ಸೆಪ್ಟೆಂಬರ್ 30, 2013

ಸಾಹಿತ್ಯ ಪುರಸ್ಕಾರ ಪತ್ರಿಕಾ ಪ್ರಕಟಣೆ



ಡಾ.ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರ ಪ್ರಶಸ್ತಿಗಾಗಿ ಕನ್ನಡದ ಪುಸ್ತಕಗಳ ಆಹ್ವಾನ
--------------------------------------------------------------------------------------- 
ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯು, ಪೂಜ್ಯ ಗುರು ಪುಟ್ಟರಾಜರ ಸಾಹಿತ್ಯ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ''ಡಾ.ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರ'' ಪ್ರಶಸ್ತಿ ಅಸ್ತಿತ್ವಕ್ಕೆ ತಂದು ಹತ್ತು ವರ್ಷಗಳಿಂದ ನೀಡುತ್ತಾ ಬಂದಿದೆ. ಪ್ರಸಕ್ತ ಸಾಲಿನ ಪ್ರಶಸ್ತಿಗಾಗಿ ಕನ್ನಡದ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಯು ನಗದು ಬಹುಮಾನ, ಮಾನಪತ್ರ, ಅಂಗ ವಸ್ತ್ರವನ್ನು ಒಳಗೊಂಡಿದೆ. ಸೇವಾ ಸಮಿತಿಯು ಹಮ್ಮಿಕೊಳ್ಳುವ ಡಾ.ಪಂ.ಪು.ಸಾಹಿತ್ಯೋತ್ಸವ ದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವರ್ಷದ ಉತ್ತಮ ಹತ್ತು ಕೃತಿಗಳಿಗೆ ಅಭಿನಂದನಾ ಪತ್ರಗಳನ್ನು ಕೂಡಾ ನೀಡಲಾಗುವುದು. ಇದೇ ಸಂದರ್ಭದಲ್ಲಿ ಸಾಹಿತಿ, ಸಾಹಿತ್ಯ ಪ್ರಕಾಶಕ ಮತ್ತು ಸಾಹಿತ್ಯಸಂಘಟಕರಿಗೆ ಜೀವಮಾನದ ಶ್ರೇಷ್ಠ ಸಾಧನೆಯನು ಗೌರವಿಸುವ ''ಡಾ.ಪಂ.ಪು.ಸಾಹಿತ್ಯ ಸಮ್ಮಾನ'' ನೀಡಿ ಗೌರವಿಸಲಾಗುತ್ತಿದೆ. ಈ ಗೌರವ ಸಮ್ಮಾನಕ್ಕೆ ಕನ್ನಡಮ್ಮನ ಸಾಹಿತಿ ಗುಪ್ತ ಭಕ್ತ, ಸಾಹಿತ್ಯ ಪ್ರಚಾರಕ ಮತ್ತು ಸಾಹಿತ್ಯ ಸಂಘಟಕರ ಹೆಸರುಗಳನ್ನು ಸಾರ್ವಜನಿಕರು ಸೂಚಿಸಬಹುದಾಗಿದೆ. ಹೆಸರು ಸೂಚಿಸುವವರು ಪೂರಕಮಾಹಿತಿಯನ್ನು ನಮ್ಮ dppssamiti@yahoo.com ಈ ಮೇಲ್ ಮೂಲಕ ಮಾತ್ರ ಕಳುಹಿಸಿಕೊಡಬಹುದು.
ಡಾ.ನಿರಂಜನ ವಾನಳ್ಳಿ ಮೈಸೂರು, ಡಾ.ಎಸ್.ಎಂ.ಹಿರೇಮಠ ಗುಲಬರ್ಗ, ಡಾ.ಪ್ರದೀಪಕುಮಾರ ಹೆಬ್ರಿ ಮಂಡ್ಯ, ಡಾ.ಮ.ನಿ.ಪ್ರ.ಚನ್ನಬಸವಸ್ವಾಮೀಜಿ ಜಮಖಂಡಿ, ಶ್ರೀ ಸಿದ್ದರಾಮ ಉಪ್ಪಿನ ಆಲಮೇಲ. ಶ್ರೀ ಗಣೇಶ ಅಮೀನಗಡ ಹುಬ್ಬಳ್ಳಿ, ಡಾ.ಎಚ್.ಟಿ.ಪೊತೆ ಕಲಬುರ್ಗಿ, ಮೊದಲಾದವರ ಕೃತಿಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2011 ನೇ ಸಾಲಿನಿಂದ ಇಲ್ಲಿವರೆಗೆ ಪ್ರಕಟವಾದ 3 ಪ್ರತಿಗಳು, ಪರಿಚಯಪತ್ರ, ಅಗತ್ಯ ಅಂಚೆ ಚೀಟಿ ಲಗತ್ತಿಸಿ ಸ್ವವಿಳಾಸ ಬರೆದ ಲಕೋಟೆ ಇರಿಸಿ ದಿನಾಂಕ 15 ಡಿಸೆಂಬರ 2013 ರ ಒಳಗಾಗಿ ಸಿ.ಕೆ.ಎಚ್.ಶಾಸ್ತ್ರಿ(ಕಡಣಿ)ಸಂಚಾಲಕರು, ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಪಂಚಾಕ್ಷರಿ ನಗರ ೪ನೇ ಆಡ್ಡರಸ್ತೆ ಅಂಚೆ ಪೆಟ್ಟಿಗೆ ಸಂಖೆ 49, ಗದಗ-582101 ಗೆ ಕಳುಹಿಸಿ ಕೊಡಲುಕೋರಲಾಗಿದೆ ಮಾಹಿತಿಗಾಗಿ ಸಂಚಾರಿ ದೂರವಾಣಿ ಸಂಖೆ : 8951420887 ಗೆ ಸಂಪರ್ಕಿಸಬಹುದು ಎಂದು ಡಾ.ಪಂ. ಪುಟ್ಟರಾಜ ಸೇವಾ ಸಮಿತಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 

