ಡಾ.ಪಂ.ಪುಟ್ಟರಾಜರ ಜೀವನ,ಸಾಧನೆ,ಸಂದೇಶ ಸ್ಮರಣೆಗಾಗಿ ಅವರ ಅಭಿಮಾನಿ ಬಳಗದವರು ಹುಟ್ಟು
ಹಾಕಿದ ಸಂಸ್ಥೆ ಡಾ.ಪಂ.ಪುಟ್ಟರಾಜ ಸೇವಾ ಸಮಿತಿ.ಈ ಸೇವಾ ಸಮಿತಿಗೆ ದಶಮಾನದ
ಸಂಭ್ರಮ. ಡಾ,ಪಂ.ಪುಟ್ಟರಾಜರು ಸಂಗೀತದಲ್ಲಿ ಮಾಡಿದಷ್ಟು ಸಾಧನೆ ಸಾಹಿತ್ಯ
ಕ್ಷೇತ್ರದಲ್ಲಿಯೂ ಅನುಪಮ ಸಾಧನೆ ಮಾಡಿದ ಮಹಾ ಚೇತನವಾಗಿದ್ದರು. ಪೂಜ್ಯರು ಹುಟ್ಟು
ಕುರುಡರಾಗಿದ್ದರು ಕೂಡಾ ನಾಲ್ಕು ಭಾಷೆಗಳಲ್ಲಿ ನೂರಾರು ಕೃತಿ ರಚಿಸಿ
ಜ್ಞಾನಯೋಗಿಯಾಗಿದ್ದರು. ಸಾಹಿತ್ಯದ ವೈವಿಧ್ಯಮಯ ಪ್ರಕಾರದಲ್ಲಿ ಕನ್ನಡ,ಹಿಂದಿ,ಸಂಸ್ಕೃತ
ಮತ್ತು ಬ್ರೇಲ್ ಭಾಷೆಯಲ್ಲಿ ಕೃತಿರಚನೆ ಮಾಡಿದವರಾಗಿದ್ದರು ಕೂಡಾ ಇವರ ಸಾಹಿತ್ಯ ಸೇವೆಗೆ
ಅಷ್ಟಾಗಿ ಪ್ರಚಾರ ಸಿಗದೆಹೋಯಿತೇನೋ ಅನಿಸದೆ ಇರಲಾರದು. ನಮ್ಮ ಈ ಸಮಿತಿ ಪೂಜ್ಯರ ಸಾಹಿತ್ಯ
ಸೇವೆ ಸ್ಮರಿಸಿಕೊಳ್ಳಲು ಡಾ.ಪಂ.ಪುಟ್ಟರಾಜ ಸಾಹಿತ್ಯ
ಪುರಸ್ಕಾರ ಪ್ರಶಸ್ತಿ ಅಸ್ತಿತ್ವಕ್ಕೆ ತಂದು ಕನ್ನಡದ ಪುಸ್ತಕಗಳಿಗೆ ನೀಡುತ್ತ ಬರಲಾಗಿದೆ ಮತ್ತು ಇದೇ ಸಂಧರ್ಭದಲ್ಲಿ ಯುವ ಸಾಹಿತಿಗಳಿಗೆ ಸತ್ಕರಿಸಿ ಪ್ರೋತಸಹಿಸುವ ಪರಂಪರೆ ಆರಂಭಿಸಲಾಗಿದೆ. ಇದುವರೆಗೆ ಬಹುಜನ ಸಾಹಿತಿಗಳ ಕನ್ನಡ ಕೃತಿಗಳಿಗೆ ಈ ಪುರಸ್ಕಾರ ನೀಡಿ ಗೌರವಿಸಲಾಗಿದೆ . (ಪ್ರಶಸ್ತಿ ಪುರಸ್ಕೃತರ ಪಟ್ಟಿ ಮುಂದೆ
ನೀಡಲಾಗಿದೆ) ಅನೇಕ ಯುವ ಸಾಹಿತಿಗಳಿಗೆ ಸತ್ಕರಿಸಿ ಪ್ರೋತ್ಸಾಹ ನೀಡಲಾಗಿದೆ. ಈ ಸಮಿತಿ ರಾಜ್ಯಮಟ್ಟದ ಸಂಸ್ಥೆಯಾಗಿ ರೂಪಗೊಂಡ ನಂತರ ಪುಟ್ಟರಾಜ ಸಾಹಿತ್ಯೋತ್ಸವವನ್ನು ಆಚರಿಸಿಕೊಂಡು
ಬರಲಾಗುತ್ತಿದೆ. ಪ್ರಥಮ ಸಾಹಿತೋತ್ಸವ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ
ಅತ್ಯಂತ ವೈಭವದಿಂದ ಆಚರಿಸಿದರೆ, ಎರಡನೆಯ ಸಾಹಿತ್ಯೋತ್ಸವವನ್ನು ಕರ್ನಾಟಕ ಮಹಿಳಾ ವಿಶ್ವ ವಿದ್ಯಾಲಯ ಬಿಜಾಪುರದಲ್ಲಿ ಆಚರಿಸಲಾಯಿತು. ಈಗ ಮೂರನೆಯ ಸಾಹಿತ್ಯೋತ್ಸವ ಆಚರಣೆಗೆ
ಸಿಧ್ಧತೆ ಮಾಡಿಕೊಳ್ಳಲಾಗುತ್ತಿದ್ದು ಮೊದಲ ಹಂತವಾಗಿ ಸಾಹಿತ್ಯ ಪುರಸ್ಕಾರಕ್ಕಾಗಿ ಕೃತಿಗಳನ್ನು ಆಹ್ವಾನಿಸಲಾಗಿದೆ. ಇನ್ನೊಂದು ವಿಷಯ ಈ ವರ್ಷ ಅಂದರೆ 2014 ನಮ್ಮ ಸಮಿತಿಗೆ ದಶಮಾನೋತ್ಸವ ವರ್ಷ ಹಾಗೆಯೇ ಪೂಜ್ಯ ಗುರು ಪುಟ್ಟರಾಜರ ಜನ್ಮ ಶತಮಾನೋತ್ಸವ ವರ್ಷವೂ ಹೌದು. ಕಾರಣ ತೃತೀಯ ಪುಟ್ಟರಾಜ ಸಾಹಿತ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದೆ. ರಾಜ್ಯದ ರಾಜ್ಯಧಾನಿ ಬೆಂಗಳೂರು,ಗುಲಬರ್ಗಾ,ಹಾವೇರಿ ಮತ್ತು ದಾವಣಗೇರಿ ಜಿಲ್ಲೆಯ ಅಭಿಮಾನಿ ಭಕ್ತರು ಸಾಹಿತ್ಯೋತ್ಸವ ಆತಿಥ್ಯವಹಿಸಿಕೊಳ್ಳಲು ಮುಂದೆ ಬಂದಿದ್ದಾರೆ ಆದರೆ ಸ್ಥಳ ಅಂತಿಮವಾಗಿಲ್ಲ.
ಡಾ.ನಿರಂಜನ ವಾನಳ್ಳಿ ಮೈಸೂರು, ಡಾ.ಎಸ್.ಎಂ.ಹಿರೇಮಠ ಗುಲಬರ್ಗ, ಡಾ.ಪ್ರದೀಪಕುಮಾರ ಹೆಬ್ರಿ ಮಂಡ್ಯ, ಡಾ.ಮ.ನಿ.ಪ್ರ.ಚನ್ನಬಸವಸ್ವಾಮೀಜಿ ಜಮಖಂಡಿ, ಶ್ರೀ ಸಿದ್ದರಾಮ ಉಪ್ಪಿನ ಆಲಮೇಲ. ಶ್ರೀ ಗಣೇಶ ಅಮೀನಗಡ ಹುಬ್ಬಳ್ಳಿ, ಡಾ.ಎಚ್.ಟಿ.ಪೊತೆ ಕಲಬುರ್ಗಿ, ಮೊದಲಾದವರ ಕೃತಿಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಡಾ.ನಿರಂಜನ ವಾನಳ್ಳಿ ಮೈಸೂರು, ಡಾ.ಎಸ್.ಎಂ.ಹಿರೇಮಠ ಗುಲಬರ್ಗ, ಡಾ.ಪ್ರದೀಪಕುಮಾರ ಹೆಬ್ರಿ ಮಂಡ್ಯ, ಡಾ.ಮ.ನಿ.ಪ್ರ.ಚನ್ನಬಸವಸ್ವಾಮೀಜಿ ಜಮಖಂಡಿ, ಶ್ರೀ ಸಿದ್ದರಾಮ ಉಪ್ಪಿನ ಆಲಮೇಲ. ಶ್ರೀ ಗಣೇಶ ಅಮೀನಗಡ ಹುಬ್ಬಳ್ಳಿ, ಡಾ.ಎಚ್.ಟಿ.ಪೊತೆ ಕಲಬುರ್ಗಿ, ಮೊದಲಾದವರ ಕೃತಿಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.