ಅಕ್ಟೋಬರ್ 21, 2013

ಹುಟ್ಟು ಆಚರಣೆಗೆ ಚಾಲನೆಗೆ ಪ್ರೇರಕರಾದ ಭಕ್ತರು


ಹುಟ್ಟು ಆಚರಣೆಗೆ ಚಾಲನೆಗೆ ಪ್ರೇರಕರಾದ ಭಕ್ತರು ಶ್ರೀ ವಿಶ್ವನಾಥ ರಾಮಣಕೊಪ್ಪ. ಡಾ.ವ್ಹಿ.ಕೆ. ಚಿಂತಾಮಣಿ. ಡಾ.ಅನಂತ ಶಿವಪುರ. ಶ್ರೀ ಮಹೇಂದ್ರಕುಮಾರ ಸಂಗಾನಿ. ಶ್ರೀ ಗಂಗಾಧರ ಗಡ್ಡಿ. ಶ್ರೀ ಶಂಕರ ಹಾನಗಲ್. ಶ್ರೀ ರಮೇಶ ಹತ್ತಿಕಾಳ. ಶ್ರೀ ಶಿವಣ್ಣ ಮುಳಗುಂದ. ಶ್ರೀ ಮೋಹನ ಮಾಳಶಟ್ಟಿ. ಶ್ರೀ ಸುರೇಶ ಶಹಾ. ಶ್ರೀ ಪ್ರಕಾಶ ಬಾಕಳೆ. ಶ್ರೀ ಮಧು ಪುಣೇಕರ್. ಶ್ರೀ ಅಶೋಕ ಸಂಕಣ್ಣವರ. ಶ್ರೀ ಸಿದ್ದಲಿಂಗಪ್ಪ ಪಟ್ಟಣಶಟ್ಟಿ. ಶ್ರೀ ಛಗನ ಪಟೇಲ. ಶ್ರೀ ಶಶಿಧರ ಮಂಗಳೂರು. ಶ್ರೀ ಬಲರಾಮ ಬಸವಾ. ಶ್ರೀ ವಸಂತ ಪಡಗದ. ಶ್ರೀ ನಿಂಗಪ್ಪ ಕೆಂಗಾರ. ಪ್ರೊ.ಕೆ.ಎಚ್.ಬೇಲೂರ. ಶ್ರೀಮತಿ ಜಯಶ್ರೀ ಉಗಲಾಟದ. ಜನಾಬ ಶರಫರಾಜ ಉಮಚಗಿ. ಶ್ರೀ ಪ್ರೇಮನಾಥ ಗರಗ. ಶ್ರೀ ಚಿದಾನಂದ ಕಾಂಬ್ಳೆ. ಶ್ರೀ ಆನಂದ ಗೌಳಿ. ಶ್ರೀ ವಿಜಯ ಕುಮಾರ ಗಡ್ಡಿ. ಶ್ರೀ ಎಸ್.ಎಚ್.ಶಿವನ ಗೌಡ್ರ. ಶ್ರೀ ಎಲ್.ಡಿ.ಚಂದಾವರಿ. ಶ್ರೀ ಅಶೋಕ ಹಂಜಗಿ. ಶ್ರೀ ಶ್ರೀನಿವಾಸ ಹುಯಿಲಗೋಳ. ಶ್ರೀ ಜಯದೇವ ಮೆಣಸಗಿ. ಶ್ರೀ ಪ್ರೇಮನಾಥ ತೆರದಾಳ. ಶ್ರೀ ಎಂ.ಆಯ್. ನವಲಗುಂದ. ಶ್ರೀ ಪ್ರೊ.ಎಸ್.ವಾಯ್. ಚಿಕ್ಕಟ್ಟಿ. ಶ್ರೀ ಕಿರೀಟ ಕುಮಾರ ಸಂಗಾನಿ. ಶ್ರೀ ಈಶ್ವರಸಾ ಮೆಹರವಾಡೆ. ಶ್ರೀ ರಾಜು ಕುರಡಗಿ. ಶ್ರೀ ವಿಜಯಕುಮಾರ ಹಿರೇಮಠ. ಶ್ರೀ ರಾಜು ಹುಬ್ಬಳ್ಳಿಮಠ. ಶ್ರೀ ರಾಜು ರೋಖಡೆ. ಶ್ರೀ ಪ್ರಶಾಂತ ನಾಯ್ಕರ. ಮಂಜುನಾಥ ರೆಡ್ಡಿ. ಜನಾಬ ಶಿರಾಜ ಬಳ್ಳಾರಿ. ಶ್ರೀ ವೆಂಕಟೇಶ ದಾಸರ. ಶ್ರೀ ರವಿ ಓದುಗೌಡರ. ಶ್ರೀ ಸದು ಮದರಿ ಮಠ. 