------------------------------------------------------------------------------------------------------------ಮಾನ್ಯರೆ , 

ಈ ಸುದ್ದಿ ನಿಮ್ಮ ದಿನ ಪತ್ರಿಕೆಯ ರಾಜ್ಯ ವಿಭಾಗದಲ್ಲಿ ಪ್ರಕಟಿಸಿ ಗುರುಸೇವೆಯಲ್ಲಿ ನಮ್ಮೊಂದಿಗೆ  ಕೈ ಜೋಡಿಸಿ ಪುಟ್ಟರಾಜರ ಕೃಪೆಗೆ ಪಾತ್ರರಾಗಲು ಕೋರುತ್ತೇವೆ 


                      
ಗದಗ                                            
15 ನವಂಬರ -2013                                 ಪಂ.C.K.H ಶಾಸ್ತ್ರೀ (ಕಡಣಿ) 
                                                                                                        ರಾಜ್ಯ ಸಂಚಾಲಕರು
                                                                                                   ದೂರವಾಣಿ 08372220432


ಸೆಪ್ಟೆಂಬರ್ 29, 2013

ಡಾ.ಪಂ.ಪುಟ್ಟರಾಜ ಸಾಹಿತೋತ್ಸವ ಕುರಿತು

ಡಾ.ಪಂ.ಪುಟ್ಟರಾಜರ ಜೀವನ,ಸಾಧನೆ,ಸಂದೇಶ ಸ್ಮರಣೆಗಾಗಿ ಅವರ ಅಭಿಮಾನಿ ಬಳಗದವರು ಹುಟ್ಟು ಹಾಕಿದ ಸಂಸ್ಥೆ ಡಾ.ಪಂ.ಪುಟ್ಟರಾಜ ಸೇವಾ ಸಮಿತಿ.ಈ ಸೇವಾ ಸಮಿತಿಗೆ ದಶಮಾನದ ಸಂಭ್ರಮ. ಡಾ,ಪಂ.ಪುಟ್ಟರಾಜರು ಸಂಗೀತದಲ್ಲಿ ಮಾಡಿದಷ್ಟು ಸಾಧನೆ ಸಾಹಿತ್ಯ ಕ್ಷೇತ್ರದಲ್ಲಿಯೂ ಅನುಪಮ ಸಾಧನೆ ಮಾಡಿದ ಮಹಾ ಚೇತನವಾಗಿದ್ದರು. ಪೂಜ್ಯರು ಹುಟ್ಟು ಕುರುಡರಾಗಿದ್ದರು ಕೂಡಾ ನಾಲ್ಕು ಭಾಷೆಗಳಲ್ಲಿ ನೂರಾರು ಕೃತಿ ರಚಿಸಿ ಜ್ಞಾನಯೋಗಿಯಾಗಿದ್ದರು. ಸಾಹಿತ್ಯದ ವೈವಿಧ್ಯಮಯ ಪ್ರಕಾರದಲ್ಲಿ ಕನ್ನಡ,ಹಿಂದಿ,ಸಂಸ್ಕೃತ ಮತ್ತು ಬ್ರೇಲ್ ಭಾಷೆಯಲ್ಲಿ ಕೃತಿರಚನೆ ಮಾಡಿದವರಾಗಿದ್ದರು ಕೂಡಾ ಇವರ ಸಾಹಿತ್ಯ ಸೇವೆಗೆ ಅಷ್ಟಾಗಿ ಪ್ರಚಾರ ಸಿಗದೆಹೋಯಿತೇನೋ ಅನಿಸದೆ ಇರಲಾರದು. ನಮ್ಮ ಈ ಸಮಿತಿ ಪೂಜ್ಯರ ಸಾಹಿತ್ಯ ಸೇವೆ ಸ್ಮರಿಸಿಕೊಳ್ಳಲು  ಡಾ.ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಅಸ್ತಿತ್ವಕ್ಕೆ ತಂದು ಕನ್ನಡದ ಪುಸ್ತಕಗಳಿಗೆ ನೀಡುತ್ತ ಬರಲಾಗಿದೆ  ಮತ್ತು ಇದೇ ಸಂಧರ್ಭದಲ್ಲಿ ಯುವ ಸಾಹಿತಿಗಳಿಗೆ ಸತ್ಕರಿಸಿ ಪ್ರೋತಸಹಿಸುವ ಪರಂಪರೆ ಆರಂಭಿಸಲಾಗಿದೆ. ಇದುವರೆಗೆ ಬಹುಜನ ಸಾಹಿತಿಗಳ ಕನ್ನಡ ಕೃತಿಗಳಿಗೆ ಈ ಪುರಸ್ಕಾರ ನೀಡಿ ಗೌರವಿಸಲಾಗಿದೆ . (ಪ್ರಶಸ್ತಿ ಪುರಸ್ಕೃತರ ಪಟ್ಟಿ ಮುಂದೆ ನೀಡಲಾಗಿದೆ) ಅನೇಕ ಯುವ ಸಾಹಿತಿಗಳಿಗೆ ಸತ್ಕರಿಸಿ ಪ್ರೋತ್ಸಾಹ ನೀಡಲಾಗಿದೆ. ಈ ಸಮಿತಿ ರಾಜ್ಯಮಟ್ಟದ ಸಂಸ್ಥೆಯಾಗಿ ರೂಪಗೊಂಡ ನಂತರ ಪುಟ್ಟರಾಜ ಸಾಹಿತ್ಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಥಮ ಸಾಹಿತೋತ್ಸವ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ಅತ್ಯಂತ ವೈಭವದಿಂದ ಆಚರಿಸಿದರೆ, ಎರಡನೆಯ ಸಾಹಿತ್ಯೋತ್ಸವವನ್ನು ಕರ್ನಾಟಕ ಮಹಿಳಾ ವಿಶ್ವ ವಿದ್ಯಾಲಯ ಬಿಜಾಪುರದಲ್ಲಿ ಆಚರಿಸಲಾಯಿತು. ಈಗ ಮೂರನೆಯ ಸಾಹಿತ್ಯೋತ್ಸವ ಆಚರಣೆಗೆ ಸಿಧ್ಧತೆ ಮಾಡಿಕೊಳ್ಳಲಾಗುತ್ತಿದ್ದು ಮೊದಲ ಹಂತವಾಗಿ ಸಾಹಿತ್ಯ ಪುರಸ್ಕಾರಕ್ಕಾಗಿ ಕೃತಿಗಳನ್ನು ಆಹ್ವಾನಿಸಲಾಗಿದೆ. ಇನ್ನೊಂದು ವಿಷಯ ಈ ವರ್ಷ ಅಂದರೆ 2014 ನಮ್ಮ ಸಮಿತಿಗೆ ದಶಮಾನೋತ್ಸವ ವರ್ಷ ಹಾಗೆಯೇ ಪೂಜ್ಯ ಗುರು ಪುಟ್ಟರಾಜರ ಜನ್ಮ ಶತಮಾನೋತ್ಸವ ವರ್ಷವೂ ಹೌದು. ಕಾರಣ  ತೃತೀಯ ಪುಟ್ಟರಾಜ ಸಾಹಿತ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದೆ. ರಾಜ್ಯದ ರಾಜ್ಯಧಾನಿ ಬೆಂಗಳೂರು,ಗುಲಬರ್ಗಾ,ಹಾವೇರಿ ಮತ್ತು ದಾವಣಗೇರಿ ಜಿಲ್ಲೆಯ ಅಭಿಮಾನಿ ಭಕ್ತರು ಸಾಹಿತ್ಯೋತ್ಸವ ಆತಿಥ್ಯವಹಿಸಿಕೊಳ್ಳಲು ಮುಂದೆ ಬಂದಿದ್ದಾರೆ ಆದರೆ ಸ್ಥಳ ಅಂತಿಮವಾಗಿಲ್ಲ.
ಡಾ.ನಿರಂಜನ ವಾನಳ್ಳಿ ಮೈಸೂರು, ಡಾ.ಎಸ್.ಎಂ.ಹಿರೇಮಠ ಗುಲಬರ್ಗ, ಡಾ.ಪ್ರದೀಪಕುಮಾರ ಹೆಬ್ರಿ ಮಂಡ್ಯ, ಡಾ.ಮ.ನಿ.ಪ್ರ.ಚನ್ನಬಸವಸ್ವಾಮೀಜಿ ಜಮಖಂಡಿ, ಶ್ರೀ ಸಿದ್ದರಾಮ ಉಪ್ಪಿನ ಆಲಮೇಲ. ಶ್ರೀ ಗಣೇಶ ಅಮೀನಗಡ ಹುಬ್ಬಳ್ಳಿ, ಡಾ.ಎಚ್.ಟಿ.ಪೊತೆ ಕಲಬುರ್ಗಿ, ಮೊದಲಾದವರ ಕೃತಿಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  

ಸೆಪ್ಟೆಂಬರ್ 20, 2013

ಸಿಂಹಾವಲೋಕನ - ಮಾಹಿತಿ ಲೇಖನ - 3

ಡಾ.ಪಂ. ಪುಟ್ಟರಾಜ ಸೇವಸಮಿತಿ (ರಿ) ಗದಗ
ಪಂ ಪುಟ್ಟರಾಜರ 92 ನೇ ಹುಟ್ಟುಹಬ್ಬದ ಅಂಗವಾಗಿ
ಯುವಜನ ಸಂಗೀತ,ನೃತ್ಯ ಸಮ್ಮೇಳನ - 2005

----------------------------------------------------------------------
ದಿನಾಂಕ 9 ಮತ್ತು 10 ಎಪ್ರೀಲ್ 2005
ಜಗದ್ಗುರು ತೋಂಟದಾರ್ಯ ಕಲ್ಯಾಣ ಕೇಂದ್ರ ಗದಗ

