ಜೂನ್ 18, 2014

ಸಾವಿರದ ಶರಣು ಸಮರ್ಪಣೆ


ಪೂಜ್ಯ ಗುರು ಪುಟ್ಟರಾಜರ 

ಜನ್ಮ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ 

ಗುರು ಪುಟ್ಟರಾಜರಿಗೆ 

ಸಾವಿರದ ಶರಣು ಸಮರ್ಪಣೆ

ಡಿಸೆಂಬರ - 6 - 2014 . ಹುಬ್ಬಳ್ಳಿ.

ಈ ಸಮಾರಂಭದಲ್ಲಿ ಈ ಫೆಸ್ ಬುಕ್ ಅಭಿಮಾನಿ ಭಕ್ತರನ್ನು ಒಳಗೊಂಡಂತೆ ಸಮಿತಿಯ ಸದಸ್ಯ 101 ಜನ ಪೂಜ್ಯರ ಅಭಿಮಾನಿ ಭಕ್ತರಿಗೆ “ಗುರು ಪುಟ್ಟರಾಜ ಕೃಪಾ ಸಮ್ಮಾನ” ಗೌರವ ಅಭಿನಂದನಾ ಪ್ರಶಸ್ತಿ ಸಾವಿರದ ಸವಿ ನೆನಪು ನೀಡಲು ನಿರ್ಧರಿಸಿದ್ದೇವೆ. ಈ ಪ್ರಶಸ್ತಿ ಸ್ವೀಕರಿಸಲು ಆಸಕ್ತರಾಗಿರುವ ಸಮಿತಿಯ ಸದಸ್ಯರು ಅಥವಾ ಸದಸ್ಯರಾಗಲು ಒಪ್ಪುವವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ೧. ಸಮಿತಿಯ ಸದಸ್ಯರಾಗಿರಬೇಕು ಅಥವಾ ಸದಸ್ಯರಾಗಲು ಬದ್ದರಾಗುರಬೇಕು. ೨. ನೇತ್ರದಾನ ಮಾಡಿರಬೇಕು ಅಥವಾ ನೇತ್ರದಾನ ಮಾಡಲು ಒಪ್ಪಿಕೊಳ್ಳಬೇಕು. ೩. ಪುಟ್ಟರಾಜರ ವಚನ ಸಾಹಿತ್ಯ ಕೃತಿ ಕನಿಷ್ಠ ೫೦ ಪುಸ್ತಕ ಉಚಿತ ವಿತರಣೆ ಮಾಡಿದವರಾಗಿರಬೇಕು (ಆ ಕೃತಿಗಳು ನಮ್ಮ ಸಮಿತಿಯ ಪ್ರಕಟಣೆ ಯಾಗಿರಬೇಕು) ಅಥವಾ  ವಿತರಣೆ ಮಾಡುವುದಕ್ಕೆ ಬದ್ದರಾಗಿರಬೇಕು.
ಈ ಸೇವೆ ನಿಮ್ಮಿಂದ ಸಾಧ್ಯವೇ ? ಸಾಧ್ಯವಾಗುವದಾದರೆ ಇಂದೆ ನಿಮ್ಮಹೆಸರು ನೊಂದಾಯಿಸಿಕೊಳ್ಳಿ ಈ ಅಪೂರ್ವ ಸಾವಿರದ ಸುವರ್ಣ ಸವಿ ನೆನಪು ನಿಮ್ಮದಾಗಿಸಿಕೊಳ್ಳಿ ಮಾಹಿತಿಗಾಗಿ ನಮ್ಮ puttarajasevasamiti@gamil.com ಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ. ವಂದನೆಗಳೊಂದಿಗೆ ಶ್ರೀ ವೇ. ಚನ್ನವೀರಸ್ವಾಮಿ ಹಿರೇಮಠ ಕಡಣಿ ಸಂಚಾಲಕರು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ) ಕೇಂದ್ರ ಸಮಿತಿ ಗದಗ.