ಅಕ್ಟೋಬರ್ 02, 2013

ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಹುಟ್ಟು ಬೆಳವಣಿಗೆ

ಪರಮಪೂಜ್ಯ ಹಾನಗಲ್ಲ ಗುರು ಕುಮಾರ ಶಿವಯೋಗಿಗಳಿಂದ ಸ್ಥಾಪಿಸಲ್ಪಟ್ಟ, ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳವರು ಸಂಚಾಲಕರಾಗಿದ್ದ, ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಚಾರಿ ಸಂಗೀತ ಪಾಠಶಾಲೆ, ಪಂ.ಪಂಚಾಕ್ಷರಿ ಗವಾಯಿಗಳವರು ಲಿಂಗೈಕ್ಯರಾದ ನಂತರ, ಬಸರಿಗಿಡದ ವೀರಪ್ಪನವರು ದಾನವಾಗಿ ನೀಡಿದ ಹೊಲದಲ್ಲಿ, ಈ ಸಂಚಾರಿ ಸಂಗೀತ ಶಾಲೆಗೆ ಶ್ರೀಗುರು ಕುಮಾರೇಶ್ವರ ಕೃಪಾಪೋಷಿತ ಶ್ರೀ ವೀರೇಶ್ವರ ಪುಣ್ಯಾಶ್ರಮ ಸಂಗೀತ ಸಾಹಿತ್ಯ ಮಹಾವಿದ್ಯಾಲಯವೆಂದು ಪುನರ್ನಾಮಕರಣ ಮಾಡಿ, ಗುರುವಿನ ಹಾದಿಯಲ್ಲಿಯೇ ಅಂಧ ಅನಾಥ ಮಕ್ಕಳ ಸೇವೆ ಮುಂದುವರಿಸಿ, ಪುಣ್ಯಾಶ್ರಮದ ಮೂಲಕ ಸಂಗೀತ, ಸಾಹಿತ್ಯ, ರಂಗಭೂಮಿ, ಚಲನಚಿತ್ರ, ಪ್ರಪಂಚಕ್ಕೆ ಅನೇಕ ಶಿಷ್ಯರನ್ನು ನೀಡಿದರು. ಸುಮಾರು ಅರವತ್ತೈದು ವರ್ಷಗಳ ಸುಧೀರ್ಘ ಸೇವೆಸಲ್ಲಿಸಿ 89 ವಸಂತ ಕಂಡಿದ್ದರೂ ಕೂಡಾ, ಗದುಗಿನಲ್ಲಿ ಪೂಜ್ಯರ ಹುಟ್ಟುಹಬ್ಬ ಆಚರಿಸಿರಲೇ ಇಲ್ಲ. ಅವಳಿ ನಗರದ ನಗರ ಸಭೆಯವರು ಒಂದು ನಾಗರಿಕ ಸನ್ಮಾನ ಮಾಡುವ ಗೋಜಿಗೆ ಹೋಗಲಿಲ್ಲ. ರಾಜ್ಯದ ಹೊರಗೆ ದಿಲ್ಲಿ, ವಾರಾಣಾಸಿ, ಕೇರಳ, ಮದ್ರಾಸ ಮೊದಲಾದ ಕಡೆ ಇವರ ಹುಟ್ಟುಹಬ್ಬ ನಡೆಯುತ್ತಿದ್ಡವೆ ಹೊರತು ಗದುಗಿನಲ್ಲಿ ಸಮಸ್ತ ನಾಗರಿಕರೆಲ್ಲ ಸೇರಿ ಒಂದೇ ಒಂದು ಬಾರಿಯೂ ಕೂಡಾ ಹುಟ್ಟುಹಬ್ಬ ಆಚರಿಸಿರಲಿಲ್ಲ.