-----------------------------------------------------------------------
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕಲಾ ಸೇವೆ ಸಲ್ಲಿಸಿದ ಪುಣ್ಯ ಜೀವಿ ಕಲಾವಿದರು
ಶ್ರೀ ಕೈವಲ್ಯಕುಮಾರ ಗುರವ ಧಾರವಾಡ (ಶಾಸ್ತ್ರಿಯ ಸಂಗೀತ ಗಾಯನ)
ಶ್ರೀ ಲಕ್ಷ್ಮೀಶ ರಾವ್ ಮುಂಬೈ (ತಬಲಾಸೋಲೋ)
ಶ್ರೀ ಸಿದ್ದರಾಮ ಪೋಲಿಸ ಪಾಟೀಲ್ ಗುಲಬರ್ಗಾ (ಸುಗಮ ಸಂಗೀತ)
ಶ್ರೀಮತಿ ಶುಭಾ ಧನಂಜಯ ಬೆಂಗಳೂರು (ಭರತ ನಾಟ್ಯ)
ಶ್ರೀಮತಿ ಲಕ್ಷ್ಮೀ ಕೌಶಿಕ ಬೆಂಗಳೂರು (ಭರತ ನಾಟ್ಯ)
ವಿದುಷಿ ರೂಪಾ ರಾಜೇಶ ಶಿವಮೊಗ್ಗ (ಭರತ ನಾಟ್ಯ)
ಕು.ರೂಪಶ್ರೀ ಭಟ್ ಮುಂಡಗೋಡ ಭರತ ನಾಟ್ಯ)
ಶ್ರೀ ಜೆ, ನಿರಂಜನ ಹುಬ್ಬಳ್ಳಿ (ಭರತನಾಟ್ಯ) (ಗಾಯನ)
ಕು.ಎ.ಮೇಘನಾ ಮಂಡ್ಯ
ಕು.ಮನಸ್ವಿ ಆರ್. ಆನೇಕಲ್ (ಸುಗಮ ಸಂಗೀತ)
ವಿದುಷಿ, ಸ್ವೆತಾ ಭಟ್ ಕಾಸನೂರು (ಭರತನಾಟ್ಯ)
ಶ್ರೀ ರಂಗನಾಥ ಬತ್ತಾಸಿ ಬಿಜಾಪುರ (ಕಥಕ)
ಶ್ರೀ ವಿಕಾಸ ನರೇಗಲ್ ಬೆಂಗಳೂರು (ತಬಲಾ ಸೋಲೋ)
ಶ್ರೀಮತಿ ಗಾಯತ್ರಿ ಮಂಜುನಾಥ ಬೆಂಗಳೂರು (ಭರತನಾಟ್ಯ)
ಶ್ರೀಮತಿ ಪವಿತ್ರಾ ಮಂಜುನಾಥ ಬೆಂಗಳೂರು (ಭರತನಾಟ್ಯ)
ಶ್ರೀ ಉದಯ ಕುಲಕರ್ಣಿ ಧಾರವಾಡ (ತಬಲಾ ಸೋಲೋ)
ಕುಮಾರಿ ಕವಿತಾ ಎಸ. ಗಂಗೂರಿ ಧಾರವಾಡ (ಗಾಯನ)
ಕುಮಾರಿ ರೇಶ್ಮಾ ಸವದತ್ತಿ ಧಾರವಾಡ (ಭರತನಾಟ್ಯ)
ಕುಮಾರಿ ಬಿ.ಕಾಮಾಕ್ಷಿ ಚಿತ್ರಪಳ್ಳಿ (ಸುಗಮ ಸಂಗೀತ)
ಕುಮಾರಿ ವೈ.ವಿ.ರೂಪಶ್ರೀ ಮೈಸೂರು (ಭರತನಾಟ್ಯ)
ಕುಮಾರಿ ವಿದ್ಯಾ ಎಸ್.ಜಕ್ಕನಗೌಡರ ಗದಗ (ಗಾಯನ)
ಕುಮಾರಿ ಸ್ನೇಹ ಭಟ್ ಸಿರ್ಸಿ (ಭರತನಾಟ್ಯ)
ಕುಮಾರಿ ಸುಷ್ಮಾ ನರಹರಿ ಬೆಂಗಳೂರು (ಭರತನಾಟ್ಯ)
ಶ್ರೀಮತಿ ಚಂದ್ರಿಕಾ ಕೆ.ಎ. ಮಂಗಳೂರು (ಭರತನಾಟ್ಯ)
ಶ್ರೀ ಎಚ್.ಎಸ. ನರಸಿಂಹಪ್ರಸಾದ ಬೆಂಗಳೂರು (ಹಾಡುಗಾರಿಕೆ)
ಕುಮಾರಿ ಕವಿತಾ ಮಠಪತಿ ಬೀದರ (ಗಾಯನ)
ಕುಮಾರಿ ಮೇಘನಾ ಹೆಗಡೆ ಸಿದ್ದಾಪುರ (ಭರತನಾಟ್ಯ)
ಶ್ರೀ ಬಿ ಆಯ್.ನಿರಂಜನ ಹಾರೊಗೇರಿ (ಸುಗಮ ಸಂಗೀತ)
ಶ್ರೀಮತಿ ರಾಧಿಕಾ ಜೋಗಳೇಕರ ಸಿರಸಿ (ಭರತನಾಟ್ಯ)
ಶ್ರೀ ಪಿ ಎಸ. ಉಪಾದ್ಯ ಬೆಳಗಾವಿ (ಭರತನಾಟ್ಯ)
ಕುಮಾರಿ ಕೌಸರ ಬಂದಗಿ ಕೆರೂರು (ಸುಗಮ ಸಂಗೀತ)
ಶ್ರೀಮತಿ ದೀಪಾ ಭಟ್ ಬೆಂಗಳೂರು (ಭರತನಾಟ್ಯ)
ಶ್ರೀ ನಾರಾಯಣ ಹಿರೆಕೊಳಚಿ ಗದಗ (ವಯಲಿನ್ ವಾದನ)
ಶ್ರೀ ಶರಣಕುಮಾರ ಕಲಬುರ್ಗಿ ಗದಗ (ತಬಲಾ ಸೋಲೋ)
ಶ್ರೀ ಜಿ.ಜಿ.ಸುತಾರ ಗದಗ (ತಬಲಾಸಾಥ)
ಶ್ರೀ ವೆಂಕಟೇಶ ಜೋಷಿ ಗದಗ (ತಬಲಾ ಸಾಥ)
ಕುಮಾರಿ ಕವಿತಾ ಪಾಟಿಲ ಹೊಸಪೇಟೆ (ಭರತನಾಟ್ಯ)

