॥ಪಲ್ಲವಿ॥
ಸಂಗೀತ ಸಾಹಿತ್ಯ ಕಲಾ ಸರಸ್ವತಿಗೆ ತನ್ನ ಕಣ್ಣಿತ್ತು, ಕುರುಡನಾಗಿ ಈ ಧರೆಗೆ ಬಂದು,ತನ್ನಂತಹ ಅನಂತ ಕುರುಡರಿಗೆ ಕಣ್ಣಾದವರು ಮಾತ್ರವಲ್ಲದೆ ಕಣ್ಣಿದ್ದೂ ಕುರುಡರಂತಿದ್ದ ಅನೇಕ ಜನರ ಕಣ್ಣು ತೆರಸಿದ ಈ ಶತಮಾನದ ಅದ್ಭುತ ಮಹಾಚೇತನ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರು. ಇವರ ಜೀವನವೇ ಒಂದು ಸುಂದರ ಕವನ.ಪೂಜ್ಯರ ಹುಟ್ಟು ಬದುಕು ಸಾವು ಲೋಕದ ಜನರಂತೆ ಇದ್ದರೂ ಕೂಡಾ ಅದು ಕೇವಲ ಕಥೆಯಾಗದೆ ಲೀಲಾ ವಿಳಾಸವಾಗಿದೆ. ಹಾದಿ ಬೀದಿಯಲ್ಲಿ ಹಾಡು ಹೇಳಿ ಭಿಕ್ಷೆ ಬೇಡಿ ಬದುಕುವ ಜನರ ಉಧ್ಧಾರಕಾಗಿ ಕಾಡಶಟ್ಟಿ ಹಳ್ಳಿಯಲ್ಲಿ ಹುಟ್ಟಿದ ಕುರುಡ ಗದುಗಯ್ಯನನ್ನು ಕರೆತಂದು, ಗಾನಯೋಗಿ ಪಂಚಾಕ್ಷರಿ ಗವಾಯಿಯನ್ನಾಗಿ ಮಾಡಿ, ತನ್ನಂತಹ ಕುರುಡರ ಉಧ್ಧಾರದ ಸಮಾಜ ಸೇವಾ ಧೀಕ್ಷೆ ನೀಡಿ ಸಮಾಜಕ್ಕೆ ಸಮರ್ಪಿಸಿದವರು ಹಾನಗಲ್ಲ ಕುಮಾರ ಶಿವಯೋಗಿಗಳು. ಹಾನಗಲ್ಲ ಕುಮಾರೇಶನ ಸಂಕಲ್ಪದಂತೆ, ಗಾನಯೋಗಿ ಪಂಚಾಕ್ಷರಿ ಗವಾಯಿಗಳವರು ಅಂಧ ಅನಾಥರಿಗೆ ಸಂಗೀತ ವಿದ್ಯೆ ದಾನಮಾಡುತ್ತ, ಕುರುಡ ಕುಂಟರ ಕುಬೇರರಾದರು;ಅಂಧರ ಬಾಳಿಗೆ ಕೈಗೊಲಾದರು. ನಂತರ ಇದೆ ಮಾರ್ಗದಲ್ಲಿ ಮುನ್ನಡೆದ ಅವರ ಪಟ್ಟದ ಶಿಷ್ಯ ಪುಟ್ಟರಾಜರು ಗುರುವಿನ ಮೀರಿಸಿದ ಶಿಷ್ಯರಾಗಿ, ತಮ್ಮ ಬಹುಮುಖ ಸಮಾಜ ಸೇವೆಯಿಂದ, ನಡೆದಾಡುವ ದೇವ, ಭುವಿಯ ಭವಂತ, ಈ ನೆಲದ ನಕ್ಷತ್ರವೆನಿಸಿಕೊಂಡ ಈ ಶತಮಾನದ ಅದ್ಭುತ ವ್ಯಕ್ತಿ ಗುರು ಪುಟ್ಟರಾಜರ ಜೀವನ,ಅದು ಸಾಹಿತ್ಯ ಸರಸ್ವತಿ ರಚಿಸಿದ ಸುಂದರ ಕವನ. ಶ್ರೀ.