ಆತ್ಮೀಯ ಅಭಿಮಾನಿ ಭಕ್ತರೆ 

ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಜನ್ಮ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಡಾ. ಪಂ. ಪುಟ್ಟರಾಜ ಪುಟ್ಟರಾಜ ಸೇವಾ ಸಮಿತಿಯು, ಮನೆ ಮನೆಯಲ್ಲಿ “ಗಾನಯೋಗಿ ಆರಾಧನೆ ” ಮಠ ಮಂದಿರದ ಪ್ರಾಂಗಣದಲ್ಲಿ “ಗುರು ಕುಮಾರ ಪಂಚಾಕ್ಷರಿ ವಚನ ಸಂಗೀತೋತ್ಸವ ”, ಕನ್ನಡ ಪರ ಸಂಘಟನೆಗಳ ಸಹ ಯೋಗದೊಂದಿಗೆ ‘ನಾಡೋಜ ’ ಕವಿ ಪುಟ್ಟರಾಜ ಸಾಹಿತೋತ್ಸವ, ಅಭಿಮಾನಿ ಭಕ್ತರಿಂದ ಅಭಿಮಾನಿ ಭಕ್ತರಿಗಾಗಿ “ಗುರು ಪುಟ್ಟರಾಜರಿಗೆ ಸಾವಿರದ ಶರಣು ಸಮರ್ಪಣೆ ” ಪುಟ್ಟರಾಜರ ನಾಲ್ಕನೆಯ ಪುಣ್ಯ ಸ್ಮರಣೆಯ “ ಗುರು ಗುಣ ಗಾನ ” ಶಾಸ್ತ್ರೀಯ ಸಂಗೀತ ಸಮ್ಮೇಳನ, “ ಕಣ್ಣಿದ್ದರೇನಂತೆ ” ಪುಟ್ಟರಾಜರ ವಚನಗಳ ಹೊಳಹುಗಳು ಪುಸ್ತಕ ಪ್ರಕಟಣೆ, ಪಂಡಿತ ಪುಟ್ಟರಾಜ ಪ್ರಕಾಶನ ಸಂಸ್ಥೆ ಸ್ಥಾಪನೆ, ಸಮಿತಿಯ ಮುಖವಾಣಿ ‘ ಕನ್ನಡ ಮಾಸ ಪತ್ರಿಕೆ ’ ಪ್ರಕಟಣೆ , ಪುಟ್ಟರಾಜರ ಜನುಮ ದಿನದಂಗವಾಗಿ “ಕನ್ನಡ ಸಂಸ್ಕೃತಿ ಸಂಭ್ರಮ ” ಸಂಗೀತ ನೃತ್ಯ ಸಮ್ಮೇಳನ, ಪ್ರತಿ ತಿಂಗಳು ಎರಡು ಕಾರ್ಯಕ್ರಮ ರಾಜ್ಯದ ತುಂಬ ಹಮ್ಮಿಕೊಳ್ಳಲು ಕ್ರಿಯಾಯೋಜನೆ ಸಿದ್ದಪಡಿಸಿದೆ. ಈ ಅಪೂರ್ವ ಕಾರ್ಯಕ್ರಮ ನಿಮ್ಮಿಂದ ನಿಮಗಾಗಿ. ಬನ್ನಿ, ತನು ಮನ ಧನದಿಂದ ನಮ್ಮೊಂದಿಗೆ ಕೈಜೋಡಿಸಿ ಗುರುಸೆವೆಗೆ ಸಹಕರಿಸಿ. ಈ ಕಾರ್ಯಕ್ರಮಕ್ಕೆ ಧನ ಸಹಾಯ ನೀಡುವವರು ಕಲಾಲೋಕ ಗದಗ ಹೆಸರಲ್ಲಿ D.D. ಅಥವಾ ಚೆಕ್ಕ್ ಮೂಲಕ ಮಾತ್ರ ಸಂದಾಯ ಮಾಡಬೇಕು D.D. ಅಥವಾ ಚೆಕ್ ಸಂಚಾಲಕರು ಪುಟ್ಟರಾಜ ಸೇವಾ ಸಮಿತಿ (ರಿ) ಪಂಚಾಕ್ಷರಿ ನಗರ ೪ನೆ ಅಡ್ಡರಸ್ತೆ ಗದಗ -582101 ಇಲ್ಲಿಗೆ ಕಳಿಸಿಕೊಡಬಹುದು. ಹೆಚ್ಚಿನ ಮಾಹಿತಿಗಾಗಿ 08372-220432 ಗೆ ಕರೆ ಮಾಡಬಹುದು

ಜೂನ್ 15, 2014

ನಿಮ್ಮ ಸಹಕಾರವೆ ನಮಗೆ ಶ್ರೀರಕ್ಷೆ

ನಿಮ್ಮ ಸಹಕಾರವೆ ನಮಗೆ ಶ್ರೀರಕ್ಷೆ 
ಶ್ರೀ ವಿಶ್ವನಾಥ ರಾಮನಕೊಪ್ಪ 
ಅಧ್ಯಕ್ಷರು:ಡಾ.ಪಂ.ಸೇವಾ ಸಮಿತಿ ಗದಗ

ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗವಾದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಯ ದಶಮಾನೋತ್ಸವ ಮತ್ತು ಪೂಜ್ಯ ಗುರು ಪುಟ್ಟರಾಜರ ಜನ್ಮಶತಮಾನೋತ್ಸವ ವರ್ಷಾಚರಣೆ ಅಂಗವಾಗಿ, ಸಮಿತಿಯ ಹಿಂದಿನ ಕಾರ್ಯಕ್ರಮಗಳಾದ ‘ಕನ್ನಡ ಸಂಸ್ಕೃತಿ ಸಂಭ್ರಮ’ ಮಾರ್ಚ ತಿಂಗಳು ಬೆಂಗಳೂರಿನಲ್ಲಿ, ‘ನಾಡೋಜ ಕವಿ ಪುಟ್ಟರಾಜ ಸಾಹಿತ್ಯೋತ್ಸವ ’ಕನ್ನಡ ಪರ ಸಾಂಸ್ಕೃತಿಕ ಸಂಘಟನೆಗಳ ಸಹಕಾರದೊಂದಿಗೆ ಆಯ್ದ ಯಾವುದಾದರು ಜಿಲ್ಲೆಯಲ್ಲಿ , ‘ಗುರು ಗುಣ ಗಾನ ’ ಸಪ್ಟೆಂಬರ ೧೭ ರಂದು ಗದಗನಲ್ಲಿ ಹಮ್ಮಿಕೊಳ್ಳುತ್ತ ಬಂದಿರುವ ಕಾರ್ಯಕ್ರಮಗಳೊಂದಿಗೆ, ಈ ವರ್ಷ ಮಾತ್ರ ಹಮ್ಮಿಕೊಳ್ಳುವ ಮನೆ ಮನದ ಅಂಗಳದಲ್ಲಿ ‘ಗಾನಯೋಗಿ ಆರಾಧನೆ ‘ ತಿಂಗಳ ೨ನೆಯ ಶನಿವಾರದ ವಚನ ಸಂಗೀತ ಕಾರ್ಯಕ್ರಮ. ಪ್ರತಿ ತಿಂಗಳು ಪೂರ್ಣಿಮೆ ಯಂದು ಮಠ ; ಮಂದಿರದ ಆವರಣದಲ್ಲಿ ಗುರುಕುಮಾರ ಪಂಚಾಕ್ಷರೇಶ್ವರ ‘ವಚನ ಸಂಗೀತೋತ್ಸವ ’ ವರ್ಷಾಚರಣೆಯ ವಿಶೇಷ ಕಾರ್ಯಕ್ರಮಗಳು ರಾಜ್ಯಾದ್ಯಂತ ಅಭಿಮಾನಿ ಭಕ್ತರ ಮನೆಯಲ್ಲಿ ಆಯ್ದ ಮಠ ಮಂದಿರಗಳಲ್ಲಿ ಹಮ್ಮಿಕೊಳ್ಳಲು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ) ಗದಗ ಕೇಂದ್ರ ಕಾರ್ಯ ಕಾರಣಿ ಮಂಡಳಿಯು ಈ ಬಗ್ಗೆ ಅಂತಿಮ ತಿರ್ಮಾನ ಕೈಗೊಂಡು ಅಧಿಕೃತ ಗೊಳಿಸಿದೆ . ಇದೇ ಸಂಧರ್ಭದಲ್ಲಿ ರಾಜ್ಯ ಘಟಕ ಅಸ್ತಿತ್ವಕ್ಕೆ ತರುವ ಉದ್ದೇಶದಿಂದ ಶ್ರೀ ಚನ್ನವೀರ ಸ್ವಾಮೀ ಹಿರೇಮಠ ಶಾಸ್ತ್ರೀ ಕಡಣಿ ಇವರನ್ನು ರಾಜ್ಯ ಸಂಚಾಲಕರನ್ನಾಗಿ ನೇಮಕ ಮಾಡಿ ರಾಜ್ಯ ಕಾರ್ಯಕಾರಣಿ ಮಂಡಳಿಗೆ ಪದಾಧಿಕಾರಿಗಳ ಆಯ್ಕೆಮಾಡಿ ಪಟ್ಟಿ ಸಿದ್ದಪಡಿಸಿ ಕೇಂದ್ರ ಸಮಿತಿಗೆ ವರದಿ ಮಾಡಿಕೊಳ್ಳಲು ತಿಳಿಸಲಾಗಿತ್ತು, ಸುಮಾರು ೪ ತಿಂಗಳಿಂದ ರಾಜ್ಯದ ಅಭಿಮಾನಿ ಭಕ್ತರ ಸಂಘಟನೆಗಾಗಿ ಪ್ರಯತ್ನಿಸಿ, ರಾಜ್ಯ ಕಾರ್ಯ ಕಾರಣಿ ಮಂಡಳಿಯ ಪದಾಧಿಕಾರಿಗಳ ಪಟ್ಟಿ ಸಿದ್ದಪಡಿಸಿ ಕೇಂದ್ರ ಸಮಿತಿಗೆ ನೀಡಿದ್ದಾರೆ. ಈ ಪದಾಧಿಕಾರಿ ಪಟ್ಟಿಗೆ ಕೇಂದ್ರ ಸಮಿತಿ ಅನುಮೋದನೆ ನೀಡ ಬೇಕಾಗಿದ್ದು, ದಿನಾಂಕ ೧೭ ಜೂನ ೨೦೧೪ ರಂದು ನಡೆಯುವ ಕಾರ್ಯಕಾರಣಿ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗುವುದು. ಇದೆ ಸಂಧರ್ಭದಲ್ಲಿ ರಾಜ್ಯ ಕಾರ್ಯ ಕಾರಣಿ ಮಂಡಳಿ ಅಸ್ತಿತ್ವಕ್ಕೆ ಬಂದ ದಿನದಿಂದ ರಾಜ್ಯ ಸಂಚಾಲಕರ ಹುದ್ದೆ ಮುಂದುವರಿಸಲು ಅವಕಾಶ ವಿಲ್ಲದ ಕಾರಣ .ಶ್ರೀ ಕಡಣಿ ಶಾಸ್ತ್ರೀ ಯವರನ್ನು ಕೇಂದ್ರ ಸಮಿತಿಯ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯ ಸಮಿತಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದ ದಿನದಿಂದಲೇ ಕೇಂದ್ರ ಸಂಚಾಲರ ನೇಮಕಾತಿ ಆದೇಶವು ಜಾರಿ ಬರುತ್ತದೆ. ಕೇಂದ್ರ ಸಮಿತಿಯ ಆಡಳಿತಾತ್ಮಕ ಹೊಣೆ ಯೊಂದಿಗೆ ರಾಜ್ಯ ಘಟಕಗಳ ಮುಖ್ಯಸ್ಥರಾಗಿ, ರಾಜ್ಯ ಉಸ್ತುವಾರಿಯನ್ನು ವಹಿಸಿಕೊಂಡು ರಾಜ್ಯದ ಮತ್ತು ಹೊರ ರಾಜ್ಯದ ಅಭಿಮಾನಿ ಭಕ್ತರನ್ನು ಈ ಸಮಿತಿಯ ತೆಕ್ಕೆಗೆ ತಂದು ಕೊಳ್ಳುವ ಪ್ರಯತ್ನ ಶ್ರೀ ಶಾಸ್ತ್ರೀಗಳು ಮುಂದುವರಿಸಲಿದ್ದಾರೆ . ತಮ್ಮೆಲ್ಲರ ಸಹಕಾರ ದಿಂದ ಮಾತ್ರ ನಮ್ಮ ಕನಸು ನನಸಾಗಲು ಸಾಧ್ಯ ಬನ್ನಿ ನಾವು ನೀವೆಲ್ಲ ಸೇರಿ ಗುರು ಸೇವೆ ಮಾಡೋಣ.

ಇಂತಿ ತಮ್ಮ ವಿಶ್ವಾಸಿ ವಿಶ್ವನಾಥ ರಾಮನಕೊಪ್ಪ ಸಂಸ್ಥಾಪ ಅದ್ಯಕ್ಷರು ಪುಟ್ಟರಾಜರ ಅಭಿಮಾನಿ ಭಕ್ತರ ಮಹಾ ಬಳಗ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ)  ಗದಗ

ಜೂನ್ 14, 2014

ನೀವು ಆಯ್ಕೆ ಮಾಡಿದ ಪತ್ರಿಕೆ ಹೆಸರುಗಳು

ಆತ್ಮೀಯರೆ....  