ಸಿಂಹಾವಲೋಕನ - ಮಾಹಿತಿ ಲೇಖನ - 2

ಡಾ.ಪಂ. ಪುಟ್ಟರಾಜ ಸೇವಸಮಿತಿ (ರಿ) ಗದಗ 
ದಿನಾಂಕ 3 ಮತ್ತು 4 ಎಪ್ರೀಲ್ 2004 ರಂದು ಗದುಗಿ 
ಚೇಂಬರ ಆಫ್ ಕಾಮರ್ಸ ನ ಎಸ.ಬಿ.ಸಂಕಣ್ಣವರ ಸಭಾ ಭವನದಲ್ಲಿ 
ಪುಟ್ಟರಾಜರ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ
ಯುವ ತಾರಾ ಸಂಗಮ -೦4 ಸಂಗೀತ ಸಮ್ಮೇಳನ ದಲ್ಲಿ
ಭಾಗವಹಿಸಿ ಸಂಗೀತ ಸೇವೆ ಸಲ್ಲಿಸಿದ ಕಲಾವಿದರು.
----------------------------------------------------------------------------------------------------------
  1. ಡಾ.ಸಂಪದಾ ಭಟ್ ಮರಬಳ್ಳಿ ಬೆಂಗಳೂರು
  2. ಡಾ.ಹನುಮಂತ ಬುರ್ಲಿ ಧಾರವಾಡ
  3. 'ವಿದ್ವಾನ'ಕೆ.ಎಸ್.ಮೋಹನಕುಮಾರ ಭದ್ರಾವತಿ 
  4. ಡಾ.ವ್ಹಿ.ಕೆ.ಚಿಂತಾಮಣಿ ಗದಗ
  5. 'ವಿದ್ವಾನ'ದ್ವಾರಕೀಶ ಎಂ ಚಿತ್ರದುರ್ಗ 
  6. ಪಂ.ಪ್ರಕಾಶ ಸೊಂಟಕ್ಕೆ ಬೆಂಗಳೂರು 
  7. ಉಸ್ತಾದ ಫೈಯಾಜ ಖಾನ ಬೆಂಗಳೂರು 
  8. ಪಂ.ಶಾಂತಲಿಂಗ ದೆಸಾಯಿಕಲ್ಲೂರು ಗುಲಬರ್ಗಾ 
  9. ಪಂ.ಧನಂಜಯ ಹೆಗಡೆ ಬೆಂಗಳೂರು 
  10. ಪಂ.ನಾರಾಯಣಕುಮಾರ ಹಿರೆಕೊಳಚಿ ಗದಗ
  11. ಶ್ರೀ ವಿಶ್ವನಾಥ ಗವಾಯಿಗಳು ಗದಗ 
  12. ಶ್ರೀ ಶರಣಕುಮಾರ ಗುತ್ತರಗಿ ಗದಗ
  13. ಶ್ರೀ ಶಿವಬಸಯ್ಯ ಗದ್ದದಮಠ ಗದಗ 
  14. ಶ್ರೀ ವೀರೇಶ ಹಿಟ್ನಾಳ ಹೊಸಪೇಟೆ
  15. ಶ್ರೀ ವೆಂಕಟೇಶ ಜೋಷಿ ಗದಗ 
  16. ಶ್ರೀ ಶ್ಯಾಮರಾವ ಫುಲಾರಿ ಗದಗ 
  17. ಶ್ರೀ ಮಂಜುನಾಥ ಭಟ್ ಗದಗ
  18. ಶ್ರೀಮತಿ ಲಕ್ಷ್ಮೀ ಶಂಕರ ಜೋಷಿ ಗುಲಬರ್ಗಾ 
  19. ಶ್ರೀಮತಿ ಸುಜಾತಾ ಕಮ್ಮಾರ ಧಾರವಾಡ 
  20. ಕುಮಾರಿ ರಾಜೇಶ್ವರಿ ಹುಂಬಿ ಹಾವೇರಿ
  21. ಶ್ರೀ ಶ್ರೀನಿವಾಸ ಕುಂದೂರ ದಾವಣಗೆರೆ  
  22. ಶ್ರೀ ವಿಕ್ರಮ ಜೋಷಿ ದಾವಣಗೆರೆ 
  23. ಶ್ರೀಮತಿ ಅನುರಾಧ ಬಾದ್ರಿ ಮೈಸೂರು 
  24. ಕುಮಾರಿ ಹನುಮಕ್ಕ ರಾಜಪುರೋಹಿತ ಕುಷ್ಟಗಿ 
  25. ಕುಮಾರಿ ಸುಮಾ ಚಕ್ರಪಾಣಿ ಬಳ್ಳಾರಿ 
  26. ಶ್ರೀಮತಿ ಮಾಲತಿ ಗೋಪಾಲಕೃಷ್ಣ ಮೈಸೂರು
  27. ಕುಮಾರಿ ಅಂಬಿಕಾ ಭಾಗ್ಯನಗರ ಕೊಪ್ಪಳ 
  28. ಕುಮಾರಿ ಗೀತಾ ಸೀತಾ ಮಠದ ಕೊಪ್ಪಳ 
  29. ಕುಮಾರಿ ಸುಷ್ಮೀತಾ ಪ್ರಕಾಶ ಬೆಂಗಳೂರು 
  30. ಕುಮಾರಿ ಪುರ್ಣೀಮಾ ಪಾಟೀಲ ಅಕ್ಕಿಆಲೂರು 
  31. ಶ್ರೀಮತಿ ಟಿ.ಹೆಚ್.ಇಂದುಮತಿ ಭದ್ರಾವತಿ
  32. ವಿದ್ವಾನ್ ಸತೀಶಕುಮಾರ ತಾಂಡವಮೂರ್ತಿ ಮಂಡ್ಯ 
  33. ಶ್ರೀ ಎಂ.ಎಸ್.ತ್ಯಾಗರಾಜ ಭದ್ರಾವತಿ 
  34. ಶ್ರೀ ಪ್ರಮೋದ ಕುಲಕರ್ಣಿ ಬೆಂಗಳೂರು 
  35. ಕುಮಾರಿ ರಮ್ಯಾ ಎಸ.ಗೌಡ ಹಾಸನ 
  36. ಶ್ರೀ ಜೇಸುದಾಸ ಎಸ್.ದಾವಣಗೆರೆ 
  37. ಕುಮಾರಿ ಸಾವಿತ್ರಿ ಮಲ್ಲಾಡದ ಬಾಲ ಪ್ರತಿಭೆ ಗದಗ 