ಇದನ್ನು ಗಮನಿಸಿದ ಗದುಗಿನ ಪ್ರತಿಸ್ಠಿತ ಸಂಸ್ಥೆ ಕಲಾವಿಕಾಸ ಪರಿಷತ್ ನ ಸಂಸ್ಥಾಪಕ ಕಾರ್ಯಾಧ್ಯಕ್ಷ ಶ್ರೀ ಚನ್ನವೀರ ಶಾಸ್ತ್ರಿಗಳವರು, ಪರಿಷತ್ ಸದಸ್ಯರೊಂದಿಗೆ ಚರ್ಚಿಸಿ ಪುಟ್ಟರಾಜರ ಹುಟ್ಟುಹಬ್ಬ ಸಮಿತಿಯನ್ನು ರಚಿಸಿ, ಗಣ್ಯ ವರ್ತಕರಾದ ಶ್ರೀ ವಿಶ್ವನಾಥ ರಾಮನಕೊಪ್ಪ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಅವರ ಸ್ನೇಹಿತರನ್ನು ಸೇರಿಸಿಕೊಂಡು ಆವಳಿ ನಗರದ ಸಮಸ್ತ ನಗರಿಕರೆಲ್ಲ ಸೇರಿ ಪ್ರಪ್ರಥಮ ಬಾರಿಗೆ ಪೂಜ್ಯರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಅದೇರೀತಿ ಪ್ರತಿ ವರ್ಷ ಆಚರಿಸುತ್ತ ಬರಲಾಯಿತು. ಅವಳಿ ನಗರಕ್ಕೆ ಮಾತ್ರ ಸೀಮಿತವಾಗಿದ್ದ, ಪುಟ್ಟರಾಜರ ಹುಟ್ಟುಹಬ್ಬದ ಆಚರಣೆಗೆ ಮಾತ್ರ ಮೀಸಲಾಗಿದ್ದ, ಕಲಾವಿಕಾಸ ಸಹ ಸಮಿತಿಯಾಗಿದ್ದ, ಈ ಹುಟ್ಟುಹಬ್ಬ ಸಮಿತಿಯನ್ನು, ಪೂಜ್ಯರ, ಸಂಗೀತ,ಸಾಹಿತ್ಯ,ಧಾರ್ಮಿಕ,ಸಾಮಾಜಿಕ ಸೇವೆಯನ್ನು ಸ್ಮರಿಸುವ ಸಂಸ್ಥೆಯನ್ನಾಗಿ ಯಾಕೆ ಕಟ್ಟಬಾರದೆಂದು ಯೋಚನೆ ಮಾಡಿ, ಸಮಾನ ಮನಸ್ಕ ಪೂಜ್ಯರ ಅಭಿಮಾನಿ ಭಕ್ತರೆಲ್ಲರನ್ನು ಸೇರಿಸಿ, ಈ ಹುಟ್ಟುಹಬ್ಬ ಸಮಿತಿಗೆ 2004 ರಲ್ಲಿ ಡಾ.ಪಂ.ಪುಟ್ಟರಾಜ ಸೇವಾ ಸಮಿತಿ (ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗ) ಎಂದು ಪುನರ್ ನಾಮಕರಣ ಮಾಡಲಾಯಿತು,ಈ ಸೇವಾ ಸಮಿತಿಯು ಇಂದು ರಾಜ್ಯಾದ್ಯಂತ ತನ್ನ ಚಟುವಟಿಕೆ ವಿಸ್ತರಿಸಿಕೊಂಡಿದೆ ರಾಜ್ಯಾದ್ಯಂತ ಇರುವ ಪೂಜ್ಯರ ಅಭಿಮಾನಿ ಭಕ್ತರ ಪ್ರೀತಿ ಪಾತ್ರವಾಗಿದೆ.