ಜೂನ್ 18, 2014

ಸಾವಿರದ ಶರಣು ಸಮರ್ಪಣೆ


ಪೂಜ್ಯ ಗುರು ಪುಟ್ಟರಾಜರ 

ಜನ್ಮ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ 

ಗುರು ಪುಟ್ಟರಾಜರಿಗೆ 

ಸಾವಿರದ ಶರಣು ಸಮರ್ಪಣೆ

ಡಿಸೆಂಬರ - 6 - 2014 . ಹುಬ್ಬಳ್ಳಿ.

ಈ ಸಮಾರಂಭದಲ್ಲಿ ಈ ಫೆಸ್ ಬುಕ್ ಅಭಿಮಾನಿ ಭಕ್ತರನ್ನು ಒಳಗೊಂಡಂತೆ ಸಮಿತಿಯ ಸದಸ್ಯ 101 ಜನ ಪೂಜ್ಯರ ಅಭಿಮಾನಿ ಭಕ್ತರಿಗೆ “ಗುರು ಪುಟ್ಟರಾಜ ಕೃಪಾ ಸಮ್ಮಾನ” ಗೌರವ ಅಭಿನಂದನಾ ಪ್ರಶಸ್ತಿ ಸಾವಿರದ ಸವಿ ನೆನಪು ನೀಡಲು ನಿರ್ಧರಿಸಿದ್ದೇವೆ. ಈ ಪ್ರಶಸ್ತಿ ಸ್ವೀಕರಿಸಲು ಆಸಕ್ತರಾಗಿರುವ ಸಮಿತಿಯ ಸದಸ್ಯರು ಅಥವಾ ಸದಸ್ಯರಾಗಲು ಒಪ್ಪುವವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ೧. ಸಮಿತಿಯ ಸದಸ್ಯರಾಗಿರಬೇಕು ಅಥವಾ ಸದಸ್ಯರಾಗಲು ಬದ್ದರಾಗುರಬೇಕು. ೨. ನೇತ್ರದಾನ ಮಾಡಿರಬೇಕು ಅಥವಾ ನೇತ್ರದಾನ ಮಾಡಲು ಒಪ್ಪಿಕೊಳ್ಳಬೇಕು. ೩. ಪುಟ್ಟರಾಜರ ವಚನ ಸಾಹಿತ್ಯ ಕೃತಿ ಕನಿಷ್ಠ ೫೦ ಪುಸ್ತಕ ಉಚಿತ ವಿತರಣೆ ಮಾಡಿದವರಾಗಿರಬೇಕು (ಆ ಕೃತಿಗಳು ನಮ್ಮ ಸಮಿತಿಯ ಪ್ರಕಟಣೆ ಯಾಗಿರಬೇಕು) ಅಥವಾ  ವಿತರಣೆ ಮಾಡುವುದಕ್ಕೆ ಬದ್ದರಾಗಿರಬೇಕು.
ಈ ಸೇವೆ ನಿಮ್ಮಿಂದ ಸಾಧ್ಯವೇ ? ಸಾಧ್ಯವಾಗುವದಾದರೆ ಇಂದೆ ನಿಮ್ಮಹೆಸರು ನೊಂದಾಯಿಸಿಕೊಳ್ಳಿ ಈ ಅಪೂರ್ವ ಸಾವಿರದ ಸುವರ್ಣ ಸವಿ ನೆನಪು ನಿಮ್ಮದಾಗಿಸಿಕೊಳ್ಳಿ ಮಾಹಿತಿಗಾಗಿ ನಮ್ಮ puttarajasevasamiti@gamil.com ಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ. ವಂದನೆಗಳೊಂದಿಗೆ ಶ್ರೀ ವೇ. ಚನ್ನವೀರಸ್ವಾಮಿ ಹಿರೇಮಠ ಕಡಣಿ ಸಂಚಾಲಕರು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ) ಕೇಂದ್ರ ಸಮಿತಿ ಗದಗ.