ಮ.ನಿ.ಪ್ರ ಹಾನಗಲ್ಲ ಕುಮಾರ ಶಿವಯೋಗಿಗಳವರು, ಈ ಸಮಾಜ ಎಂದೂ ಮರೆಯದ ಕೊಡುಗೆಯಾಗಿ ಪ್ರಮುಖ ಮೂರು ಮುಖ್ಯ ಸಂಸ್ಥೆಗಳನ್ನು ಈ ನಾಡಿಗೆ ನೀಡಿದರು.ಒಂದನೆಯದ್ದು ಶಿವಯೋಗ ಮಂದಿರ ಎರಡನೆಯದ್ದು ಅಖಿಲ ಭಾರತ ವೀರಶೈವ ಮಹಾಸಭೆ ಮೂರನೆಯದ್ದು ಶ್ರೀ ವೀರೇಶ್ವರ ಪುಣ್ಯಾಶ್ರಮ.ಈ ಮೂರು ಸಂಸ್ಥೆಗಳು ಕುಮಾರೇಶನ ಕೊಡುಗೆಯಾಗಿ ನಾಡವರು ಗುರುತಿದ್ದಾರೆ. ಈಗಾಗಲೇ ಶಿವಯೋಗ ಮಂದಿರ ಮತ್ತು ಅಖಿಲ ಭಾರತ ವೀರಶೈವ ಮಹಾ ಸಭೆ ತಮ್ಮ ಜನ್ಮ ಶತಮಾನೋತ್ಸವ ವೈಭವದಿಂದ ಆಚರಿಸಿಕೊಂಡಿವೆ. ಈಗ ಪುಣ್ಯಾಶ್ರಮಕ್ಕೆ ಜನ್ಮಶತಮಾನೋತ್ಸವದ ಸಂಭ್ರಮ.ಶತಮಾನೋತ್ಸವದ ಹೊಸ್ತಿಲಲ್ಲಿ ಇರುವ ಆಶ್ರಮಕ್ಕೆ, ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಶಿವಯೋಗ ಮಂದಿರಕ್ಕೆ ಸಿಕ್ಕ ಪ್ರಾಧಾನ್ಯತೆ ಸಿಗದೇ ಇರುವದು ಅತ್ಯಂತ ಖೇದ ಪಡುವ ಸಂಗತಿ. ಶರಣರ ಇರುಹು ಮರಣದಲ್ಲಿ ಕಾಣು ಎನ್ನುವಹಾಗೆ ಪುಟ್ಟರಾಜರು ಲಿಂಗೈಕ್ಯರಾಗುವವರೆಗೆ ಪುಟ್ಟರಾಜರು ಏನಾಗಿದ್ದರು ಎಂಬುವುದನ್ನು ಸರಕಾರವಾಗಲಿ ಸಮಾಜದ ಪ್ರಮುಖರಾಗಲಿ ಗಮನಿಸಿರಲೇಯಿಲ್ಲ. ಯಾವ ಮದರ್ ಥೆರಿಸಾಗಿಂತ ಕಡಿಮೆಯಲ್ಲದ ಅನಾಥರ ಸೇವೆಮಾಡಿದ ಪುಟ್ಟರಾಜರಿಗೆ ಭಾರತ ರತ್ನ ನೀಡಿ ಗೌರವಿಸಬೇಕಾಗಿತ್ತೋ ಆನಿಟ್ಟಿನಲ್ಲಿ ಪ್ರಯತ್ನಗಳಾಗಲಿಲ್ಲ.