ರಾಜ್ಯಾದ್ಯಂತ ಇರುವ ಅವರ ಅಭಿಮಾನಿ ಭಕ್ತರೆಲ್ಲ ಸದಸ್ಯರಾಗಿ ಪೋಷಕರಾಗಿ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸನ್ಮಾನ್ಯ ಶ್ರೀ ಚಂದ್ರಕಾಂತ ಬೆಲ್ಲದ ಮಾಜಿ ಶಾಸಕರು ಧಾರವಾಡ ಇವರು ಗೌ ರವ ಅಧ್ಯಕ್ಷರಾಗಿದ್ದಾರೆ ಶ್ರೀ ವಿಶ್ವನಾಥ ಚ .ರಾಮನಕೊಪ್ಪ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.ಶ್ರೀ ಮೋಹನ ನಾಗಮ್ಮನವರ ಸಾಹಿತಿಗಳು ಧಾರವಾಡ ಮಹಾಪ್ರಧಾನ ಕಾರ್ಯದರ್ಶಿಯಾಗಿ, ಪ್ರಧಾನ ಕಾರ್ಯದರ್ಶಿ ಯಾಗಿ ಶ್ರೀ ಶಶಿಧರ ಮಂಗಳೂರ,ಸಂಚಾಲಕರಾಗಿ ಪಂ.ಸಿ.ಕೆ.ಹೆಚ್ .ಶಾಸ್ತ್ರಿ (ಕಡಣಿ) ಸೇವೆ ಸಲ್ಲಿಸುತ್ತಿದ್ದಾರೆ. ಮಾರ್ಚ 3 ರಂದೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪೂಜ್ಯರ ಹುಟ್ಟುಹಬ್ಬ ಆಚರಣೆ ಆಗಬೇಕೆಂಬ ಸಂಕಲ್ಪ ಇಂದು ಇಡೇರಿದೆ. ಇದೆ ಹತ್ತು ವರ್ಷಗಳ ಹಿಂದೆ ಯಾರು ಆಚರಿಸದವರು ಮನೆ ಮನೆಯಲ್ಲಿ ಆಚರಿಸಲಾಗುತ್ತಿದೆ ಇ ವಾತಾವರಣ ನಿರ್ಮಾಣಮಾಡಿದ ಸಮಿತಿಯ ಉದ್ದೇಶ ಇಡೇರಿದೆ.ಇದಕಿಂತ ಹೆಚ್ಚಿನದ್ದು ನಮಗಿನ್ನೇನು ಬೇಕು ? ಇ ಸಮಿತಿಯು ಪುಟ್ಟರಾಜರ ಲಿಂಗೈಕ್ಯ ದಿನ ಸಪ್ಟೆಂಬರ 17 ರಂದು ಅಂತರ ರಾಷ್ಠ್ರೀಯ ಮಟ್ಟದ ಸಂಗೀತ ಸಮಾರೋಹ ವನ್ನು ಹಮ್ಮಿಕೊಳ್ಳಲು ಪ್ರಯತ್ನಿಸುತ್ತಿದೆ. ಪೂಜ್ಯರ ಆಗಲಿಕೆಯ ದುಖದಿಂದ ಹೊರಬರಲಾಗದೆ ಸಣ್ಣ ಪ್ರಮಾಣದ ಸಮಾರಂಭ ಮಾತ್ರ ಹಮ್ಮಿ ಕೊಳ್ಳಲಾಗಿತ್ತುಮುಂದಿನ ದಿನಗಳಲ್ಲಿಸಪ್ಟೆಂಬರ17 ಅವಿಸ್ಮರಣೆದಿನವನ್ನಾಗಿ ಅಂದು ಎಲ್ಲದಾರಿಗಳು ಗದುಗಿನಕಡೆಗೆ ಎನ್ನುವ ರೀತಿಯಲ್ಲಿ ಸಮಾರಂಭಹಮ್ಮಿಕೊಳ್ಳಲಿದ್ದೇವೆ
