ಡಾ.ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರ ಪ್ರಶಸ್ತಿಗಾಗಿ ಕನ್ನಡದ ಪುಸ್ತಕಗಳ ಆಹ್ವಾನ
---------------------------------------------------------------------------------------
ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯು, ಪೂಜ್ಯ ಗುರು ಪುಟ್ಟರಾಜರ ಸಾಹಿತ್ಯ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ''ಡಾ.ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರ'' ಪ್ರಶಸ್ತಿ ಅಸ್ತಿತ್ವಕ್ಕೆ ತಂದು ಹತ್ತು ವರ್ಷಗಳಿಂದ ನೀಡುತ್ತಾ ಬಂದಿದೆ. ಪ್ರಸಕ್ತ ಸಾಲಿನ ಪ್ರಶಸ್ತಿಗಾಗಿ ಕನ್ನಡದ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಯು ನಗದು ಬಹುಮಾನ, ಮಾನಪತ್ರ, ಅಂಗ ವಸ್ತ್ರವನ್ನು ಒಳಗೊಂಡಿದೆ. ಸೇವಾ ಸಮಿತಿಯು ಹಮ್ಮಿಕೊಳ್ಳುವ ಡಾ.ಪಂ.ಪು.ಸಾಹಿತ್ಯೋತ್ಸವ ದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವರ್ಷದ ಉತ್ತಮ ಹತ್ತು ಕೃತಿಗಳಿಗೆ ಅಭಿನಂದನಾ ಪತ್ರಗಳನ್ನು ಕೂಡಾ ನೀಡಲಾಗುವುದು. ಇದೇ ಸಂದರ್ಭದಲ್ಲಿ ಸಾಹಿತಿ, ಸಾಹಿತ್ಯ ಪ್ರಕಾಶಕ ಮತ್ತು ಸಾಹಿತ್ಯಸಂಘಟಕರಿಗೆ ಜೀವಮಾನದ ಶ್ರೇಷ್ಠ ಸಾಧನೆಯನು ಗೌರವಿಸುವ ''ಡಾ.ಪಂ.ಪು.ಸಾಹಿತ್ಯ ಸಮ್ಮಾನ'' ನೀಡಿ ಗೌರವಿಸಲಾಗುತ್ತಿದೆ. ಈ ಗೌರವ ಸಮ್ಮಾನಕ್ಕೆ ಕನ್ನಡಮ್ಮನ ಸಾಹಿತಿ ಗುಪ್ತ ಭಕ್ತ, ಸಾಹಿತ್ಯ ಪ್ರಚಾರಕ ಮತ್ತು ಸಾಹಿತ್ಯ ಸಂಘಟಕರ ಹೆಸರುಗಳನ್ನು ಸಾರ್ವಜನಿಕರು ಸೂಚಿಸಬಹುದಾಗಿದೆ. ಹೆಸರು ಸೂಚಿಸುವವರು ಪೂರಕಮಾಹಿತಿಯನ್ನು ನಮ್ಮ dppssamiti@yahoo.com ಈ ಮೇಲ್ ಮೂಲಕ ಮಾತ್ರ ಕಳುಹಿಸಿಕೊಡಬಹುದು.