ಸೆಪ್ಟೆಂಬರ್ 18, 2013

ಸಿಂಹಾವಲೋಕನ ಮಾಹಿತಿ ಲೇಖನ 1


ಡಾ.ಪಂ. ಪುಟ್ಟರಾಜ ಸೇವಾ ಸಮಿತಿ (ರಿ) ಗದಗ
ರಾಷ್ಟ್ರೀಯ ಸಂಗೀತ ನೃತ್ಯಸಮ್ಮೇಳನದ
"ಡಾ.ಪಂ.ಪುಟ್ಟರಾಜ ಕೃಪಾಭೂಷಣಯುವ ಪುರಸ್ಕಾರ" 
ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಸಾಧಕ ಶ್ರೇಷ್ಠರು
(೨೦೦೪ ರಿಂದ ೨೦೦೮ ) 

2004 ನೆ ಸಾಲಿನ ಪ್ರಶಸ್ತಿ ಗೌರವಕ್ಕೆ ಭಾಜನರಾದ ಉದಯೋನ್ಮುಖ ಕಲಾವಿದರು
  1. ಶ್ರೀ ಪ್ರಕಾಶ ಸೊಂಟಕ್ಕೆ ಬೆಂಗಳೂರು (ಶಾಸ್ತ್ರಿಯ ವಾದ್ಯ ಸಂಗೀತ ಗಿಟಾರ್ ) 
  2. ಶ್ರೀ ಫಯಾಜ್ ಅಹ್ಮದ್ ಖಾನ್ ಬೆಂಗಳೂರು (ಶಾಸ್ತ್ರಿಯ ವಾದ್ಯ ಸಂಗೀತಸಾರಂಗಿ  )  
  3. ಶ್ರೀ ಶಾಂತಲಿಂಗ ದೇಸಾಯಿ ಕಲ್ಲೂರ ಗುಲಬರ್ಗಾ (ಶಾಸ್ತ್ರಿಯ ವಾದ್ಯ ಸಂಗೀತ ತಬಲಾ )    
  4. ಶ್ರೀ ಧನಂಜಯ ಹೆಗಡೆ ಬೆಂಗಳೂರು (ಶಾಸ್ತ್ರಿಯ ಸಂಗೀತ ಗಾಯನ ) 
2005 ನೆ ಸಾಲಿನ ಪ್ರಶಸ್ತಿ ಗೌರವಕ್ಕೆ ಭಾಜನರಾದ ಉದಯೋನ್ಮುಖ ಕಲಾವಿದರು
  1. ಶ್ರೀ ಕೈವಲ್ಯಕುಮಾರ ಗುರವ ಧಾರವಾಡ (ಶಾಸ್ತ್ರಿಯ ಸಂಗೀತ ಗಾಯನ ) 
  2. ಶ್ರೀ ಲಕ್ಷ್ಮೀಶ ರಾವ್ ಮುಂಬೈ(ಶಾಸ್ತ್ರಿಯ ವಾದ್ಯ ಸಂಗೀತ ತಬಲಾ )  
  3. ಶ್ರೀ ಬಸವರಾಜ ಎಲ್ ಜಾನೆ ಗುಲಬರ್ಗಾ (ಚಿತ್ರ ಕಲೆ) 
  4. ಶ್ರೀ ಸಿದ್ದರಾಮ ಪೋಲಿಸ ಪಾಟೀಲ್ ಗುಲಬರ್ಗಾ (ಸುಗಮ ಸಂಗೀತ ಗಾಯನ ) 
  5. ಶ್ರೀ ಬಸವರಾಜ್ ಹೊಸಮನಿ ಬಾಗಲಕೋಟ (ರಂಗ ಭೂಮಿ ) 
  6. ಶ್ರೀ ವೀರಭದ್ರ ಸಿಂಪಿ ಗುಲಬರ್ಗಾ (ಸಾಹಿತ್ಯ ಸಂಘಟನೆ ) 
  7. ಶ್ರಿ ಮಂಜುನಾಥ ಆಚಾರ್ಯ ಬೆಂಗಳೂರು (ಶಿಲ್ಪಕಲೆ ) 
  8. ಶ್ರೀ ಆರ್.ಆರ್.ದೇಸಾಯಿ ಗುಲಬರ್ಗಾ (ಸಹಕಾರಿ ರಂಗ) 