ಸುಮಾರು ಮೂರು ದಿನಗಳಿಂದ ಅತ್ಯಂತ ಉತ್ಸಾಹ ಮತ್ತು ಪ್ರೀತಿ, ಭಕ್ತಿಯಿಂದ ನಮ್ಮ ಪತ್ರಿಕೆ ಹೆಸರಿಡಲು ಭಾಗಿಯಾಗಿ ಸಹಕರಿಸಿದ್ದಿರಿ.  ನಮ್ಮ ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗದ  ಸಮಸ್ತ ಸದಸ್ಯರಿಗೆ ಅಭಿನಂದನೆಗಳು. ನಿಮ್ಮ ಭಾಗವಹಿಸುವಿಕೆಯಿಂದ ಅಭಿಮಾನ ತೋರಿದ್ದಿರಿ ಮತ್ತೊಮ್ಮೆ ಧನ್ಯವಾದಗಳು. ಮೊದಲ ಸುತ್ತಿನ ಹತ್ತು ಹೆಸರುಗಳನ್ನು ಆಯ್ಕೆ ಮಾಡಿಕೊಟ್ಟ Anitha P Poojary ಅವರಿಗೂ ಅಭಿ ನಂದಿಸುತ್ತೇವೆ. ನೂರಕ್ಕೆ % 75 ರಷ್ಟು ಅಂಕು ಪಡೆದುಕೊಂಡು ‘ಪುಟ್ಟರಾಜ ವಾಣಿ’ ಹೆಸರು ಮೊದಲ ಸ್ಥಾನ ಗಳಿಸಿದೆ. ಈ ಹೆಸರು ಸೂಚಿಸಿದವರು Deepak Karne, ನೂರಕ್ಕೆ % ೫೦ ಅಂಕು ಪಡೆದುಕೊಂಡು ‘ಗವಾಯಿ ಸಂದೇಶ’ ಹೆಸರು ಎರಡನೇ ಸ್ಥಾನ ಗಳಿಸಿದೆ. ಈ ಹೆಸರು ಸೂಚಿಸಿದವರು Santosh Kolaki. ನೂರಕ್ಕೆ % ೪೫ ಅಂಕು ಪಡೆದುಕೊಂಡು ‘ಕಲ್ಪವೃಕ್ಷ’ ಹೆಸರು ಮೂರನೆ ಸ್ಥಾನ ಗಳಿಸಿದೆ. ಈ ಹೆಸರು ಸೂಚಿಸಿದವರು Yellappa narasannavar. ಇವರೆಲ್ಲರಿಗೂ ಅಭಿನಂದನೆಗಳು.  ‘ಗವಾಯಿ ಸಂದೇಶ’ ಮತ್ತು ‘ಕಲ್ಪವೃಕ್ಷ’ ಈ ಎರಡು ಹೆಸರುಗಳನ್ನು ಸ್ವಲ್ಪ ಮಾರ್ಪಡಿಸಿ ‘ಪುಟ್ಟರಾಜ ಸಂದೇಶ’ ‘ಕಲಾ ಕಲ್ಪವೃಕ್ಷ’ ಎಂದು ಎರಡು ಹೆಸರು ಸಿಧ್ಧಪದಿಸಿದ್ದೇವೆ. ಈ ಮೂರೂ ಹೆಸರಿನೊಂದಿಗೆ ನಮ್ಮ ಎರಡು ಹೆಸರುಗಳನ್ನು ಸೇರಿಸಿ, ಹೆಸರು ಆಯ್ಕೆಗಾಗಿ ದೆಹಲಿಗೆ ಕಳಿಸಿ ಕೊಡುತಿದ್ದೇವೆ. ನಮ್ಮ ಸಮಿತಿಯ ಹೆಸರು ನಾಳೆ ನಿಮ್ಮ ಮುಂದೆ ಇಡುತ್ತೇವೆ.ಆಯ್ಕೆ ಮಾಡಿ ಕೊಡುವಿರಂತೆ. ವಂದನೆಗಳೊಂದಿಗೆ ಸಂಘಟಕರು . 

Photo


ಜೂನ್ 12, 2014

ವರ್ಷ ಪೂರ್ತಿ ಕಾರ್ಯಕ್ರಮಗಳ ವಿವರ

ಡಾ.ಪಂ. ಪುಟ್ಟರಾಜ ಸೇವಾ ಸಮಿತಿಯ
ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗದ
ಜುಲೈ ತಿಂಗಳಿಂದ ವರ್ಷ ಪೂರ್ತಿ ನಡೆಯುವ
ಕಾರ್ಯಕ್ರಮಗಳ ವಿವರ
@@@
ಮನೆ ಮನದ ಅಂಗಳದಲ್ಲಿ ಸಂಗೀತ  
“ಗಾನಯೋಗಿ ಆರಾಧನೆ”
ಪ್ರತಿ ತಿಂಗಳ ಎರಡನೇ ಶನಿವಾರ
ನಾಡಿನ ಆಯ್ದ ಅಭಿಮಾನಿ ಭಕ್ತರ ಮನೆಯಲ್ಲಿ
@@@
‘ಪದ್ಮಭೂಷಣ’ಪುಟ್ಟರಾಜರ ಪುಣ್ಯಸ್ಮರಣೆ
“ಗುರುಗುಣಗಾನ”
(ಸಂಗೀತ, ನೃತ್ಯ ಸಮಾವೇಶ )
ಪ್ರತಿ ವರ್ಷ ಸಪ್ಟೆಂಬರ ೧೭ ರಂದು
ಕೇಂದ್ರ ಸ್ಥಾನ ಗದಗ ದಲ್ಲಿ

ಮಠ,ಮಂದಿರಗಳ ಪ್ರಾಂಗಣದಲ್ಲಿ
“ಗುರು ಕುಮಾರ ಪಂಚಾಕ್ಷರೇಶ್ವರ ”   
"ವಚನ ಸಂಗೀತೋತ್ಸವ"
(ವಚನ ಪ್ರವಚನ ಮತ್ತು ಗಾಯನ)
ಪ್ರತಿ ತಿಂಗಳು ಪೂರ್ಣಿಮೆಯಂದು
ನಾಡಿನ ಆಯ್ದ ಮಠ ಮತ್ತು ಮಂದಿರಗಳಲ್ಲಿ

ಸಾಂಸ್ಕ್ರತಿಕ ಸಂಘಟನೆಗಳ ಆಶ್ರಯದಲ್ಲಿ
“ನಾಡೋಜ ಪುಟ್ಟರಾಜ ಸಾಹಿತ್ಯೋತ್ಸವ”
(ಕವಿಗೊಷ್ಠಿ ಉಪನ್ಯಾಸ ಸಂಗೀತ ಸನ್ಮಾನ)
ತ್ರೈಮಾಸಿಕ ಕಾರ್ಯಕ್ರಮ

