ಜೂನ್ 10, 2014

ಮನೆ,ಮನದ ಅಂಗಳದಲ್ಲಿ ಸಂಗೀತ

ಮನೆ,ಮನದ ಅಂಗಳದಲ್ಲಿ 
ಸಂಗೀತ ಕಾರ್ಯಕ್ರಮ
‘ಗಾನಯೋಗಿ ಆರಾಧನೆ’
(ಕಿರು ಉಪನ್ಯಾಸ, ವಚನ ಗಾಯನ)

ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರು ಈ ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿಕೊಳ್ಳುವ, ಅವರ ಜೀವನ ಸಾಧನೆ ಸಂದೇಶವನ್ನು ಮನೆ;ಮನಗಳಿಗೆ ತಲುಪಿಸುವ ಸರಳ, ಸುಂದರ, ಅರ್ಥಪೂರ್ಣ, ಸಂಸ್ಕಾರಯುತ ಕಾರ್ಯಕ್ರಮ ಇದಾಗಿದೆ. 

ಈ ಕಾರ್ಯಕ್ರಮವು ರಾಜ್ಯದ ತುಂಬ ಹರಡಿಕೊಂಡಿರುವ ಪೂಜ್ಯರ ಅಭಿಮಾನಿ ಭಕ್ತರ ಮನೆಯಲ್ಲಿ ಅವರ ದಾಸೋಹ ಸೇವೆಯಲ್ಲಿ ಹಮ್ಮಿಕೊಳ್ಳಲಾಗುವುದು. ಒಂದರಿಂದ ಒಂದೂವರೆ ತಾಸಿನ ಈ ಕಾರ್ಯಕ್ರಮದಲ್ಲಿ,‘ಪೂಜ್ಯರ ಭಾವಚಿತ್ರದ ಪೂಜೆ ’ ‘ ಗುರು ಪ್ರಭಾ ವಚನ ಪ್ರಾರ್ಥನೆ ’ಹದಿನೈದು ರಿಂದ ಇಪ್ಪತ್ತು ನಿಮಿಷದ ‘ಗುರು ಪುಟ್ಟರಾಜರ ಜೀವನ ದರ್ಶನ’ ಕಿರು ಉಪನ್ಯಾಸ, ಸ್ಥಳೀಯ ಗುರುಬಂಧು ಕಲಾವಿದರಿಂದ ಮತ್ತು ನಮ್ಮ ಸೇವಾ ಸಮಿತಿಯ ‘ಪಂ. ಪುಟ್ಟರಾಜ ಸಂಗೀತ ಸಭಾ’ ಸಂಗೀತ ಕಲಾ ತಂಡದಿಂದ ‘ವಚನ ಗಾಯನ’ ಏರ್ಪಡಿಸಲಾಗುತ್ತದೆ. 

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ತಂಡಕ್ಕೆ ಯಾವುದೇ ಸಂಭಾವನೆ ನೀಡಬೇಕಾಗಿಲ್ಲ ಆದರೆ ಪ್ರಯಾಣ ಭತ್ತೆ ಪ್ರಸಾದ ವ್ಯೆವಸ್ಥೆ ಮತ್ತು ಅವಶ್ಯವೆನಿಸಿದಲ್ಲಿ ವಸತಿ ಸೌಲಭ್ಯ ವದಗಿಸ ಬೇಕಗುತ್ತದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮುದ್ರಣ, ವೇದಿಕೆಯ ಹಿಂಭಾಗದ ಬ್ಯಾನರ, ಆರಾಧನೆ ಭಕ್ತಿ ಸೇವೆ ವಹಿಸಿಕೊಂಡ ಕುಟುಂಬದ ಹಿರಿಯ ರೋಬ್ಬರಿಗೆ ನೀಡಲಾಗುವ ‘ಗುರುಕೃಪಾ ಸತ್ಕಾರ’ದ ಸಲಕರಣೆಗಳು ಸಮಿತಿಯೇ ಹೊಂದಿಸಿಕೊಳ್ಳುತ್ತದೆ. ಕೆಳುಗರಾಗಿ ಬಂದ ಅಭಿಮಾನಿ ಭಕ್ತರಿಗೆ ಅರ್ಧ ಕಪ್ ಟೀ ಎರಡು ಬಿಸ್ಕತ್ ನೀಡಿ ಉಪಚರಿಸಿದರೆ ಸಾಕು. 

ಸಂಗೀತ ಸಾಹಿತ್ಯ ಶಿಕ್ಷಣ ಸಮಾಜ ಸೇವೆ ಬಹು ಮುಖ್ಯವಾಗಿ ಅಂಧ ಅನಾಥರ ಸೇವೆ ಸಲ್ಲಿಸಿ, ಮರೆಯದ ಮಹಾನ್ ಚೇತನದ ಸಾಧನೆಯನ್ನು ಮುಂದಿನ ಪೀಳಿಗೆ ಮರೆಯದಂತೆ ಸ್ಮರಿಸಿಕೊಳ್ಳುವ ಮೂಲಕ, ಪೂಜ್ಯರಿಗೆ ಸಲ್ಲಿಸುವ ಸಣ್ಣ ಗೌರವ ಇದಾಗಿದೆ. ಈ ಕಾರ್ಯಕ್ರಮ ಪ್ರತಿ ತಿಂಗಳ ಎರಡನೇ ಶನಿವಾರ ಸಂಜೆ ೬-೩೦ ರಿಂದ ೮-೦೦ ರವರೆಗೆ ನಡೆಯುತ್ತದೆ. ಈ ಕಾರ್ಯಕ್ರಮದ ಸೇವಾಭಾಗ್ಯ ಕೇವಲ ೧೨ ಜನರಿಗೆ ಮಾತ್ರ ಲಭ್ಯವಾಗಲಿದ್ದು ಮೊದಲು ಬಂದವರಿಗೆ ಮೊದಲು ಅವಕಾಸ ನೀಡಲಾಗುವುದು. 

ಬನ್ನಿ ನಾವೂ ಸೇರಿ ಗುರುಸೇವೆ ಮಾಡೋಣ ಗುರು ಕೃಪೆ ಹೊಂದೋಣ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