ ಹಿಂಭಾಗದ ಬ್ಯಾನರ, ಹಿರಿಯ ಸಂಗೀತ ಸಾಧಕ ರೋಬ್ಬರಿಗೆ ನೀಡಲಾಗುವ ‘ ಗುರುಕೃಪಾ ಸತ್ಕಾರ ’ದ ಸಲಕರಣೆಗಳು ನೆನಪಿನ ಕಾಣಿಕೆ ಸಮಿತಿಯೇ ಹೊಂದಿಸಿಕೊಳ್ಳುತ್ತದೆ. ಇದಕ್ಕಾಗಿ ಸಮಿತಿಯು ಸ್ಥಳೀಯ ಸಂಘ ಸಂಸ್ಥೆ ಗಳ ಸಹಕಾರ ಪಡೆದುಕೊಳ್ಳಲು ಮುಕ್ತ ಅವಕಾಶ ಹೊಂದಿದೆ. ಕೆಳುಗರಾಗಿ ಬಂದ ಅಭಿಮಾನಿ ಭಕ್ತರಿಗೆ ಕಾರ್ಯಕ್ರಮದ ನಂತರ ಪ್ರಸಾದ ವ್ಯೆವಸ್ಥೆ ಮಾಡಬೇಕಾಗುವುದು.ಈ ಕಾರ್ಯಕ್ರಮ ಪೂರ್ಣಿಮೆಯ ದಿನ ಸಂಜೆ ೫-೩೦ ರಿಂದ ೮- ೩೦ ರವರೆಗೆ ನಡೆಯುತ್ತದೆ. ಒಟ್ಟು ೧೨ ಕಾರ್ಯಕ್ರಮಗಳು ಆಯ್ದ ಮಠ ಮಂದಿರದ ಪವಿತ್ರ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದೆ.
ಮಠ ಮತ್ತು ಮಂದಿರದ ಆಡಳಿತ ಮಂಡಳಿಯಿಂದ ನಾವು ನೀರಿಕ್ಷಿಸುವ ಕನಿಷ್ಟ ಸೌಲಭ್ಯಗಳು
೧. ಸಭಾ ಭವನ, ೨. ಧ್ವನಿವರ್ಧಕ, ೩. ಆಮಂತ್ರಣ ಪತ್ರಿಕೆ ೪. ಆಮಂತ್ರಿತ ಕಲಾವಿದರ ಗೌರವ ಸಂಭಾವನೆ ಮತ್ತು ಊಟ ವಸತಿ. ೫. ನಮ್ಮ ಸಮಿತಿಯ ತಂಡದ ಕಲಾವಿದರ ಪ್ರಯಾಣ ಭತ್ತೆ ಮತ್ತು ಉಟ ವಸತಿ ೬.ಕಾಯಕ್ರಮದ ನಂತರ ಪ್ರಸಾದ ವ್ಯೆವಸ್ಥೆ. ಆಮಂತ್ರಣ ಪತ್ರಿಕೆಯಲ್ಲಿ ಮತ್ತು ಸ್ಟೇಜ್ ಬ್ಯಾನರನಲ್ಲಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ-ಬೆಂಗಳೂರು ಹಾಗು ....... ಮಠ, ಮಂದಿರದ ಸಂಯುಕ್ತ ಆಶ್ರಯದಲ್ಲಿ ಎಂದು ಮುದ್ರಿಸಲಾಗುವುದು ಅದೇ ರೀತಿ ಸ್ಥಳೀಯ ಸಂಘ ಸಂಸ್ಥೆ ಪ್ರಾಯೋಜನ ನೀಡಿದರೆ ಆಮಂತ್ರಣ ಪತ್ರಿಕೆಯ ಬೆನ್ನು ಪುಟದಲ್ಲಿ ಸಹಕಾರ ಎಂದು ಅವರ ಹೆಸರು ಪ್ರಕಟಿಸಲಾಗುವುದು ಇದರಲ್ಲಿ ಬದಲಾವಣೆಗೆ ಅವಕಾಶವಿದೆ. ಈ ಕುರಿತು ನಮ್ಮದೇ ಅಂತಿಮವಲ್ಲ ಸಮಯ ಸಂಧರ್ಭಕ್ಕೆ ತಕ್ಕಂತೆ ಬದಲಾವಣೆಗೆ ಮುಕ್ತ ಅವಕಾಶವಿದೆ.
ರಾಜ್ಯ ಸಂಚಾಲಕರು: ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ-ಬೆಂಗಳೂರು