ಏಪ್ರಿಲ್ 19, 2014

ಜನ್ಮ ಶತಮಾನೋತ್ಸವ ಪತ್ರಿಕಾ ಪ್ರಕಟಣೆ


ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ ದಶಮಾನೋತ್ಸವ ಪೂಜ್ಯರ ಜನ್ಮ ಶತಮಾನೋತ್ಸವ ಅದ್ದೂರಿ ವರ್ಷಾಚರಣೆಗೆ ನಿರ್ಧಾರ  

ಡಾ. ಪಂ. ಪುಟ್ಟರಾಜರ ಜೀವನ, ಸಾಧನೆ, ಸಂದೇಶವನ್ನು ಸದಾ ಹಸಿರಾಗಿರುವಂತೆ ನೋಡಿಕೊಳ್ಳುವ ಉದ್ದೇಶದಿಂದ ಗದಗ ಬೆಟಗೇರಿ ಅವಳಿ ನಗರದ ಅಭಿಮಾನಿ ಭಕ್ತರೆಲ್ಲ ಸೇರಿಕೊಂಡು ೨೦೦೪ ರಲ್ಲಿ ಅಸ್ತಿತ್ವಕ್ಕೆ ತಂದ ಈ ಸೇವಾ ಸಮಿತಿಯು ಇಂದು ರಾಜ್ಯದ ಎಲ್ಲಡೆಯ ಪೂಜ್ಯರ ಅಭಿಮಾನಿ ಭಕ್ತರನ್ನು ಸದಸ್ಯರನ್ನಾಗಿ ಪಡೆದುಕೊಂಡು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತನ್ನ ಅಸ್ತಿತ್ವ ಹೊಂದಿದೆ. ಈಗ ಈ ಸಮಿತಿಗೆ ದಶಮಾನದ ಸಂಭ್ರಮ,ಇದೇ ವರ್ಷ ಪೂಜ್ಯರ ಜನ್ಮ ಶತಮಾನೋತ್ಸವ ವರ್ಷವೂ ಆಗಿರುವದರಿಂದ ಸಮಿತಿಯು ತನ್ನ ಹತ್ತನೇ ವರ್ಷದ ಮತ್ತು ಪುಟ್ಟರಾಜರ ನೂರನೆ ವರ್ಷದ ಹುಟ್ಟುಹಬ್ಬವನ್ನು ಅರ್ಥ ಪೂರ್ಣವಾಗಿ ಅದ್ದೂರಿಯಾಗಿ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದೆ. ಸಂಗೀತ ಸಾಹಿತ್ಯ ಸಂಬಂಧಿ ಚಟುವಟಿಕೆಗಳು ವರ್ಷಪೂರ್ತಿ ಹಮ್ಮಿಕೊಳ್ಳಲಾಗುವುದು ಈ ಪವಿತ್ರ ಕಾರ್ಯಕ್ಕೆ ಅವಳಿ ನಗರದ ಅಭಿಮಾನಿ ಭಕ್ತರು ಹೆಚ್ಚಿನ ಸಂಖೆಯಲ್ಲಿ ಪಾಲ್ಗೊಂಡು ತನು ಮನ ಧನದ ಸಹಕಾರ ನೀಡಬೇಕು ಮತ್ತು ಹೆಚ್ಚಿನ ಸಂಖೆಯಲ್ಲಿ ಸದಸ್ಯರಾಗಬೇಕೆಂದು ಎಂದು ಸೇವಾ ಸಮಿತಿಯ ರಾಜ್ಯ ಸಂಚಾಲಕ ವೇ. ಪಂ. ಚನ್ನವೀರ ಸ್ವಾಮೀ ಹಿರೇಮಠ ಕಡಣಿ ವಿನಂತಿಸಿಕೊಂಡರು. ಅವರು ದಿನಾಂಕ 18-4-2014 ರಂದು ಸಂಜೆ 4-30 ಕ್ಕೆ ಪಂಚಾಕ್ಷರಿ ನಗರದ 4 ನೆ ಕ್ರಾಸನಲ್ಲಿರುವ ಡಾ.ಪಂ.ಪು.ಸೇವಾಸಮಿತಿಯ ಕಾರ್ಯಾಲಯದಲ್ಲಿ ಕರೆಯಲಾದ ಗದಗ ಜಿಲ್ಲಾ ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ಶರಣಯ್ಯ ಹಿರೇಮಠ ಬೆಂಗಳೂರು ಇವರು ಮಾತನಾಡಿ ಮಾಹಿತಿ ತಂತ್ರಜ್ಞಾನ ಮಿತ್ರರೆಲ್ಲ ಸೇರಿಕೊಂಡು ಪೂಜ್ಯರ ಕುರಿತು ಸಮಗ್ರ ಮಾಹಿತಿ ಒದಗಿಸುವ ಉದ್ದೇಶದಿಂದ ಒಂದು ವೆಬ್ ಸೈಟ ಅಸ್ತಿತ್ವಕ್ಕೆ ತರಲಾಗುತ್ತಿದೆ ಮತ್ತು ಪೂಜ್ಯರ ಕುರಿತು ಧ್ವನಿ ಸಾಂದ್ರತೆ ತರುವುದು ಮತ್ತು ಪೂಜ್ಯರ ಸಮಗ್ರ ಕೃತಿಗಳನ್ನು ಈ ಸೈಟ್ ಮೂಲಕ ದಾಖಲಿಸುವ ಉದ್ದೇಶ ಹೊಂದಲಾಗಿದೆ ಈ ಕಾರ್ಯಕ್ಕೆ ಪ್ರೇರೇಪಿಸಿ ಈ ಅವಕಾಸ ಒದಗಿಸಿದ ಸಮಿತಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು. ರಾಯಚೂರ ಜಿಲ್ಲಾ ಸಂಚಾಲಕರಾದ ಸಾಹಿತಿ, ಪ್ರೊ. ರಮೇಶ ಬಾಬು ಯಾಳಗಿ ಮಾತನಾಡಿ ಪೂಜ್ಯರ ಕುರಿತು ಸಾಹಿತ್ಯ ರಚನೆ ಮತ್ತು ಪ್ರಕಟಣೆ ಮಾಡಲಾಗುವುದು ಅದರ ಪ್ರಥಮ ಅಂಗವಾಗಿ ‘ಕಣ್ಣಿದ್ದರೆನಂತೆ’ ಪುಟ್ಟರಾಜರ ಹದಿನೆಂಟು ವಚನಗಳ ಹೊಳವುಗಳು ಕೃತಿ ಲೋಕಾರ್ಪಣೆಗೆ ಸಿದ್ದವಾಗಿದೆ ಎಂದು ಹೇಳಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಸೇವಾ ಸಮಿತಿಯ ಅಧ್ಯಕ್ಷ ಶ್ರೀ ವಿಶ್ವನಾಥ ರಾಮನಕೊಪ್ಪ ಗದಗ ಇವರು ಅಧ್ಯಕ್ಷತೆ ವಹಿಸಿಕೊಂಡಿದ್ದರು. ಪ್ರಧಾನ ಕಾರ್ಯದರ್ಶಿ ಶಶಿಧರ ಮಂಗಳೂರ, ಪ್ರಭು ಪ್ರಸಾದ ಬೆಂಗಳೂರು ಮಾತನಾಡಿದರು. ಗುರುಪ್ಪಾ ತಿರ್ಲಾಪುರ, ಎಫ್ ಎ ಹಿರೇಮಠ, ಶ್ರೀಮತಿ ಎಂ ಎಸ್ ಹಿರೇಮಠ ಉಪಸ್ಥಿತರಿದ್ದರು. ಕು. ಅರ್ಚನಾ ಹಿರೇಮಠ ಪ್ರಾರ್ಥನೆ ಮಾಡಿದರು. ಗದಗ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ ಗೌಡ ಪಾಟೀಲ ಸ್ವಾಗತಿಸಿದರು ಸದಸ್ಯ ಪ್ರಭುರಾಜಗೌಡವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