ಆತ್ಮೀಯ ಅಭಿಮಾನಿ ಭಕ್ತರೆ 

ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಜನ್ಮ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಡಾ. ಪಂ. ಪುಟ್ಟರಾಜ ಪುಟ್ಟರಾಜ ಸೇವಾ ಸಮಿತಿಯು, ಮನೆ ಮನೆಯಲ್ಲಿ “ಗಾನಯೋಗಿ ಆರಾಧನೆ ” ಮಠ ಮಂದಿರದ ಪ್ರಾಂಗಣದಲ್ಲಿ “ಗುರು ಕುಮಾರ ಪಂಚಾಕ್ಷರಿ ವಚನ ಸಂಗೀತೋತ್ಸವ ”, ಕನ್ನಡ ಪರ ಸಂಘಟನೆಗಳ ಸಹ ಯೋಗದೊಂದಿಗೆ ‘ನಾಡೋಜ ’ ಕವಿ ಪುಟ್ಟರಾಜ ಸಾಹಿತೋತ್ಸವ, ಅಭಿಮಾನಿ ಭಕ್ತರಿಂದ ಅಭಿಮಾನಿ ಭಕ್ತರಿಗಾಗಿ “ಗುರು ಪುಟ್ಟರಾಜರಿಗೆ ಸಾವಿರದ ಶರಣು ಸಮರ್ಪಣೆ ” ಪುಟ್ಟರಾಜರ ನಾಲ್ಕನೆಯ ಪುಣ್ಯ ಸ್ಮರಣೆಯ “ ಗುರು ಗುಣ ಗಾನ ” ಶಾಸ್ತ್ರೀಯ ಸಂಗೀತ ಸಮ್ಮೇಳನ, “ ಕಣ್ಣಿದ್ದರೇನಂತೆ ” ಪುಟ್ಟರಾಜರ ವಚನಗಳ ಹೊಳಹುಗಳು ಪುಸ್ತಕ ಪ್ರಕಟಣೆ, ಪಂಡಿತ ಪುಟ್ಟರಾಜ ಪ್ರಕಾಶನ ಸಂಸ್ಥೆ ಸ್ಥಾಪನೆ, ಸಮಿತಿಯ ಮುಖವಾಣಿ ‘ ಕನ್ನಡ ಮಾಸ ಪತ್ರಿಕೆ ’ ಪ್ರಕಟಣೆ , ಪುಟ್ಟರಾಜರ ಜನುಮ ದಿನದಂಗವಾಗಿ “ಕನ್ನಡ ಸಂಸ್ಕೃತಿ ಸಂಭ್ರಮ ” ಸಂಗೀತ ನೃತ್ಯ ಸಮ್ಮೇಳನ, ಪ್ರತಿ ತಿಂಗಳು ಎರಡು ಕಾರ್ಯಕ್ರಮ ರಾಜ್ಯದ ತುಂಬ ಹಮ್ಮಿಕೊಳ್ಳಲು ಕ್ರಿಯಾಯೋಜನೆ ಸಿದ್ದಪಡಿಸಿದೆ. ಈ ಅಪೂರ್ವ ಕಾರ್ಯಕ್ರಮ ನಿಮ್ಮಿಂದ ನಿಮಗಾಗಿ. ಬನ್ನಿ, ತನು ಮನ ಧನದಿಂದ ನಮ್ಮೊಂದಿಗೆ ಕೈಜೋಡಿಸಿ ಗುರುಸೆವೆಗೆ ಸಹಕರಿಸಿ. ಈ ಕಾರ್ಯಕ್ರಮಕ್ಕೆ ಧನ ಸಹಾಯ ನೀಡುವವರು ಕಲಾಲೋಕ ಗದಗ ಹೆಸರಲ್ಲಿ D.D. ಅಥವಾ ಚೆಕ್ಕ್ ಮೂಲಕ ಮಾತ್ರ ಸಂದಾಯ ಮಾಡಬೇಕು D.D. ಅಥವಾ ಚೆಕ್ ಸಂಚಾಲಕರು ಪುಟ್ಟರಾಜ ಸೇವಾ ಸಮಿತಿ (ರಿ) ಪಂಚಾಕ್ಷರಿ ನಗರ ೪ನೆ ಅಡ್ಡರಸ್ತೆ ಗದಗ -582101 ಇಲ್ಲಿಗೆ ಕಳಿಸಿಕೊಡಬಹುದು. ಹೆಚ್ಚಿನ ಮಾಹಿತಿಗಾಗಿ 08372-220432 ಗೆ ಕರೆ ಮಾಡಬಹುದು

