ಜೂನ್ 05, 2014

ಸೇವಾ ಸಮಿತಿಯ ಪ್ರತಿಷ್ಠಿತ ಪ್ರಶಸ್ತಿ ಗಳು


ಡಾ. ಪಂ.ಪುಟ್ಟರಾಜ ಸೇವಾ ಸಮಿತಿಯ
ಪ್ರತಿಷ್ಠಿತ ಪ್ರಶಸ್ತಿ ಗಳು

ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ ದಶಮಾನೋತ್ಸವ ಸಂಭ್ರಮಾಚರಣೆ ಸಂಧರ್ಭದಲ್ಲಿ ಸಮಿತಿಯು ಸುಮಾರು ಹತ್ತು ವರ್ಷಗಳಿಂದ ನೀಡಿ ಗೌರವಿಸುತ್ತ ಬಂದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಹೊಸ ಸ್ವರೂಪ ನೀಡುವುದರೊಂದಿಗೆ ಪೂಜ್ಯರ ಜನ್ಮ ಶತಮಾನೋತ್ಸವ ವರ್ಷಾಚರಣೆಯ ಈ ಸಂದರ್ಭದಲ್ಲಿ ಹೊಸ ಪ್ರಶಸ್ತಿ ಅಸಿತ್ವಕ್ಕೆ ತಂದಿದ್ದೇವೆ ಆ ಪ್ರಶಸ್ತಿಗಳು ಇಂತಿವೆ ಇವೆ. ಈಗಾಗಲೇ ಅಸ್ತಿತ್ವದಲ್ಲಿ ಇರುವ ಪ್ರಶಸ್ತಿ ಗಳು‘ಪದ್ಮ ಭೂಷಣ’ ಪುಟ್ಟರಾಜ ಗವಾಯಿ ಯುವ ಪುರಸ್ಕಾರ ರಾಷ್ತ್ರೀಯ ಪ್ರಶಸ್ತಿ. ‘ಪದ್ಮ ಭೂಷಣ’ ಪಂ. ಪುಟ್ಟರಾಜ ಕೃಪಾ ಭೂಷಣ ಕಲಾಪೋಷಕ ಗೌರವ ಪ್ರಶಸ್ತಿ. ‘ನಾಡೋಜ’ ಕವಿ ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿ. ಈ ವರ್ಷದಿಂದ ಅಸ್ತಿತ್ವಕ್ಕೆ ತರಲಾದ ನೂತನ ಪ್ರಶಸ್ತಿಗಳು ‘ಗುರುಕುಲ ಭೂಷಣ’ ಕಲಾಗುರು ಗೌರವ ಪ್ರಶಸ್ತಿ. ‘ಗುರು ಕುಮಾರ ಪಂಚಾಕ್ಷರಿ’ ವಚನ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿ. 

ನಮ್ಮ ಸಮಿತಿಯ ಹೊಸ ಕಾರ್ಯಕ್ರಮ

'ಗುರುಕುಮಾರ ಪಂಚಾಕ್ಷರಿ' 
ವಚನ ಸಾಹಿತ್ಯೋತ್ಸವ

ಗುರು ಪುಟ್ಟರಾಜರ ಜನ್ಮ ಶತಮಾನೋತ್ಸವ, ನಮ್ಮ ಸಮಿತಿಯ ದಶಮಾನೋತ್ಸವ ಸಂಭ್ರಮಾಚರಣೆಯ ಸವಿ ನೆನಪಿಗಾಗಿ ಸಮಿತಿಯು “ಗುರುಕುಮಾರ ಪಂಚಾಕ್ಷರಿ” ವಚನ ಸಾಹಿತ್ಯೋತ್ಸವ ಕಾರ್ಯಕ್ರಮವು ಆರಂಭಿಸಲು ನಿರ್ಧರಿಸಿದೆ. ಈ ಕಾರ್ಯಕ್ರಮವು ಕನ್ನಡಪರ ಸಂಘಟನೆಗಳ ಹಾಗೂ ಸಾಂಸ್ಕೃತಿಕ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗುವುದು. ಒಂದು ದಿನ ನಡೆಯುವ ಈ ಉತ್ಸವದಲ್ಲಿ ಪೂಜ್ಯ ಗುರು ಪುಟ್ಟರಾಜರ ವಚನಗಳ  ಉಪನ್ಯಾಸ ಮತ್ತು ವಚನ ಗಾಯನದೊಂದಿಗೆ ಶರಣರ ಮತ್ತು ಪ್ರಸ್ತುತ ವಚನಕಾರರ ವಚನ ಗಾಯನ ಕೂಡಾ ಇರುತ್ತದೆ. ಇದೇ ಸಂಧರ್ಭದಲ್ಲಿ  ಜಿಲ್ಲಾಮಟ್ಟದ ಯುವ ವಚನಕಾರರ ಸ್ವರಚಿತ ವಚನ ವಾಚನ ಗೊಷ್ಥಿ ಏರ್ಪಡಿಸಲಾಗುವುದು. ಸ್ಥಳೀಯ ಪ್ರಕಾಶಕರಿಂದ ಪುಸ್ತಕ ಪ್ರದರ್ಶನ,ಮಾರಾಟ. ಉದಯೋನ್ಮುಖ ವಚನಕಾರರಿಗೆ ಸನ್ಮಾನ ಏರ್ಪಡಿಸುವದು ಕೂಡಾ  ಇದೆ. ಪ್ರತಿ ತಿಂಗಳ ೪ ನೆಯ ರವಿವಾರ ಆತಿಥ್ಯ ವಹಿಸಿಕೊಳ್ಳುವ ಸಂಘ ಸಂಸ್ಥೆಯ ಜಿಲ್ಲಾ  ಕೇಂದ್ರದಲ್ಲಿ ಈ ಉತ್ಸವ ಹಮ್ಮಿಕೊಳ್ಳಲಾಗುವುದು. ಇದು ನಮ್ಮ ಯೋಚನೆಯಾಗಿದ್ದು, ಇದುವೇ ಅಂತಿಮವಲ್ಲ.  ಅಭಿಮಾನಿ ಭಕ್ತರ ಸಲಹೆ ಸೂಚನೆ ಮತ್ತು ಅಭಿಪ್ರಾಯ ಪಡೆದು ಅಂತಿಮ ರೂಪ ನೀಡಲಾಗುವುದು. ಅಭಿಮಾನಿ ಭಕ್ತರು,ತಮ್ಮ ಸಲಹೆ ಸೂಚನೆ ನೀಡುವುದರೊಂದಿಗೆ ಈ ಉತ್ಸವದ ಆತಿಥ್ಯ ವಹಿಸಿಕೊಳ್ಳಲು ವಿನಂತಿಸಿ ಕೊಳ್ಳಲಾಗಿದೆ. ಮಾಹಿತಿಗಾಗಿ 08372-220432 ಗೆ ಸಂಪರ್ಕಿಸ ಬಹುದಾಗಿದೆ.