‘ಪದ್ಮಭೂಷಣ’ಪುಟ್ಟರಾಜರ ಹುಟ್ಟುಹಬ್ಬ
"ಕನ್ನಡ ಸಂಸ್ಕೃತಿ ಸಂಭ್ರಮ"
ಅಭಿಮಾನಿ ಭಕ್ತರ ಸಮಾವೇಶ
ಪ್ರತಿವರ್ಷ ಮಾರ್ಚ ೩ ರಂದು ಬೆಂಗಳೂರಲ್ಲಿ

ಗ್ರಾಮೀಣ ಪ್ರದೇಶದ ಅಭಿಮಾನಿ ಭಕ್ತರ ಆಶ್ರಯದಲ್ಲಿ
“ಗುರು ಪುಟ್ಟರಾಜ ಲೀಲಾ ವಿಳಾಸ”
ಪುರಾಣ ಪ್ರವಚನ, ಕಥಾಕಿರ್ತನೋತ್ಸವ
ಅಭಿಮಾನಿ ಭಕ್ತರ ಅಪೇಕ್ಷೆ ಮೇರೆಗೆ

ಜೂನ್ 10, 2014

ಪುಣ್ಯ ಸ್ಮರಣೆಯ ಗುರು ಗುಣ ಗಾನ

‘ಪದ್ಮಭೂಷಣ’ ಪುಟ್ಟರಾಜ4ನೆ ಪುಣ್ಯಸ್ಮರಣೆ 
ಗುರು ಗುಣ ಗಾನ
ಸಂಗೀತ, ನೃತ್ಯ ಸಮಾವೇಶ - 2014

16 ಮತ್ತು 17 ದಿನಾಲು ಸಂಜೆ 4-30 ರಿಂದ 

ರಾತ್ರಿ 9-00 ರವರೆಗೆ 

ಮೊದಲದಿನ ಕವಿಗೋಷ್ಠಿ, ಸ್ಥಳೀಯ ಕಲಾವಿದರಿಂದ ಕಾವ್ಯಗಾಯನ,ನೃತ್ಯಪ್ರದರ್ಶನ ಎರಡನೆ ದಿನ ಅಭಿಮಾನಿ ಭಕ್ತರಿಗೆ ಸಮ್ಮಾನ, ಮತ್ತು ಆಮಂತ್ರಿತ ಕಲಾವಿದರಂದ ಶಾಸ್ತ್ರೀಯ ಸಂಗೀತ ನೃತ್ಯ ಪ್ರದರ್ಶನ ನಡೆಯುವುದು. ಕವಿಗೋಷ್ಠಿ , ಕಾವ್ಯಗಾಯನ, ನೃತ್ಯ ಪ್ರದರ್ಶನ ಸೇವೆ ಸಲ್ಲಿಸಲು ಯುವ ಉದಯೋನ್ಮುಖ ಕಲಾವಿದರು ತಮ್ಮ ಹೆಸರು ನೋದಾಯಿಸಿಕೊಳ್ಳಬಹುದು ಹೆಸರು ನೋದಾಯಿಸಿಕೊಳ್ಳಲು ಕೊನೆಯ ದಿನಾಂಕ: 30 - ಜುಲೈ - 2014 ನಿಮ್ಮ ಕವನ / ಹೆಸರು puttarajsevasamiti@gamil.com ಗೆ ಕಳುಹಿಸಿ ಕೊಡಿ

ವಚನ ಸಂಗೀತೋತ್ಸವ -೨೦೧೪

ಮಠ ಮಂದಿರದ ಪವಿತ್ರ ಪ್ರಾಂಗಣದಲ್ಲಿ
‘ ಗುರುಕುಮಾರ ಪಂಚಾಕ್ಷರೇಶ್ವರ ’
ವಚನ ಸಂಗೀತೋತ್ಸವ -೨೦೧೪
(ವಚನಗಳ ನಿರ್ವಚನ, ಗಾಯನ ಮತ್ತು ಸನ್ಮಾನ )
------------------------------
ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರು ಈ ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿಕೊಳ್ಳುವ, ಅವರ ಜೀವನ ಸಾಧನೆ ಸಂದೇಶವನ್ನು ಮನೆ;ಮನಗಳಿಗೆ ತಲುಪಿಸುವ ಸರಳ, ಸುಂದರ, ಅರ್ಥಪೂರ್ಣ, ಕಾರ್ಯಕ್ರಮ ಇದಾಗಿದೆ.
ಈ ಕಾರ್ಯಕ್ರಮವು ರಾಜ್ಯದ ಮಠ ಮಂದಿರದ ಪವಿತ್ರ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲಾಗುವುದು. ೩ ತಾಸಿನ ಈ ಕಾರ್ಯಕ್ರಮದಲ್ಲಿ,‘ಪೂಜ್ಯರ ಭಾವಚಿತ್ರದ ಪೂಜೆ’ ‘ಗುರು ಪ್ರಭಾ ವಚನ ಪ್ರಾರ್ಥನೆ’ ೪೫ ನಿಮಿಷದ ‘ಪುಟ್ಟರಾಜರ ಜೀವನ ದರ್ಶನ ಉಪನ್ಯಾಸ’ ಸ್ಥಳೀಯ ಗುರುಬಂಧು ಕಲಾವಿದರಿಂದ ಮತ್ತು ನಮ್ಮ ಸೇವಾ ಸಮಿತಿಯ ಪಂ. ಪುಟ್ಟರಾಜ ಸಂಗೀತ ಸಭಾ ಸಂಗೀತ ಕಲಾ ತಂಡದಿಂದ ಹಾಗೂ ಒಬ್ಬ ಅಥವಾ ಇಬ್ಬರು ಪ್ರಶಿದ್ಧ ಗಾಯಕರಿಂದ ‘ವಚನ ಗಾಯನ’ ಏರ್ಪಡಿಸಲಾಗುತ್ತದೆ. 