ಜೂನ್ 15, 2014

ನಿಮ್ಮ ಸಹಕಾರವೆ ನಮಗೆ ಶ್ರೀರಕ್ಷೆ

ನಿಮ್ಮ ಸಹಕಾರವೆ ನಮಗೆ ಶ್ರೀರಕ್ಷೆ 
ಶ್ರೀ ವಿಶ್ವನಾಥ ರಾಮನಕೊಪ್ಪ 
ಅಧ್ಯಕ್ಷರು:ಡಾ.ಪಂ.ಸೇವಾ ಸಮಿತಿ ಗದಗ

ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗವಾದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಯ ದಶಮಾನೋತ್ಸವ ಮತ್ತು ಪೂಜ್ಯ ಗುರು ಪುಟ್ಟರಾಜರ ಜನ್ಮಶತಮಾನೋತ್ಸವ ವರ್ಷಾಚರಣೆ ಅಂಗವಾಗಿ, ಸಮಿತಿಯ ಹಿಂದಿನ ಕಾರ್ಯಕ್ರಮಗಳಾದ ‘ಕನ್ನಡ ಸಂಸ್ಕೃತಿ ಸಂಭ್ರಮ’ ಮಾರ್ಚ ತಿಂಗಳು ಬೆಂಗಳೂರಿನಲ್ಲಿ, ‘ನಾಡೋಜ ಕವಿ ಪುಟ್ಟರಾಜ ಸಾಹಿತ್ಯೋತ್ಸವ ’ಕನ್ನಡ ಪರ ಸಾಂಸ್ಕೃತಿಕ ಸಂಘಟನೆಗಳ ಸಹಕಾರದೊಂದಿಗೆ ಆಯ್ದ ಯಾವುದಾದರು ಜಿಲ್ಲೆಯಲ್ಲಿ , ‘ಗುರು ಗುಣ ಗಾನ ’ ಸಪ್ಟೆಂಬರ ೧೭ ರಂದು ಗದಗನಲ್ಲಿ ಹಮ್ಮಿಕೊಳ್ಳುತ್ತ ಬಂದಿರುವ ಕಾರ್ಯಕ್ರಮಗಳೊಂದಿಗೆ, ಈ ವರ್ಷ ಮಾತ್ರ ಹಮ್ಮಿಕೊಳ್ಳುವ ಮನೆ ಮನದ ಅಂಗಳದಲ್ಲಿ ‘ಗಾನಯೋಗಿ ಆರಾಧನೆ ‘ ತಿಂಗಳ ೨ನೆಯ ಶನಿವಾರದ ವಚನ ಸಂಗೀತ ಕಾರ್ಯಕ್ರಮ. ಪ್ರತಿ ತಿಂಗಳು ಪೂರ್ಣಿಮೆ ಯಂದು ಮಠ ; ಮಂದಿರದ ಆವರಣದಲ್ಲಿ ಗುರುಕುಮಾರ ಪಂಚಾಕ್ಷರೇಶ್ವರ ‘ವಚನ ಸಂಗೀತೋತ್ಸವ ’ ವರ್ಷಾಚರಣೆಯ ವಿಶೇಷ ಕಾರ್ಯಕ್ರಮಗಳು ರಾಜ್ಯಾದ್ಯಂತ ಅಭಿಮಾನಿ ಭಕ್ತರ ಮನೆಯಲ್ಲಿ ಆಯ್ದ ಮಠ ಮಂದಿರಗಳಲ್ಲಿ ಹಮ್ಮಿಕೊಳ್ಳಲು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ) ಗದಗ ಕೇಂದ್ರ ಕಾರ್ಯ ಕಾರಣಿ ಮಂಡಳಿಯು ಈ ಬಗ್ಗೆ ಅಂತಿಮ ತಿರ್ಮಾನ ಕೈಗೊಂಡು ಅಧಿಕೃತ ಗೊಳಿಸಿದೆ . ಇದೇ ಸಂಧರ್ಭದಲ್ಲಿ ರಾಜ್ಯ ಘಟಕ ಅಸ್ತಿತ್ವಕ್ಕೆ ತರುವ ಉದ್ದೇಶದಿಂದ ಶ್ರೀ ಚನ್ನವೀರ ಸ್ವಾಮೀ ಹಿರೇಮಠ ಶಾಸ್ತ್ರೀ ಕಡಣಿ ಇವರನ್ನು ರಾಜ್ಯ ಸಂಚಾಲಕರನ್ನಾಗಿ ನೇಮಕ ಮಾಡಿ ರಾಜ್ಯ ಕಾರ್ಯಕಾರಣಿ ಮಂಡಳಿಗೆ ಪದಾಧಿಕಾರಿಗಳ ಆಯ್ಕೆಮಾಡಿ ಪಟ್ಟಿ ಸಿದ್ದಪಡಿಸಿ ಕೇಂದ್ರ ಸಮಿತಿಗೆ ವರದಿ ಮಾಡಿಕೊಳ್ಳಲು ತಿಳಿಸಲಾಗಿತ್ತು, ಸುಮಾರು ೪ ತಿಂಗಳಿಂದ ರಾಜ್ಯದ ಅಭಿಮಾನಿ ಭಕ್ತರ ಸಂಘಟನೆಗಾಗಿ ಪ್ರಯತ್ನಿಸಿ, ರಾಜ್ಯ ಕಾರ್ಯ ಕಾರಣಿ ಮಂಡಳಿಯ ಪದಾಧಿಕಾರಿಗಳ ಪಟ್ಟಿ ಸಿದ್ದಪಡಿಸಿ ಕೇಂದ್ರ ಸಮಿತಿಗೆ ನೀಡಿದ್ದಾರೆ. ಈ ಪದಾಧಿಕಾರಿ ಪಟ್ಟಿಗೆ ಕೇಂದ್ರ ಸಮಿತಿ ಅನುಮೋದನೆ ನೀಡ ಬೇಕಾಗಿದ್ದು, ದಿನಾಂಕ ೧೭ ಜೂನ ೨೦೧೪ ರಂದು ನಡೆಯುವ ಕಾರ್ಯಕಾರಣಿ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗುವುದು. ಇದೆ ಸಂಧರ್ಭದಲ್ಲಿ ರಾಜ್ಯ ಕಾರ್ಯ ಕಾರಣಿ ಮಂಡಳಿ ಅಸ್ತಿತ್ವಕ್ಕೆ ಬಂದ ದಿನದಿಂದ ರಾಜ್ಯ ಸಂಚಾಲಕರ ಹುದ್ದೆ ಮುಂದುವರಿಸಲು ಅವಕಾಶ ವಿಲ್ಲದ ಕಾರಣ .ಶ್ರೀ ಕಡಣಿ ಶಾಸ್ತ್ರೀ ಯವರನ್ನು ಕೇಂದ್ರ ಸಮಿತಿಯ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯ ಸಮಿತಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದ ದಿನದಿಂದಲೇ ಕೇಂದ್ರ ಸಂಚಾಲರ ನೇಮಕಾತಿ ಆದೇಶವು ಜಾರಿ ಬರುತ್ತದೆ. ಕೇಂದ್ರ ಸಮಿತಿಯ ಆಡಳಿತಾತ್ಮಕ ಹೊಣೆ ಯೊಂದಿಗೆ ರಾಜ್ಯ ಘಟಕಗಳ ಮುಖ್ಯಸ್ಥರಾಗಿ, ರಾಜ್ಯ ಉಸ್ತುವಾರಿಯನ್ನು ವಹಿಸಿಕೊಂಡು ರಾಜ್ಯದ ಮತ್ತು ಹೊರ ರಾಜ್ಯದ ಅಭಿಮಾನಿ ಭಕ್ತರನ್ನು ಈ ಸಮಿತಿಯ ತೆಕ್ಕೆಗೆ ತಂದು ಕೊಳ್ಳುವ ಪ್ರಯತ್ನ ಶ್ರೀ ಶಾಸ್ತ್ರೀಗಳು ಮುಂದುವರಿಸಲಿದ್ದಾರೆ . ತಮ್ಮೆಲ್ಲರ ಸಹಕಾರ ದಿಂದ ಮಾತ್ರ ನಮ್ಮ ಕನಸು ನನಸಾಗಲು ಸಾಧ್ಯ ಬನ್ನಿ ನಾವು ನೀವೆಲ್ಲ ಸೇರಿ ಗುರು ಸೇವೆ ಮಾಡೋಣ.