  9. ಶ್ರೀಮತಿ ಸುನಿತಾ ದಿನಕರ ಬೆಂಗಳೂರು (ಕಲಾಪೋಷಕರು ) 
  10. ಶ್ರೀಮತಿ ಶುಭಾ ಧನಂಜಯ ಬೆಂಗಳೂರು(ಭರತ ನಾಟ್ಯ)
  11. ಶ್ರೀಮತಿ ಲಕ್ಷ್ಮೀ ಕೌಶಿಕ ಬೆಂಗಳೂರು(ಭರತ ನಾಟ್ಯ)
  12. ಕರ್ನಾಟಕ ಸಂಘ ಮುಂಬೈ (ಹೊರನಾಡು ಸಂಘ ಸಂಸ್ಥೆ) 
2006 ನೆ ಸಾಲಿನ ಪ್ರಶಸ್ತಿ ಗೌರವಕ್ಕೆ ಭಾಜನರಾದ ಉದಯೋನ್ಮುಖ ಕಲಾವಿದರು
  1. ಶ್ರೀಮತಿ ವೈಷ್ಣವಿ ಹಾನಗಲ್ ಮುಂಬೈ (ಶಾಸ್ತ್ರಿಯ ಸಂಗೀತ ಗಾಯನ ) 
  2. ಶ್ರೀಮತಿ ರಾಜಶ್ರಿ ಉಳ್ಳಾಲ ಮಂಗಳೂರು (ಭರತ ನಾಟ್ಯ) 
  3. ಶ್ರೀ ಬೇಲೂರು ವೇಣುಗೊಪಾಲ ಹಾಸನ (ಕರ್ನಾಟಕಿ ಸಂಗೀತ ವಾದನ ) 
  4. ಶ್ರೀಮತಿ ಬಿ.ಪುಷ್ಪಲತಾ ಮೈಸೂರು (ಸುಗಮ ಸಂಗೀತ ) 
  5. ಶ್ರೀ ಟಿ. ಎಂ. ಶಿರೊಳಮಠ ಬಿಜಾಪುರ (ಸಂಗೀತ ಶಿಕ್ಷಕ ) 
  6. ಶ್ರೀ ಶರಣಪ್ಪ ಜಿ ಕಲಬುರ್ಗಿ ಗದಗ (ತಬಲಾ ವಾದನ ) 
  7. ಕುಮಾರಿ ದೀಪಾ ದಾವಣಗೆರೆ (ಸಾಂಸ್ಕೃತಿಕ ಸಂಘಟನೆ)
2007ನೆ ಸಾಲಿನ ಪ್ರಶಸ್ತಿ ಗೌರವಕ್ಕೆ ಭಾಜನರಾದ ಉದಯೋನ್ಮುಖ ಕಲಾವಿದರು
  1. ಡಾ. ಮೃತ್ಯಂಜಯ ಅಗಡಿ ಧಾರವಾಡ ( ಶಾಸ್ತ್ರಿಯ ಸಂಗೀತ ಗಾಯನ ) 
  2. ಶ್ರೀ ಶಫೀಕ್ ಖಾನ ಧಾರವಾಡ ( ಶಾಸ್ತ್ರಿಯ ವಾದ್ಯ ಸಂಗೀತ ಸಿತಾರ್ ) 
  3. ಕುಮಾರಿ ಶ್ವೇತಾ ಪ್ರಚಂಡೆ ಪುಣೆ (ಭರತ ನಾಟ್ಯ)
  4. ಶ್ರೀಮತಿ ಸ್ಮೀತಾ ಬೆಳ್ಳೂರ ಬೆಂಗಳೂರು (ಶಾಸ್ತ್ರಿಯ ಸಂಗೀತ ಗಾಯನ )
2008 ನೆ ಸಾಲಿನ ಪ್ರಶಸ್ತಿ ಗೌರವಕ್ಕೆ ಭಾಜನರಾದ ಉದಯೋನ್ಮುಖ ಕಲಾವಿದರು 
  1. ಶ್ರೀಮತಿ ಅನುಪಮ ಮಂಗಳವೇಡೆ ಮುಂಬೈ(ಶಾಸ್ತ್ರಿಯ ಸಂಗೀತ ಗಾಯನ ) 
  2. ಡಾ.ಪಂಡಿತ ರಾಠೊಡ ಗದಗ (ಸಾಹಿತ್ಯ )