ಡಾ.ನಿರಂಜನ ವಾನಳ್ಳಿ ಮೈಸೂರು, ಡಾ.ಎಸ್.ಎಂ.ಹಿರೇಮಠ ಗುಲಬರ್ಗ, ಡಾ.ಪ್ರದೀಪಕುಮಾರ ಹೆಬ್ರಿ ಮಂಡ್ಯ, ಡಾ.ಮ.ನಿ.ಪ್ರ.ಚನ್ನಬಸವಸ್ವಾಮೀಜಿ ಜಮಖಂಡಿ, ಶ್ರೀ ಸಿದ್ದರಾಮ ಉಪ್ಪಿನ ಆಲಮೇಲ. ಶ್ರೀ ಗಣೇಶ ಅಮೀನಗಡ ಹುಬ್ಬಳ್ಳಿ, ಡಾ.ಎಚ್.ಟಿ.ಪೊತೆ ಕಲಬುರ್ಗಿ, ಮೊದಲಾದವರ ಕೃತಿಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2011 ನೇ ಸಾಲಿನಿಂದ ಇಲ್ಲಿವರೆಗೆ ಪ್ರಕಟವಾದ 3 ಪ್ರತಿಗಳು, ಪರಿಚಯಪತ್ರ, ಅಗತ್ಯ ಅಂಚೆ ಚೀಟಿ ಲಗತ್ತಿಸಿ ಸ್ವವಿಳಾಸ ಬರೆದ ಲಕೋಟೆ ಇರಿಸಿ ದಿನಾಂಕ 15 ಡಿಸೆಂಬರ 2013 ರ ಒಳಗಾಗಿ ಸಿ.ಕೆ.ಎಚ್.ಶಾಸ್ತ್ರಿ(ಕಡಣಿ)ಸಂಚಾಲಕರು, ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಪಂಚಾಕ್ಷರಿ ನಗರ ೪ನೇ ಆಡ್ಡರಸ್ತೆ ಅಂಚೆ ಪೆಟ್ಟಿಗೆ ಸಂಖೆ 49, ಗದಗ-582101 ಗೆ ಕಳುಹಿಸಿ ಕೊಡಲುಕೋರಲಾಗಿದೆ ಮಾಹಿತಿಗಾಗಿ ಸಂಚಾರಿ ದೂರವಾಣಿ ಸಂಖೆ : 8951420887 ಗೆ ಸಂಪರ್ಕಿಸಬಹುದು ಎಂದು ಡಾ.ಪಂ. ಪುಟ್ಟರಾಜ ಸೇವಾ ಸಮಿತಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
------------------------------------------------------------------------------------------------------------ಮಾನ್ಯರೆ ,
ಈ ಸುದ್ದಿ ನಿಮ್ಮ ದಿನ ಪತ್ರಿಕೆಯ ರಾಜ್ಯ ವಿಭಾಗದಲ್ಲಿ ಪ್ರಕಟಿಸಿ ಗುರುಸೇವೆಯಲ್ಲಿ ನಮ್ಮೊಂದಿಗೆ ಕೈ ಜೋಡಿಸಿ ಪುಟ್ಟರಾಜರ ಕೃಪೆಗೆ ಪಾತ್ರರಾಗಲು ಕೋರುತ್ತೇವೆ
ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯು, ಪೂಜ್ಯ ಗುರು ಪುಟ್ಟರಾಜರ ಸಾಹಿತ್ಯ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ''ಡಾ.ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರ'' ಪ್ರಶಸ್ತಿ ಅಸ್ತಿತ್ವಕ್ಕೆ ತಂದು ಹತ್ತು ವರ್ಷಗಳಿಂದ ನೀಡುತ್ತಾ ಬಂದಿದೆ. ಪ್ರಸಕ್ತ ಸಾಲಿನ ಪ್ರಶಸ್ತಿಗಾಗಿ ಕನ್ನಡದ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಯು ನಗದು ಬಹುಮಾನ, ಮಾನಪತ್ರ, ಅಂಗ ವಸ್ತ್ರವನ್ನು ಒಳಗೊಂಡಿದೆ. ಸೇವಾ ಸಮಿತಿಯು ಹಮ್ಮಿಕೊಳ್ಳುವ ಡಾ.ಪಂ.ಪು.ಸಾಹಿತ್ಯೋತ್ಸವ ದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವರ್ಷದ ಉತ್ತಮ ಹತ್ತು ಕೃತಿಗಳಿಗೆ ಅಭಿನಂದನಾ ಪತ್ರಗಳನ್ನು ಕೂಡಾ ನೀಡಲಾಗುವುದು. ಇದೇ ಸಂದರ್ಭದಲ್ಲಿ ಸಾಹಿತಿ, ಸಾಹಿತ್ಯ ಪ್ರಕಾಶಕ ಮತ್ತು ಸಾಹಿತ್ಯಸಂಘಟಕರಿಗೆ ಜೀವಮಾನದ ಶ್ರೇಷ್ಠ ಸಾಧನೆಯನು ಗೌರವಿಸುವ ''ಡಾ.ಪಂ.ಪು.ಸಾಹಿತ್ಯ ಸಮ್ಮಾನ'' ನೀಡಿ ಗೌರವಿಸಲಾಗುತ್ತಿದೆ. ಈ ಗೌರವ ಸಮ್ಮಾನಕ್ಕೆ ಕನ್ನಡಮ್ಮನ ಸಾಹಿತಿ ಗುಪ್ತ ಭಕ್ತ, ಸಾಹಿತ್ಯ ಪ್ರಚಾರಕ ಮತ್ತು ಸಾಹಿತ್ಯ ಸಂಘಟಕರ ಹೆಸರುಗಳನ್ನು ಸಾರ್ವಜನಿಕರು ಸೂಚಿಸಬಹುದಾಗಿದೆ. ಹೆಸರು ಸೂಚಿಸುವವರು ಪೂರಕಮಾಹಿತಿಯನ್ನು ನಮ್ಮ dppssamiti@yahoo.com ಈ ಮೇಲ್ ಮೂಲಕ ಮಾತ್ರ ಕಳುಹಿಸಿಕೊಡಬಹುದು.