ಯಾವ ಭೀಮಸೇನ ಜೋಶಿಯವರಿಗಿಂತ ಕಡಿಮೆಯಲ್ಲದ ಸಂಗೀತ ಸೇವೆ ಮತ್ತು ಶಿಷ್ಯ ಪ್ರಶಿಷ್ಯರನ್ನು ಭಾರತೀಯ ಸಂಗೀತ ಪ್ರಪಂಚಕ್ಕೆ ನೀಡಿದ್ದರೂ, ಕನ್ನಡಿಗರು ಮರೆತೇ ಹೋದ ಪುಣೆ ನಿವಾಸಿಯಾಗಿದ್ದ ಭೀಮಸೇನ ಜೋಶಿಯವರಿಗೆ ಅವರಿದ್ದಲಿಗೆ ಹೋಗಿ ನಮ್ಮ ಕರ್ನಾಟಕ ಸರಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿಬಂತು. ಇಲ್ಲಿರುವ ಪುಟ್ಟರಾಜರ ನೆನಪು ಆಗಲಿಲ್ಲ.ವಿಶ್ವಪ್ರಸಿದ್ಧ ಸಂಗೀತಗಾರರನ್ನು ಈ ದೇಶಿ ಸಂಗೀತ ಕ್ಷೇತ್ರಕ್ಕೆ ನೀಡಿದ, ವಿಶ್ವಕ್ಕೆ ಮಾದರಿಯಾದ ಗುರುಕುಲ ಮಾದರಿಯ ಸಂಗೀತ ಶಾಲೆಯೊಂದು ನೂರು ವರ್ಷಗಳ ಹಿಂದೆ ಸ್ಥಾಪಿಸಿ ಇಂದಿಗೂ ಕೂಡಾ ಮುಂದುವರಿಸಿಕೊಂಡು ಬಂದ ಈ ಹಿಂದೂಸ್ತಾನಿ ಶಾಸ್ತ್ರಿಯ ಸಂಗೀತ ಪರಂಪರೆಯ ಹರಿಕಾರರಾಗಿದ್ದ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ಹೆಸರಾಗಲಿ ಪುಟ್ಟರಾಜರ ಹೆಸರಾಗಲಿ ಹುಬ್ಬಳಿಯಲ್ಲಿ ಸ್ಥಾಪಿಸಿದ ಗುರುಕುಲಕ್ಕೆ ಡಾ.ಗಂಗೂಬಾಯಿ ಹಾನಗಲ್ಲರವರ ಹೆಸರಿಡುವಾಗ ಈ ಮಹಾಚೆತನಗಳ ನೆನಪಾಗಲಿಲ್ಲ. ಹುಬ್ಬಳ್ಳಿಯಲ್ಲಿಯ ಗುರು ಕುಲಕ್ಕೆ ಹಾನಗಲ್ಲವರ ಹೆಸರಿಟ್ಟಿದ್ದಿರಿ ದಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಿದ್ದಿರೀ ದಾರವಾಡದ ಅವರಮನೆ ಸ್ಮಾರಕಮಾಡಿದ್ದಿರಿ ಮೈಸೂರಲ್ಲಿ ಸ್ಥಾಪಿಸಲು ಉದ್ದೇಶಿಸಿದ ಸಂಗೀತ ವಿಶ್ವವಿದ್ಯಾಲಯಕ್ಕಾದರೂ ಪಂಚಾಕ್ಷರಿ ಗವಾಯಿಗಳವರ ಹೆಸರಿಡಿ ಎಂದು ಕೇಳಿದರೆ ಸರಕಾರದ ಕಿವಿಗೆ ಕೇಳಿಸಲೇ ಇಲ್ಲ.ದಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗಾನಯೋಗಿ ಪಂಚಾಕ್ಷರಿ ಗಾವಾಯಿ ಅಧ್ಯಯನ ಪೀಠ ಸ್ಥಾಪನೆಗೆ ಅನುಮತಿ ದೊರೆತಿದ್ದರು ಅದಕ್ಕೆ ಮೂಲ ಧನ ಸರಕಾರ ಬಿಡುಗಡೆಮಾಡದೆ ಆ ಕೆಲಸ ಅಲ್ಲೇ ನಿಂತಿದೆ. ಈ ಉಭಯ ಗಾನ ಗುರುಗಳ ಸೇವೆ ಪಡೆದ ಈ ಸಮಾಜ ಅವರಿಗೆ ಪ್ರತಿಯಾಗಿ ಸಲ್ಲಿಸಿದ ಕೊಡುಗೆಯೇನು? ಎಂದು ಪ್ರಶ್ನಿಸಿಕೊಂಡರೆ ಉತ್ತರ ಸೂನ್ಯ ಮತ್ತು ನಾಚಿಕೆ ಪಡುವಂತಹದ್ದು.ಈ ಸರಕಾರ ಸಮಾಜ ಏನಾದರು ಮಾಡಲಿ ಬಿಡಲಿ ನಾವಾದರೂ ಅಂದರೆ ಶಿಷ್ಯರಾದರು ಪೂಜ್ಯರ ಋಣ ತಿರಿಸುವ ಕೆಲಸವಾಗಿದೆಯೇ ಎಂದು ಪ್ರಶ್ನಿಸಿಕೊಂಡರೆ ಅಲ್ಲಿಯೂ ಉತ್ತರವಿಲ್ಲ.ಸಾಧ್ಯವಾದಷ್ಟು ಅವರ ಹೆಸರು ಬಳಸಿಕೊಂಡು ಬದುಕುತ್ತಿದ್ದೇವೆ. ಅದೂ ದುರ್ಬಳಕೆ ಮಾಡಿಕೊಳ್ಳುವ ಮೂಲಕ. ಒಂದೇ ಊರಲ್ಲಿ ಇದ್ದರು ಒಬ್ಬರಿಗೊಬ್ಬರು ಸೇರುವದಿಲ್ಲ ತಮಗೆ ಯಾವಾಗ ಬೇಕೊ ಆವಾಗ ಪೂಜ್ಯ್ರರ ಪುಣ್ಯ ಸ್ಮರಣೆ ಜಯಂತಿ ಮಾಡುವುದು ಹಣ ಸಂಗ್ರಹ ಮಾಡುವುದು ಒಬ್ಬರು ಮಾಡುವ ಕಾರ್ಯಕ್ಕೆ ಇನ್ನೊಬ್ಬರು ಕೈ ಜೋಡಿಸುವದಿಲ್ಲ ಒಬ್ಬರು ಮಾಡಿದ್ದಕ್ಕೆ ಇನ್ನೊಬ್ಬರಿಗೆ ಸೇರಿಕೆಯಿಲ್ಲ. ಇದರ ಲಾಭ ಹೆಗ್ಗಣ ರೂಪದಲ್ಲಿ ಯಾರಾರೋ ಸೇರಿಕೊಂಡು ಗುರು ಕೀರ್ತಿಗೆ ಕಳಂಕ ತರುವ ಕಾರ್ಯ ನಡೆಯುತ್ತಿದೆ.ಇತಿಹಾಸದ ಪ್ರಜ್ಞೆಯಿಲ್ಲದ ತಮ್ಮ ಸ್ವ ಹಿತಾಸಕ್ತಿಗೆ ಲಾಭತನಕ್ಕೆ ಕೆಲವು ಜನ ಪೂಜ್ಯರ ಚರಿತ್ರೆ ತಿರುಚಿ ಬರೆಯುವದು ಇತಹಾಸ ತಿರುಚಿ ಬರೆಯುವದು ಯಾರು ಬೇಕಾದವರು ಪುಜ್ಯರ ಗ್ರಂಥಗಳನ್ನು ತಮಗೆ ತಿಳಿದಹಾಗೆ ಸಂಪಾದಿಸಿ ಮಾರಾಟ ಮಾಡಿಕೊಳ್ಳುವುದು ನಡೆದೆಯಿದೆ. ಇದನ್ನೆಲ್ಲಾ ನೋಡಿಕೊಳ್ಳುವ ಹೊಣೆ ಶಿಷ್ಯರು ಹೊರಬೇಕಲ್ಲದೆ ಹೊರುವವರು ಯಾರು?. ನೂರು ವರ್ಷದ ಇತಿಹಾಸವಿರುವ ಈ ಸಂಸ್ಥೆಯ ಸಂಸ್ಥಾಪಕರು ಯಾರು? ಈಗುರುಕುಲದಲ್ಲಿ ಪಾಠ ಪ್ರವಚನ ಹೇಗೆ ನಡೆಯುತಿದ್ದವು? ಪೂಜ್ಯರು ಸಂಚಾರಕ್ಕೆ ಹೋಗಿ ಬಂದ ನಂತರ ಯಾವ ರೀತಿ ಕೈ ತೋಳಿಯುತ್ತಿದ್ದರು? ದಂತಮಂಜನ ಹೇಗೆ ಮಾಡುತಿದ್ದರು? ಯಾವ ಯಾವ ಆಸನಗಳು ಹಾಕುತಿದ್ದರು?ಅವರು ಪ್ರಸಾದ ಸೇವನೆ ಕ್ರಮ, ಬಳಸುವ ಪಾತ್ರೆ ಮೊದಲಾದ ಸಂಗತಿಗಳು ದಾಖಲೆಯಾಗಬೇಕು ಅದಾಗಿಲ್ಲ. ಅನೇಕರು ಸಂಶೋಧನಾ ಗ್ರಂಥ ಬರೆದಿದ್ದಾರೆ ಪತ್ರಿಕೆಯಲ್ಲಿ ಕೆಲವು ಆರ್ಟಿಕಲ್ ಬಂದಿವೆ ಆದರೆ ಅವು ಯಾವು ಪೂಜ್ಯರ ದಿನಚರಿ ದಾಖಲಿಸಿಲ್ಲ. ಈ ಇಂಟರ್ ನೆಟ್ ನಲ್ಲಿ ಪಂಚಾಕ್ಷರಿ ಗವಾಯಿಗಳ ಸಿನೆಮಾ ಕ್ಲಿಪ್ ಮತ್ತು ಪೂಜ್ಯರು ಲಿಂಗೈಕ್ಯರಾದಾಗಿನ ಛಾಯಾ ಚಿತ್ರಗಳನ್ನು ಬಿಟ್ಟರೆ ಎನು ಸಿಗುವದಿಲ್ಲ ಈ ಟಿ.ವಿ.ಯವರಿಗೆ ಪುಟ್ಟರಾಜರು ಯಾರು ಪಂಚಾಕ್ಷರಿ ಗವಾಯಿ ಯಾರು ಗೊತ್ತೆಯಿಲ್ಲ ಪುಟ್ಟರಾಜರ ಫೋಟೋ ತೋರಿಸಿ ಪಂಚಾಕ್ಷರಿ ಗವಾಯಿಗಳು ಅಂತಾ ಪಂಚಾಕ್ಷರಿ ಗವಾಯಿಗಳ ಫೋಟೋ ತೋರಿಸಿ ಪುಟ್ಟರಾಜ ಗವಾಯಿಗಳು ಅಂತ ಹೇಳುತ್ತಾರೆ.ಇತ್ತೀಚಿಗೆ ವೀಕಿಪೀಡಿಯಾದಲ್ಲಿ ಪೂಜ್ಯರ ಕುರಿತು ಪುಟ್ಟರಾಜರು ತಮ್ಮ ಪೂಜೆಯಲ್ಲಿ ಬೋಗೋನಿ ಎರಡೆರಡು ಗಂಟೆ ಉಪಯೋಗಿಸುತಿದ್ದರು ಅಂತ ಬರೆದಿದ್ದರು. ಕೆಲವರಂತೂ ತಾವುಬರೆದ ಚರಿತ್ರೆಯಲ್ಲಿ ತಮಗೆ ಬೇಕಾದವರ ಹೆಸರು ಹಾಕಿಕೊಂಡು ಇವರು ಪೂಜ್ಯರ ಮಹಾನ್ ಶಿಷ್ಯರು ಅಂತ ಬರೆದು ಅವರಿಂದ ತಮ್ಮ ಪುಸ್ತಕ ಮಾರಿಕೊಂಡದ್ದು ಕೇಳಿ ಬೇಸರವಾಯಿತು. ಹೀಗಾಗಿ ಕೆಲವು ಪ್ರಜ್ಞಾವಂತ ಶಿಷ್ಯರಿಗೆ ತುಂಬ ನೋವಾಗಿದ್ದುದು ಇದೆ. ಆದರೆ ಒಂದು ಸಂತೋಷದ ಸಿಹಿ ಸುದ್ದಿ ಏನಂದರೆ ಇತ್ತೀಚಿಗೆ ಪೂಜ್ಯಗುರು ಪುಟ್ಟರಾಜರ ಕುರಿತು ಪುಟ್ಟರಾಜ ಲೀಲಾ ವಿಳಾಸ ಪುರಾಣ ಕಾವ್ಯ ಲೋಕಾರ್ಪಣವಾಗಿದೆ. ಅದನ್ನು ರಚಿಸಿದವರು ಪಂ.ರಾಜಗುರು ಗುರುಸ್ವಾಮಿ ಕಲಿಕೇರಿಯವರು ಈ ಕಾವ್ಯ ಭಾಮಿನಿ ಷಟ್ಪದಿಯಲ್ಲಿ ಇದೆ ಇದನ್ನು ನಾನು ಓದಿದೆ ಈ ಪುರಾಣ ಪುರಾಣವಾಗಿರದೆ ಇತಿಹಾಸವಾಗಿದೆ ಇದನ್ನೇ ಆಧಾರವಾಗಿಟ್ಟುಕೊಂಡು ಸಂಪೂರ್ಣ ಕಾವ್ಯವನ್ನು ಸರಳಾನುವಾದ ಮಾಡಿ ಹೇಳ ಬೇಕೆಂದು ವಿಚಾರಮಾಡಿ ಹಿರಿಯ ಗುರುಬಂದುಯನ್ನುವದಕಿಂತಾ ನನ್ನತಂದೆಯ ಸ್ಥಾನದಲ್ಲಿರುವ ಪೂಜ್ಯ್ರ ಕಲಿಕೇರಿ ಗವಾಯಿಗಳವರಿಗೆ ನನ್ನ ಬಯಕೆ ವ್ಯಕ್ತ ಪಡಿಸಿದಾಗ ತುಂಬು ಹೃದಯದಿಂದ ಒಪ್ಪಿ ಪರವಾನಿಗೆ ನೀಡಿದ್ದಾರೆ ಈ ಮೂಲಕ ಪೂಜ್ಯರ ಅಬಿಮಾನಿ ಭಕ್ತರಿಗೆ ಪೂಜ್ಯರ ಲೀಲಾ ವಿಳಾಸವು ಪೂಜ್ಯ್ರರ ಜೀವನ ಕವನ ವಾಗಿಸಿ ನೀ ಒಲಿದಂತೆ ಹಾಡುವೆ ಎಂದು ಬಸವಣ್ಣ ಹೇಳಿದ ಹಾಗೆ ಗುರುಚರಿತೆ ತಮ್ಮೆಲ್ಲರ ಮನ ಮಂದಿರಕ್ಕೆ ತಲುಪಿಸುವ ಪ್ರಯತ್ನಮಾಡುವೆ ನಿಮ್ಮ ನಿಮ್ಮ ಹದುಳ ಹಾರೈಕೆ ಇರಲಿ ಎಂದು ಆಶಿಸುತ್ತ ಗುರು ಪುಟ್ಟರಾಜ ಹಾಡಿಸಿದಂತೆ ಹಾಡಲು ಆರಂಭಮಾಡುವೆ.
ಸಿ. ಕೆ.ಹೆಚ್. ಶಾಸ್ತ್ರೀ (ಕಡಣಿ)