ಸೆಪ್ಟೆಂಬರ್ 18, 2013

ಪುಟ್ಟರಾಜ ಅಮೃತವಾಣಿ

ಪುಟ್ಟರಾಜ ಅಮೃತವಾಣಿ

ಮನಮುಟ್ಟಿ ಪೂಜಿಸಿದ ಫಲ ಕೈಯ ಮೇಲೆ
ಕೂಡಲಸಂಗಮದೇವ ನಿಮ್ಮ ಮನಮುಟ್ಟಿ
ಅತ್ಯುತ್ಕಟೈ: ಪುಣ್ಯಪಾಪೈರಿಹೈವ ಫಲಮಶ್ನುತೇ l
(ತಾತ್ಪರ್ಯ : ಅತಿಶಯವಾದ ಪುಣ್ಯ ಪಾಪಗಳು ಇದೇ ಲೋಕದಲ್ಲಿಯೇ ಫಲಿಸುತ್ತವೆ).
ಈ ಶುಭಾಷಿತ ವಚನಕಿಂತಲೂ ಶ್ರೀ ಬಸವಣ್ಣನವರು ಇನ್ನೂ ಸೂಕ್ಷಮವಾಗಿವಿಚಾರಿಸಿ ಹೀಗೆ ಹೇಳುತ್ತಾರೆ.
ಹೊಯ್ದರೆ ಹೊಯ್ಗಳು ಕೈಯ ಮೇಲೆ 
ಬೈದರೆ ಬಯ್ಗಳು ಕೈಯ ಮೇಲೆ
ಹಿಂದಿನ ಲೆವೆನಾದಡಾಗಲಿ
ಇಂದಿನ ಫಲಭೋಗ ಕೈಯ ಮೇಲೆ
ಪೂಜಿಸಿದಫಲ ಕೈಯ ಮೇಲೆ.
ಬಸವಣ್ಣನವರು ಹಿಂದಿನ ಜನ್ಮದ ಫಲವನ್ನು ಅವರು ಈ ವಚನದಲ್ಲಿ ಒಪ್ಪುವದಿಲ್ಲ ಮನ ಮುಟ್ಟಿದ ಪೂಜೆ ತತ್ ಕ್ಷಣದಲ್ಲಿಯೇ ಫಲಿಸುವದೆಂದು ಈ ವಚನದ ತಾತ್ಪರ್ಯ. ಮಾಡುವ ಪುಣ್ಯವೆಲ್ಲವು ಪೂಜೆಯ ಪುಣ್ಯವೆಂದರೆ ಪರಹಿತ ಪರೋಪಕಾರ ಮಾಡುವ ಮನುಷ್ಯನು ಯಾವಾಗಲು ಅನ್ಯರ ಮನ ನೋಯದಂತೆ ವರ್ತಿಸಬೇಕು. ಪರರ ಮನ ನೋಯಿಸುವಡೆ ಪಾಪ. ಅದಕ್ಕಾಗಿಯೇ ಶ್ರೀ ಬಸವಣ್ಣನವರು "ಅಯ್ಯಾ ಎಂದಡೆ ಸ್ವರ್ಗ,ಎಲವೊ ಎಂದ ಡೆ ನರಕ,ಭಕ್ತ ಜಿಯಾಜಯ ಎಂಬಲ್ಲಿ ಕೈಲಾಸವುಂಟು ಕೂಡಲ ಸಂಗಮ ದೇವ"ಎಂದಿದ್ದಾರೆ.ಪುಣ್ಯ ಪಾಪಗಳ ವಿಷಯವು ಇಷ್ಟು ಸೂಕ್ಷಮವಾಗಿದೆ.ಆದ್ದರಿಂದ ನಾವು ನುಡಿಯಲ್ಲಿಯೂ, ನಡೆಯಲ್ಲಿಯೂ ಜಾಗರೂಕರಾಗಿ ಇರಬೇಕು.ಒಂದು ಮೃದುವಾದ ಮಾತು ಒಂದು ಮಹಾ ಮಂತ್ರದ ಜಪವಾಗಿ ಪರಿಣಮಿಸುತ್ತದೆ. ಅದಕ್ಕಾಗಿ ಶ್ರೀ ಬಸವಣ್ಣನವರು ಮೃದುವಚನವೇ ಸಕಲ ಜಪಂಗಳಯ್ಯ ಮೃದುವಚನವೇ ಸಕಲ ತಪಂಗಳಯ್ಯ ಸದುವಿನಯವೇ ಸದಾಶಿವನೊಲುಮೆಯೈ ಎಂದು ಜನರನ್ನು ಎಚ್ಚರಿಸಿದ್ದಾರೆ.ಅದರಂತೆ ತಮ್ಮ ಮತ್ತೊಂದು ವಚನದಲ್ಲಿ ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ಪ ಲಿಂಗವು ಘಟಸರ್ಪನೋಡಾ"ಎಂದಿದ್ದಾರೆ. ಆದ್ದರಿಂದ ನಾವು ನಮ್ಮ ನುಡಿ ನಡೆಗಳಿಂದ ಪರಹಿತವನ್ನು ಸಾಧಿಸುವದೆ ಜನ್ಮ ಸಾಫಲ್ಯದ ಮಾರ್ಗವು.

ಸರ್ವಂ ಭದ್ರಂ ಭೂಯಾತ್ 
ಸಂಪಾದಕ : ಸಿ.ಕೆ.ಎಚ್.ಶಾಸ್ತ್ರೀ (ಕಡಣಿ). 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