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಮ್ಮ ಸಮಿತಿಯ ತಂಡಕ್ಕೆ ಯಾವುದೇ ಸಂಭಾವನೆ ನೀಡಬೇಕಾಗಿಲ್ಲ ಆದರೆ ಪ್ರಯಾಣ ಭತ್ತೆ ಪ್ರಸಾದ ವ್ಯೆವಸ್ಥೆ ಮತ್ತು ಅವಶ್ಯವೆನಿಸಿದಲ್ಲಿ ವಸತಿ ಸೌಲಭ್ಯ ವದಗಿಸ ಬೇಕಾಗುತ್ತದೆ. ಈ ಕಾರ್ಯಕ್ರಮದ ವೇದಿಕೆಯ ಹಿಂಭಾಗದ ಬ್ಯಾನರ, ಹಿರಿಯ ಸಂಗೀತ ಸಾಧಕ ರೋಬ್ಬರಿಗೆ ನೀಡಲಾಗುವ ‘ ಗುರುಕೃಪಾ ಸತ್ಕಾರ ’ದ ಸಲಕರಣೆಗಳು ನೆನಪಿನ ಕಾಣಿಕೆ ಸಮಿತಿಯೇ ಹೊಂದಿಸಿಕೊಳ್ಳುತ್ತದೆ. ಇದಕ್ಕಾಗಿ ಸಮಿತಿಯು ಸ್ಥಳೀಯ ಸಂಘ ಸಂಸ್ಥೆ ಗಳ ಸಹಕಾರ ಪಡೆದುಕೊಳ್ಳಲು ಮುಕ್ತ ಅವಕಾಶ ಹೊಂದಿದೆ. ಕೆಳುಗರಾಗಿ ಬಂದ ಅಭಿಮಾನಿ ಭಕ್ತರಿಗೆ ಕಾರ್ಯಕ್ರಮದ ನಂತರ ಪ್ರಸಾದ ವ್ಯೆವಸ್ಥೆ ಮಾಡಬೇಕಾಗುವುದು.ಈ ಕಾರ್ಯಕ್ರಮ ಪೂರ್ಣಿಮೆಯ ದಿನ ಸಂಜೆ ೫-೩೦ ರಿಂದ ೮- ೩೦ ರವರೆಗೆ ನಡೆಯುತ್ತದೆ. ಒಟ್ಟು ೧೨ ಕಾರ್ಯಕ್ರಮಗಳು ಆಯ್ದ ಮಠ ಮಂದಿರದ ಪವಿತ್ರ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದೆ. 

ಮಠ ಮತ್ತು ಮಂದಿರದ ಆಡಳಿತ ಮಂಡಳಿಯಿಂದ ನಾವು ನೀರಿಕ್ಷಿಸುವ ಕನಿಷ್ಟ ಸೌಲಭ್ಯಗಳು 

೧. ಸಭಾ ಭವನ, ೨. ಧ್ವನಿವರ್ಧಕ, ೩. ಆಮಂತ್ರಣ ಪತ್ರಿಕೆ ೪. ಆಮಂತ್ರಿತ ಕಲಾವಿದರ ಗೌರವ ಸಂಭಾವನೆ ಮತ್ತು ಊಟ ವಸತಿ. ೫. ನಮ್ಮ ಸಮಿತಿಯ ತಂಡದ ಕಲಾವಿದರ ಪ್ರಯಾಣ ಭತ್ತೆ ಮತ್ತು ಉಟ ವಸತಿ ೬.ಕಾಯಕ್ರಮದ ನಂತರ ಪ್ರಸಾದ ವ್ಯೆವಸ್ಥೆ. ಆಮಂತ್ರಣ ಪತ್ರಿಕೆಯಲ್ಲಿ ಮತ್ತು ಸ್ಟೇಜ್ ಬ್ಯಾನರನಲ್ಲಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ-ಬೆಂಗಳೂರು ಹಾಗು ....... ಮಠ, ಮಂದಿರದ ಸಂಯುಕ್ತ ಆಶ್ರಯದಲ್ಲಿ ಎಂದು ಮುದ್ರಿಸಲಾಗುವುದು ಅದೇ ರೀತಿ ಸ್ಥಳೀಯ ಸಂಘ ಸಂಸ್ಥೆ ಪ್ರಾಯೋಜನ ನೀಡಿದರೆ ಆಮಂತ್ರಣ ಪತ್ರಿಕೆಯ ಬೆನ್ನು ಪುಟದಲ್ಲಿ ಸಹಕಾರ ಎಂದು ಅವರ ಹೆಸರು ಪ್ರಕಟಿಸಲಾಗುವುದು ಇದರಲ್ಲಿ ಬದಲಾವಣೆಗೆ ಅವಕಾಶವಿದೆ. ಈ ಕುರಿತು ನಮ್ಮದೇ ಅಂತಿಮವಲ್ಲ ಸಮಯ ಸಂಧರ್ಭಕ್ಕೆ ತಕ್ಕಂತೆ ಬದಲಾವಣೆಗೆ ಮುಕ್ತ ಅವಕಾಶವಿದೆ. 

ರಾಜ್ಯ ಸಂಚಾಲಕರು: ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ-ಬೆಂಗಳೂರು 

ಮನೆ,ಮನದ ಅಂಗಳದಲ್ಲಿ ಸಂಗೀತ

ಮನೆ,ಮನದ ಅಂಗಳದಲ್ಲಿ 
ಸಂಗೀತ ಕಾರ್ಯಕ್ರಮ
‘ಗಾನಯೋಗಿ ಆರಾಧನೆ’
(ಕಿರು ಉಪನ್ಯಾಸ, ವಚನ ಗಾಯನ)

ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರು ಈ ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿಕೊಳ್ಳುವ, ಅವರ ಜೀವನ ಸಾಧನೆ ಸಂದೇಶವನ್ನು ಮನೆ;ಮನಗಳಿಗೆ ತಲುಪಿಸುವ ಸರಳ, ಸುಂದರ, ಅರ್ಥಪೂರ್ಣ, ಸಂಸ್ಕಾರಯುತ ಕಾರ್ಯಕ್ರಮ ಇದಾಗಿದೆ. 

ಈ ಕಾರ್ಯಕ್ರಮವು ರಾಜ್ಯದ ತುಂಬ ಹರಡಿಕೊಂಡಿರುವ ಪೂಜ್ಯರ ಅಭಿಮಾನಿ ಭಕ್ತರ ಮನೆಯಲ್ಲಿ ಅವರ ದಾಸೋಹ ಸೇವೆಯಲ್ಲಿ ಹಮ್ಮಿಕೊಳ್ಳಲಾಗುವುದು. ಒಂದರಿಂದ ಒಂದೂವರೆ ತಾಸಿನ ಈ ಕಾರ್ಯಕ್ರಮದಲ್ಲಿ,‘ಪೂಜ್ಯರ ಭಾವಚಿತ್ರದ ಪೂಜೆ ’ ‘ ಗುರು ಪ್ರಭಾ ವಚನ ಪ್ರಾರ್ಥನೆ ’ಹದಿನೈದು ರಿಂದ ಇಪ್ಪತ್ತು ನಿಮಿಷದ ‘ಗುರು ಪುಟ್ಟರಾಜರ ಜೀವನ ದರ್ಶನ’ ಕಿರು ಉಪನ್ಯಾಸ, ಸ್ಥಳೀಯ ಗುರುಬಂಧು ಕಲಾವಿದರಿಂದ ಮತ್ತು ನಮ್ಮ ಸೇವಾ ಸಮಿತಿಯ ‘ಪಂ. ಪುಟ್ಟರಾಜ ಸಂಗೀತ ಸಭಾ’ ಸಂಗೀತ ಕಲಾ ತಂಡದಿಂದ ‘ವಚನ ಗಾಯನ’ ಏರ್ಪಡಿಸಲಾಗುತ್ತದೆ. 

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ತಂಡಕ್ಕೆ ಯಾವುದೇ ಸಂಭಾವನೆ ನೀಡಬೇಕಾಗಿಲ್ಲ ಆದರೆ ಪ್ರಯಾಣ ಭತ್ತೆ ಪ್ರಸಾದ ವ್ಯೆವಸ್ಥೆ ಮತ್ತು ಅವಶ್ಯವೆನಿಸಿದಲ್ಲಿ ವಸತಿ ಸೌಲಭ್ಯ ವದಗಿಸ ಬೇಕಗುತ್ತದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮುದ್ರಣ, ವೇದಿಕೆಯ ಹಿಂಭಾಗದ ಬ್ಯಾನರ, ಆರಾಧನೆ ಭಕ್ತಿ ಸೇವೆ ವಹಿಸಿಕೊಂಡ ಕುಟುಂಬದ ಹಿರಿಯ ರೋಬ್ಬರಿಗೆ ನೀಡಲಾಗುವ ‘ಗುರುಕೃಪಾ ಸತ್ಕಾರ’ದ ಸಲಕರಣೆಗಳು ಸಮಿತಿಯೇ ಹೊಂದಿಸಿಕೊಳ್ಳುತ್ತದೆ. ಕೆಳುಗರಾಗಿ ಬಂದ ಅಭಿಮಾನಿ ಭಕ್ತರಿಗೆ ಅರ್ಧ ಕಪ್ ಟೀ ಎರಡು ಬಿಸ್ಕತ್ ನೀಡಿ ಉಪಚರಿಸಿದರೆ ಸಾಕು. 

ಸಂಗೀತ ಸಾಹಿತ್ಯ ಶಿಕ್ಷಣ ಸಮಾಜ ಸೇವೆ ಬಹು ಮುಖ್ಯವಾಗಿ ಅಂಧ ಅನಾಥರ ಸೇವೆ ಸಲ್ಲಿಸಿ, ಮರೆಯದ ಮಹಾನ್ ಚೇತನದ ಸಾಧನೆಯನ್ನು ಮುಂದಿನ ಪೀಳಿಗೆ ಮರೆಯದಂತೆ ಸ್ಮರಿಸಿಕೊಳ್ಳುವ ಮೂಲಕ, ಪೂಜ್ಯರಿಗೆ ಸಲ್ಲಿಸುವ ಸಣ್ಣ ಗೌರವ ಇದಾಗಿದೆ. ಈ ಕಾರ್ಯಕ್ರಮ ಪ್ರತಿ ತಿಂಗಳ ಎರಡನೇ ಶನಿವಾರ ಸಂಜೆ ೬-೩೦ ರಿಂದ ೮-೦೦ ರವರೆಗೆ ನಡೆಯುತ್ತದೆ. ಈ ಕಾರ್ಯಕ್ರಮದ ಸೇವಾಭಾಗ್ಯ ಕೇವಲ ೧೨ ಜನರಿಗೆ ಮಾತ್ರ ಲಭ್ಯವಾಗಲಿದ್ದು ಮೊದಲು ಬಂದವರಿಗೆ ಮೊದಲು ಅವಕಾಸ ನೀಡಲಾಗುವುದು. 

ಬನ್ನಿ ನಾವೂ ಸೇರಿ ಗುರುಸೇವೆ ಮಾಡೋಣ ಗುರು ಕೃಪೆ ಹೊಂದೋಣ 

ಜೂನ್ 05, 2014

ಸೇವಾ ಸಮಿತಿಯ ಪ್ರತಿಷ್ಠಿತ ಪ್ರಶಸ್ತಿ ಗಳು


ಡಾ. ಪಂ.ಪುಟ್ಟರಾಜ ಸೇವಾ ಸಮಿತಿಯ
ಪ್ರತಿಷ್ಠಿತ ಪ್ರಶಸ್ತಿ ಗಳು

ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ ದಶಮಾನೋತ್ಸವ ಸಂಭ್ರಮಾಚರಣೆ ಸಂಧರ್ಭದಲ್ಲಿ ಸಮಿತಿಯು ಸುಮಾರು ಹತ್ತು ವರ್ಷಗಳಿಂದ ನೀಡಿ ಗೌರವಿಸುತ್ತ ಬಂದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಹೊಸ ಸ್ವರೂಪ ನೀಡುವುದರೊಂದಿಗೆ ಪೂಜ್ಯರ ಜನ್ಮ ಶತಮಾನೋತ್ಸವ ವರ್ಷಾಚರಣೆಯ ಈ ಸಂದರ್ಭದಲ್ಲಿ ಹೊಸ ಪ್ರಶಸ್ತಿ ಅಸಿತ್ವಕ್ಕೆ ತಂದಿದ್ದೇವೆ ಆ ಪ್ರಶಸ್ತಿಗಳು ಇಂತಿವೆ ಇವೆ. ಈಗಾಗಲೇ ಅಸ್ತಿತ್ವದಲ್ಲಿ ಇರುವ ಪ್ರಶಸ್ತಿ ಗಳು‘ಪದ್ಮ ಭೂಷಣ’ ಪುಟ್ಟರಾಜ ಗವಾಯಿ ಯುವ ಪುರಸ್ಕಾರ ರಾಷ್ತ್ರೀಯ ಪ್ರಶಸ್ತಿ. ‘ಪದ್ಮ ಭೂಷಣ’ ಪಂ. ಪುಟ್ಟರಾಜ ಕೃಪಾ ಭೂಷಣ ಕಲಾಪೋಷಕ ಗೌರವ ಪ್ರಶಸ್ತಿ. ‘ನಾಡೋಜ’ ಕವಿ ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿ. ಈ ವರ್ಷದಿಂದ ಅಸ್ತಿತ್ವಕ್ಕೆ ತರಲಾದ ನೂತನ ಪ್ರಶಸ್ತಿಗಳು ‘ಗುರುಕುಲ ಭೂಷಣ’ ಕಲಾಗುರು ಗೌರವ ಪ್ರಶಸ್ತಿ. ‘ಗುರು ಕುಮಾರ ಪಂಚಾಕ್ಷರಿ’ ವಚನ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿ. 

ನಮ್ಮ ಸಮಿತಿಯ ಹೊಸ ಕಾರ್ಯಕ್ರಮ

'ಗುರುಕುಮಾರ ಪಂಚಾಕ್ಷರಿ' 
ವಚನ ಸಾಹಿತ್ಯೋತ್ಸವ

ಗುರು ಪುಟ್ಟರಾಜರ ಜನ್ಮ ಶತಮಾನೋತ್ಸವ, ನಮ್ಮ ಸಮಿತಿಯ ದಶಮಾನೋತ್ಸವ ಸಂಭ್ರಮಾಚರಣೆಯ ಸವಿ ನೆನಪಿಗಾಗಿ ಸಮಿತಿಯು “ಗುರುಕುಮಾರ ಪಂಚಾಕ್ಷರಿ” ವಚನ ಸಾಹಿತ್ಯೋತ್ಸವ ಕಾರ್ಯಕ್ರಮವು ಆರಂಭಿಸಲು ನಿರ್ಧರಿಸಿದೆ. ಈ ಕಾರ್ಯಕ್ರಮವು ಕನ್ನಡಪರ ಸಂಘಟನೆಗಳ ಹಾಗೂ ಸಾಂಸ್ಕೃತಿಕ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗುವುದು. ಒಂದು ದಿನ ನಡೆಯುವ ಈ ಉತ್ಸವದಲ್ಲಿ ಪೂಜ್ಯ ಗುರು ಪುಟ್ಟರಾಜರ ವಚನಗಳ  ಉಪನ್ಯಾಸ ಮತ್ತು ವಚನ ಗಾಯನದೊಂದಿಗೆ ಶರಣರ ಮತ್ತು ಪ್ರಸ್ತುತ ವಚನಕಾರರ ವಚನ ಗಾಯನ ಕೂಡಾ ಇರುತ್ತದೆ. ಇದೇ ಸಂಧರ್ಭದಲ್ಲಿ  ಜಿಲ್ಲಾಮಟ್ಟದ ಯುವ ವಚನಕಾರರ ಸ್ವರಚಿತ ವಚನ ವಾಚನ ಗೊಷ್ಥಿ ಏರ್ಪಡಿಸಲಾಗುವುದು. ಸ್ಥಳೀಯ ಪ್ರಕಾಶಕರಿಂದ ಪುಸ್ತಕ ಪ್ರದರ್ಶನ,ಮಾರಾಟ. ಉದಯೋನ್ಮುಖ ವಚನಕಾರರಿಗೆ ಸನ್ಮಾನ ಏರ್ಪಡಿಸುವದು ಕೂಡಾ  ಇದೆ. ಪ್ರತಿ ತಿಂಗಳ ೪ ನೆಯ ರವಿವಾರ ಆತಿಥ್ಯ ವಹಿಸಿಕೊಳ್ಳುವ ಸಂಘ ಸಂಸ್ಥೆಯ ಜಿಲ್ಲಾ  ಕೇಂದ್ರದಲ್ಲಿ ಈ ಉತ್ಸವ ಹಮ್ಮಿಕೊಳ್ಳಲಾಗುವುದು. ಇದು ನಮ್ಮ ಯೋಚನೆಯಾಗಿದ್ದು, ಇದುವೇ ಅಂತಿಮವಲ್ಲ.  ಅಭಿಮಾನಿ ಭಕ್ತರ ಸಲಹೆ ಸೂಚನೆ ಮತ್ತು ಅಭಿಪ್ರಾಯ ಪಡೆದು ಅಂತಿಮ ರೂಪ ನೀಡಲಾಗುವುದು. ಅಭಿಮಾನಿ ಭಕ್ತರು,ತಮ್ಮ ಸಲಹೆ ಸೂಚನೆ ನೀಡುವುದರೊಂದಿಗೆ ಈ ಉತ್ಸವದ ಆತಿಥ್ಯ ವಹಿಸಿಕೊಳ್ಳಲು ವಿನಂತಿಸಿ ಕೊಳ್ಳಲಾಗಿದೆ. ಮಾಹಿತಿಗಾಗಿ 08372-220432 ಗೆ ಸಂಪರ್ಕಿಸ ಬಹುದಾಗಿದೆ.