ನಿಮ್ಮ ಸಹಕಾರದ ಶ್ರೀ ರಕ್ಷೆ ನಮಗಿದೆ ಎಂದು ನಂಬಿದ್ದೇವೆ.ಈ ಸಮಿತಿಯು (Regd,under the KarnatakaSocietiesRegstration Act 1960) ನೋಂದಾಯಿಸಲಾಗಿದೆ. ಸ್ಥಾಪನೆ:2001ನೋo,ಸಂಖೆ 59. ಸಮಿತಿಯ ಕೆಲವು ಮುಖ್ಯ ಉದ್ದೇಶಗಳು : ಪೂಜ್ಯರ, ಜೀವನ, ಸಾಧನೆ, ಸಂದೇಶ ಪ್ರಚಾರ ಮತ್ತು ಪ್ರಸಾರ. ಪೂಜ್ಯರ ಸಾಹಿತ್ಯ ಮರು ಮುದ್ರಣ, ಅಪ್ರಕಟಿತ ಸಾಹಿತ್ಯ ಪ್ರಕಟಣ. ಸಾಹಿತ್ಯ, ಸಂಗೀತ, ನೃತ್ಯ ಕಲಾ ಸಮ್ಮೇಳನ ಆಯೋಜನ. ಕವಿ, ಕಲಾವಿದ, ಸಾಹಿತಿ, ಸಮಾಜ ಸೇವಕರಿಗೆ ಮತ್ತು ಸಾಂಸ್ಕೃತಿಕ ಸಂಘಟಕರಿಗೆ ಸನ್ಮಾನ. ಸಮಿತಿಯ ಪ್ರತಿಷ್ಠಿತ ಪ್ರಶಸ್ತಿಗಳು : (1) ಡಾ.ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರ. ವರ್ಷದ ಶ್ರೇಷ್ಠ ಪುಸ್ತಕ ಪ್ರಶಸ್ತಿ.(2) ಡಾ.ಪಂ.ಪುಟ್ಟರಾಜ ಸಾಹಿತ್ಯ ಸಮ್ಮಾನ ಕವಿ,ಕಲಾವಿದ ಸಾಹಿತಿ ಸಂಘಟಕರ ಜೀವಮಾನದ ಶ್ರೇಷ್ಠ ಸಾಧನಾ ಗೌರವ ಪ್ರಶಸ್ತಿ.(3) ಡಾ.ಪಂ.ಪುಟ್ಟರಾಜ ಕೃಪಾಭೂಷಣ ಸತ್ಕಾರ ಸರ್ವ ಶ್ರೇಷ್ಠ ಅಬಿಮಾನಿ ಭಕ್ತ ನೀಡುವ ಪ್ರಶಸ್ತಿ.(4) ಡಾ.ಪಂ.ಪುಟ್ಟರಾಜ ಗವಾಯಿ ಯುವಪುರಸ್ಕಾರ ಸಂಗೀತ,ಸಾಹಿತ್ಯ,ನೃತ್ಯ ಕಲಾ ರಾಜ್ಯಪ್ರಶಸ್ತಿ. ಸಮಿತಿಯ ಪ್ರಮುಖ ಕಾರ್ಯಕ್ರಮಗಳು : ಮಾರ್ಚ ,3 ರಂದು ಪೂಜ್ಯರ ಜಯಂತೋತ್ಸವದ ಅಂಗವಾಗಿ ಸಾಹಿತ್ಯೋತ್ಸವ, ಸಪ್ಟೆಂಬರ 7 ರಂದು ಪುಣ್ಯಸ್ಮರಣೋತ್ಸವದ ಅಂಗವಾಗಿ ಸಂಗೀತೋತ್ಸವ. ಡಿಸೆಂಬರ 31ರಂದು ಹೊಸ ವರ್ಷಕ್ಕೆಸ್ವಾಗತಿಸುವ ಗುರು ಗುಣ ಗಾನ ಅಭಿಮಾನಿ ಭಕ್ತರ ಬೃಹತ ಸಮಾವೇಶ. ಯುವಜನ ಕಲಾ ಪ್ರತಿಭೋತ್ಸವ.