ಜೂನ್ 15, 2014

ನಿಮ್ಮ ಸಹಕಾರವೆ ನಮಗೆ ಶ್ರೀರಕ್ಷೆ

ನಿಮ್ಮ ಸಹಕಾರವೆ ನಮಗೆ ಶ್ರೀರಕ್ಷೆ 
ಶ್ರೀ ವಿಶ್ವನಾಥ ರಾಮನಕೊಪ್ಪ 
ಅಧ್ಯಕ್ಷರು:ಡಾ.ಪಂ.ಸೇವಾ ಸಮಿತಿ ಗದಗ

ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗವಾದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಯ ದಶಮಾನೋತ್ಸವ ಮತ್ತು ಪೂಜ್ಯ ಗುರು ಪುಟ್ಟರಾಜರ ಜನ್ಮಶತಮಾನೋತ್ಸವ ವರ್ಷಾಚರಣೆ ಅಂಗವಾಗಿ, ಸಮಿತಿಯ ಹಿಂದಿನ ಕಾರ್ಯಕ್ರಮಗಳಾದ ‘ಕನ್ನಡ ಸಂಸ್ಕೃತಿ ಸಂಭ್ರಮ’ ಮಾರ್ಚ ತಿಂಗಳು ಬೆಂಗಳೂರಿನಲ್ಲಿ, ‘ನಾಡೋಜ ಕವಿ ಪುಟ್ಟರಾಜ ಸಾಹಿತ್ಯೋತ್ಸವ ’ಕನ್ನಡ ಪರ ಸಾಂಸ್ಕೃತಿಕ ಸಂಘಟನೆಗಳ ಸಹಕಾರದೊಂದಿಗೆ ಆಯ್ದ ಯಾವುದಾದರು ಜಿಲ್ಲೆಯಲ್ಲಿ , ‘ಗುರು ಗುಣ ಗಾನ ’ ಸಪ್ಟೆಂಬರ ೧೭ ರಂದು ಗದಗನಲ್ಲಿ ಹಮ್ಮಿಕೊಳ್ಳುತ್ತ ಬಂದಿರುವ ಕಾರ್ಯಕ್ರಮಗಳೊಂದಿಗೆ, ಈ ವರ್ಷ ಮಾತ್ರ ಹಮ್ಮಿಕೊಳ್ಳುವ ಮನೆ ಮನದ ಅಂಗಳದಲ್ಲಿ ‘ಗಾನಯೋಗಿ ಆರಾಧನೆ ‘ ತಿಂಗಳ ೨ನೆಯ ಶನಿವಾರದ ವಚನ ಸಂಗೀತ ಕಾರ್ಯಕ್ರಮ. ಪ್ರತಿ ತಿಂಗಳು ಪೂರ್ಣಿಮೆ ಯಂದು ಮಠ ; ಮಂದಿರದ ಆವರಣದಲ್ಲಿ ಗುರುಕುಮಾರ ಪಂಚಾಕ್ಷರೇಶ್ವರ ‘ವಚನ ಸಂಗೀತೋತ್ಸವ ’ ವರ್ಷಾಚರಣೆಯ ವಿಶೇಷ ಕಾರ್ಯಕ್ರಮಗಳು ರಾಜ್ಯಾದ್ಯಂತ ಅಭಿಮಾನಿ ಭಕ್ತರ ಮನೆಯಲ್ಲಿ ಆಯ್ದ ಮಠ ಮಂದಿರಗಳಲ್ಲಿ ಹಮ್ಮಿಕೊಳ್ಳಲು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ) ಗದಗ ಕೇಂದ್ರ ಕಾರ್ಯ ಕಾರಣಿ ಮಂಡಳಿಯು ಈ ಬಗ್ಗೆ ಅಂತಿಮ ತಿರ್ಮಾನ ಕೈಗೊಂಡು ಅಧಿಕೃತ ಗೊಳಿಸಿದೆ . ಇದೇ ಸಂಧರ್ಭದಲ್ಲಿ ರಾಜ್ಯ ಘಟಕ ಅಸ್ತಿತ್ವಕ್ಕೆ ತರುವ ಉದ್ದೇಶದಿಂದ ಶ್ರೀ ಚನ್ನವೀರ ಸ್ವಾಮೀ ಹಿರೇಮಠ ಶಾಸ್ತ್ರೀ ಕಡಣಿ ಇವರನ್ನು ರಾಜ್ಯ ಸಂಚಾಲಕರನ್ನಾಗಿ ನೇಮಕ ಮಾಡಿ ರಾಜ್ಯ ಕಾರ್ಯಕಾರಣಿ ಮಂಡಳಿಗೆ ಪದಾಧಿಕಾರಿಗಳ ಆಯ್ಕೆಮಾಡಿ ಪಟ್ಟಿ ಸಿದ್ದಪಡಿಸಿ ಕೇಂದ್ರ ಸಮಿತಿಗೆ ವರದಿ ಮಾಡಿಕೊಳ್ಳಲು ತಿಳಿಸಲಾಗಿತ್ತು, ಸುಮಾರು ೪ ತಿಂಗಳಿಂದ ರಾಜ್ಯದ ಅಭಿಮಾನಿ ಭಕ್ತರ ಸಂಘಟನೆಗಾಗಿ ಪ್ರಯತ್ನಿಸಿ, ರಾಜ್ಯ ಕಾರ್ಯ ಕಾರಣಿ ಮಂಡಳಿಯ ಪದಾಧಿಕಾರಿಗಳ ಪಟ್ಟಿ ಸಿದ್ದಪಡಿಸಿ ಕೇಂದ್ರ ಸಮಿತಿಗೆ ನೀಡಿದ್ದಾರೆ. ಈ ಪದಾಧಿಕಾರಿ ಪಟ್ಟಿಗೆ ಕೇಂದ್ರ ಸಮಿತಿ ಅನುಮೋದನೆ ನೀಡ ಬೇಕಾಗಿದ್ದು, ದಿನಾಂಕ ೧೭ ಜೂನ ೨೦೧೪ ರಂದು ನಡೆಯುವ ಕಾರ್ಯಕಾರಣಿ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗುವುದು. ಇದೆ ಸಂಧರ್ಭದಲ್ಲಿ ರಾಜ್ಯ ಕಾರ್ಯ ಕಾರಣಿ ಮಂಡಳಿ ಅಸ್ತಿತ್ವಕ್ಕೆ ಬಂದ ದಿನದಿಂದ ರಾಜ್ಯ ಸಂಚಾಲಕರ ಹುದ್ದೆ ಮುಂದುವರಿಸಲು ಅವಕಾಶ ವಿಲ್ಲದ ಕಾರಣ .ಶ್ರೀ ಕಡಣಿ ಶಾಸ್ತ್ರೀ ಯವರನ್ನು ಕೇಂದ್ರ ಸಮಿತಿಯ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯ ಸಮಿತಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದ ದಿನದಿಂದಲೇ ಕೇಂದ್ರ ಸಂಚಾಲರ ನೇಮಕಾತಿ ಆದೇಶವು ಜಾರಿ ಬರುತ್ತದೆ. ಕೇಂದ್ರ ಸಮಿತಿಯ ಆಡಳಿತಾತ್ಮಕ ಹೊಣೆ ಯೊಂದಿಗೆ ರಾಜ್ಯ ಘಟಕಗಳ ಮುಖ್ಯಸ್ಥರಾಗಿ, ರಾಜ್ಯ ಉಸ್ತುವಾರಿಯನ್ನು ವಹಿಸಿಕೊಂಡು ರಾಜ್ಯದ ಮತ್ತು ಹೊರ ರಾಜ್ಯದ ಅಭಿಮಾನಿ ಭಕ್ತರನ್ನು ಈ ಸಮಿತಿಯ ತೆಕ್ಕೆಗೆ ತಂದು ಕೊಳ್ಳುವ ಪ್ರಯತ್ನ ಶ್ರೀ ಶಾಸ್ತ್ರೀಗಳು ಮುಂದುವರಿಸಲಿದ್ದಾರೆ . ತಮ್ಮೆಲ್ಲರ ಸಹಕಾರ ದಿಂದ ಮಾತ್ರ ನಮ್ಮ ಕನಸು ನನಸಾಗಲು ಸಾಧ್ಯ ಬನ್ನಿ ನಾವು ನೀವೆಲ್ಲ ಸೇರಿ ಗುರು ಸೇವೆ ಮಾಡೋಣ.

ಇಂತಿ ತಮ್ಮ ವಿಶ್ವಾಸಿ ವಿಶ್ವನಾಥ ರಾಮನಕೊಪ್ಪ ಸಂಸ್ಥಾಪ ಅದ್ಯಕ್ಷರು ಪುಟ್ಟರಾಜರ ಅಭಿಮಾನಿ ಭಕ್ತರ ಮಹಾ ಬಳಗ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ)  ಗದಗ