ಡಾ.ನಿರಂಜನ ವಾನಳ್ಳಿ ಮೈಸೂರು, ಡಾ.ಎಸ್.ಎಂ.ಹಿರೇಮಠ ಗುಲಬರ್ಗ, ಡಾ.ಪ್ರದೀಪಕುಮಾರ ಹೆಬ್ರಿ ಮಂಡ್ಯ, ಡಾ.ಮ.ನಿ.ಪ್ರ.ಚನ್ನಬಸವಸ್ವಾಮೀಜಿ ಜಮಖಂಡಿ, ಶ್ರೀ ಸಿದ್ದರಾಮ ಉಪ್ಪಿನ ಆಲಮೇಲ. ಶ್ರೀ ಗಣೇಶ ಅಮೀನಗಡ ಹುಬ್ಬಳ್ಳಿ, ಡಾ.ಎಚ್.ಟಿ.ಪೊತೆ ಕಲಬುರ್ಗಿ, ಮೊದಲಾದವರ ಕೃತಿಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2011 ನೇ ಸಾಲಿನಿಂದ ಇಲ್ಲಿವರೆಗೆ ಪ್ರಕಟವಾದ 3 ಪ್ರತಿಗಳು, ಪರಿಚಯಪತ್ರ, ಅಗತ್ಯ ಅಂಚೆ ಚೀಟಿ ಲಗತ್ತಿಸಿ ಸ್ವವಿಳಾಸ ಬರೆದ ಲಕೋಟೆ ಇರಿಸಿ ದಿನಾಂಕ 15 ಡಿಸೆಂಬರ 2013 ರ ಒಳಗಾಗಿ ಸಿ.ಕೆ.ಎಚ್.ಶಾಸ್ತ್ರಿ(ಕಡಣಿ)ಸಂಚಾಲಕರು, ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಪಂಚಾಕ್ಷರಿ ನಗರ ೪ನೇ ಆಡ್ಡರಸ್ತೆ ಅಂಚೆ ಪೆಟ್ಟಿಗೆ ಸಂಖೆ 49, ಗದಗ-582101 ಗೆ ಕಳುಹಿಸಿ ಕೊಡಲುಕೋರಲಾಗಿದೆ ಮಾಹಿತಿಗಾಗಿ ಸಂಚಾರಿ ದೂರವಾಣಿ ಸಂಖೆ : 8951420887 ಗೆ ಸಂಪರ್ಕಿಸಬಹುದು ಎಂದು ಡಾ.ಪಂ. ಪುಟ್ಟರಾಜ ಸೇವಾ ಸಮಿತಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
------------------------------------------------------------------------------------------------------------ಮಾನ್ಯರೆ ,
ಈ ಸುದ್ದಿ ನಿಮ್ಮ ದಿನ ಪತ್ರಿಕೆಯ ರಾಜ್ಯ ವಿಭಾಗದಲ್ಲಿ ಪ್ರಕಟಿಸಿ ಗುರುಸೇವೆಯಲ್ಲಿ ನಮ್ಮೊಂದಿಗೆ ಕೈ ಜೋಡಿಸಿ ಪುಟ್ಟರಾಜರ ಕೃಪೆಗೆ ಪಾತ್ರರಾಗಲು ಕೋರುತ್ತೇವೆ
ಗದಗ
15 ನವಂಬರ -2013 ಪಂ.C.K.H ಶಾಸ್ತ್ರೀ (ಕಡಣಿ)
15 ನವಂಬರ -2013 ಪಂ.C.K.H ಶಾಸ್ತ್ರೀ (ಕಡಣಿ)
ದೂರವಾಣಿ 08372220432
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