ಇಂತಿ ತಮ್ಮ ವಿಶ್ವಾಸಿ ವಿಶ್ವನಾಥ ರಾಮನಕೊಪ್ಪ ಸಂಸ್ಥಾಪ ಅದ್ಯಕ್ಷರು ಪುಟ್ಟರಾಜರ ಅಭಿಮಾನಿ ಭಕ್ತರ ಮಹಾ ಬಳಗ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ)  ಗದಗ

ಜೂನ್ 14, 2014

ನೀವು ಆಯ್ಕೆ ಮಾಡಿದ ಪತ್ರಿಕೆ ಹೆಸರುಗಳು

ಆತ್ಮೀಯರೆ....  

ಸುಮಾರು ಮೂರು ದಿನಗಳಿಂದ ಅತ್ಯಂತ ಉತ್ಸಾಹ ಮತ್ತು ಪ್ರೀತಿ, ಭಕ್ತಿಯಿಂದ ನಮ್ಮ ಪತ್ರಿಕೆ ಹೆಸರಿಡಲು ಭಾಗಿಯಾಗಿ ಸಹಕರಿಸಿದ್ದಿರಿ.  ನಮ್ಮ ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗದ  ಸಮಸ್ತ ಸದಸ್ಯರಿಗೆ ಅಭಿನಂದನೆಗಳು. ನಿಮ್ಮ ಭಾಗವಹಿಸುವಿಕೆಯಿಂದ ಅಭಿಮಾನ ತೋರಿದ್ದಿರಿ ಮತ್ತೊಮ್ಮೆ ಧನ್ಯವಾದಗಳು. ಮೊದಲ ಸುತ್ತಿನ ಹತ್ತು ಹೆಸರುಗಳನ್ನು ಆಯ್ಕೆ ಮಾಡಿಕೊಟ್ಟ Anitha P Poojary ಅವರಿಗೂ ಅಭಿ ನಂದಿಸುತ್ತೇವೆ. ನೂರಕ್ಕೆ % 75 ರಷ್ಟು ಅಂಕು ಪಡೆದುಕೊಂಡು ‘ಪುಟ್ಟರಾಜ ವಾಣಿ’ ಹೆಸರು ಮೊದಲ ಸ್ಥಾನ ಗಳಿಸಿದೆ. ಈ ಹೆಸರು ಸೂಚಿಸಿದವರು Deepak Karne, ನೂರಕ್ಕೆ % ೫೦ ಅಂಕು ಪಡೆದುಕೊಂಡು ‘ಗವಾಯಿ ಸಂದೇಶ’ ಹೆಸರು ಎರಡನೇ ಸ್ಥಾನ ಗಳಿಸಿದೆ. ಈ ಹೆಸರು ಸೂಚಿಸಿದವರು Santosh Kolaki. ನೂರಕ್ಕೆ % ೪೫ ಅಂಕು ಪಡೆದುಕೊಂಡು ‘ಕಲ್ಪವೃಕ್ಷ’ ಹೆಸರು ಮೂರನೆ ಸ್ಥಾನ ಗಳಿಸಿದೆ. ಈ ಹೆಸರು ಸೂಚಿಸಿದವರು Yellappa narasannavar. ಇವರೆಲ್ಲರಿಗೂ ಅಭಿನಂದನೆಗಳು.  ‘ಗವಾಯಿ ಸಂದೇಶ’ ಮತ್ತು ‘ಕಲ್ಪವೃಕ್ಷ’ ಈ ಎರಡು ಹೆಸರುಗಳನ್ನು ಸ್ವಲ್ಪ ಮಾರ್ಪಡಿಸಿ ‘ಪುಟ್ಟರಾಜ ಸಂದೇಶ’ ‘ಕಲಾ ಕಲ್ಪವೃಕ್ಷ’ ಎಂದು ಎರಡು ಹೆಸರು ಸಿಧ್ಧಪದಿಸಿದ್ದೇವೆ. ಈ ಮೂರೂ ಹೆಸರಿನೊಂದಿಗೆ ನಮ್ಮ ಎರಡು ಹೆಸರುಗಳನ್ನು ಸೇರಿಸಿ, ಹೆಸರು ಆಯ್ಕೆಗಾಗಿ ದೆಹಲಿಗೆ ಕಳಿಸಿ ಕೊಡುತಿದ್ದೇವೆ. ನಮ್ಮ ಸಮಿತಿಯ ಹೆಸರು ನಾಳೆ ನಿಮ್ಮ ಮುಂದೆ ಇಡುತ್ತೇವೆ.ಆಯ್ಕೆ ಮಾಡಿ ಕೊಡುವಿರಂತೆ. ವಂದನೆಗಳೊಂದಿಗೆ ಸಂಘಟಕರು . 

Photo