ಪುಟ್ಟರಾಜ ಅಮೃತವಾಣಿ

ಪುಟ್ಟರಾಜ ಅಮೃತವಾಣಿ

ಮನಮುಟ್ಟಿ ಪೂಜಿಸಿದ ಫಲ ಕೈಯ ಮೇಲೆ
ಕೂಡಲಸಂಗಮದೇವ ನಿಮ್ಮ ಮನಮುಟ್ಟಿ
ಅತ್ಯುತ್ಕಟೈ: ಪುಣ್ಯಪಾಪೈರಿಹೈವ ಫಲಮಶ್ನುತೇ l
(ತಾತ್ಪರ್ಯ : ಅತಿಶಯವಾದ ಪುಣ್ಯ ಪಾಪಗಳು ಇದೇ ಲೋಕದಲ್ಲಿಯೇ ಫಲಿಸುತ್ತವೆ).
ಈ ಶುಭಾಷಿತ ವಚನಕಿಂತಲೂ ಶ್ರೀ ಬಸವಣ್ಣನವರು ಇನ್ನೂ ಸೂಕ್ಷಮವಾಗಿವಿಚಾರಿಸಿ ಹೀಗೆ ಹೇಳುತ್ತಾರೆ.
ಹೊಯ್ದರೆ ಹೊಯ್ಗಳು ಕೈಯ ಮೇಲೆ 
ಬೈದರೆ ಬಯ್ಗಳು ಕೈಯ ಮೇಲೆ
ಹಿಂದಿನ ಲೆವೆನಾದಡಾಗಲಿ
ಇಂದಿನ ಫಲಭೋಗ ಕೈಯ ಮೇಲೆ
ಪೂಜಿಸಿದಫಲ ಕೈಯ ಮೇಲೆ.
ಬಸವಣ್ಣನವರು ಹಿಂದಿನ ಜನ್ಮದ ಫಲವನ್ನು ಅವರು ಈ ವಚನದಲ್ಲಿ ಒಪ್ಪುವದಿಲ್ಲ ಮನ ಮುಟ್ಟಿದ ಪೂಜೆ ತತ್ ಕ್ಷಣದಲ್ಲಿಯೇ ಫಲಿಸುವದೆಂದು ಈ ವಚನದ ತಾತ್ಪರ್ಯ. ಮಾಡುವ ಪುಣ್ಯವೆಲ್ಲವು ಪೂಜೆಯ ಪುಣ್ಯವೆಂದರೆ ಪರಹಿತ ಪರೋಪಕಾರ ಮಾಡುವ ಮನುಷ್ಯನು ಯಾವಾಗಲು ಅನ್ಯರ ಮನ ನೋಯದಂತೆ ವರ್ತಿಸಬೇಕು. ಪರರ ಮನ ನೋಯಿಸುವಡೆ ಪಾಪ. ಅದಕ್ಕಾಗಿಯೇ ಶ್ರೀ ಬಸವಣ್ಣನವರು "ಅಯ್ಯಾ ಎಂದಡೆ ಸ್ವರ್ಗ,ಎಲವೊ ಎಂದ ಡೆ ನರಕ,ಭಕ್ತ ಜಿಯಾಜಯ ಎಂಬಲ್ಲಿ ಕೈಲಾಸವುಂಟು ಕೂಡಲ ಸಂಗಮ ದೇವ"ಎಂದಿದ್ದಾರೆ.ಪುಣ್ಯ ಪಾಪಗಳ ವಿಷಯವು ಇಷ್ಟು ಸೂಕ್ಷಮವಾಗಿದೆ.ಆದ್ದರಿಂದ ನಾವು ನುಡಿಯಲ್ಲಿಯೂ, ನಡೆಯಲ್ಲಿಯೂ ಜಾಗರೂಕರಾಗಿ ಇರಬೇಕು.ಒಂದು ಮೃದುವಾದ ಮಾತು ಒಂದು ಮಹಾ ಮಂತ್ರದ ಜಪವಾಗಿ ಪರಿಣಮಿಸುತ್ತದೆ. ಅದಕ್ಕಾಗಿ ಶ್ರೀ ಬಸವಣ್ಣನವರು ಮೃದುವಚನವೇ ಸಕಲ ಜಪಂಗಳಯ್ಯ ಮೃದುವಚನವೇ ಸಕಲ ತಪಂಗಳಯ್ಯ ಸದುವಿನಯವೇ ಸದಾಶಿವನೊಲುಮೆಯೈ ಎಂದು ಜನರನ್ನು ಎಚ್ಚರಿಸಿದ್ದಾರೆ.ಅದರಂತೆ ತಮ್ಮ ಮತ್ತೊಂದು ವಚನದಲ್ಲಿ ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ಪ ಲಿಂಗವು ಘಟಸರ್ಪನೋಡಾ"ಎಂದಿದ್ದಾರೆ. ಆದ್ದರಿಂದ ನಾವು ನಮ್ಮ ನುಡಿ ನಡೆಗಳಿಂದ ಪರಹಿತವನ್ನು ಸಾಧಿಸುವದೆ ಜನ್ಮ ಸಾಫಲ್ಯದ ಮಾರ್ಗವು.

ಸರ್ವಂ ಭದ್ರಂ ಭೂಯಾತ್ 
ಸಂಪಾದಕ : ಸಿ.ಕೆ.ಎಚ್.ಶಾಸ್ತ್ರೀ (ಕಡಣಿ).