ಜೂನ್ 18, 2014

ಸಾವಿರದ ಶರಣು ಸಮರ್ಪಣೆ


ಪೂಜ್ಯ ಗುರು ಪುಟ್ಟರಾಜರ 

ಜನ್ಮ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ 

ಗುರು ಪುಟ್ಟರಾಜರಿಗೆ 

ಸಾವಿರದ ಶರಣು ಸಮರ್ಪಣೆ

ಡಿಸೆಂಬರ - 6 - 2014 . ಹುಬ್ಬಳ್ಳಿ.

ಈ ಸಮಾರಂಭದಲ್ಲಿ ಈ ಫೆಸ್ ಬುಕ್ ಅಭಿಮಾನಿ ಭಕ್ತರನ್ನು ಒಳಗೊಂಡಂತೆ ಸಮಿತಿಯ ಸದಸ್ಯ 101 ಜನ ಪೂಜ್ಯರ ಅಭಿಮಾನಿ ಭಕ್ತರಿಗೆ “ಗುರು ಪುಟ್ಟರಾಜ ಕೃಪಾ ಸಮ್ಮಾನ” ಗೌರವ ಅಭಿನಂದನಾ ಪ್ರಶಸ್ತಿ ಸಾವಿರದ ಸವಿ ನೆನಪು ನೀಡಲು ನಿರ್ಧರಿಸಿದ್ದೇವೆ. ಈ ಪ್ರಶಸ್ತಿ ಸ್ವೀಕರಿಸಲು ಆಸಕ್ತರಾಗಿರುವ ಸಮಿತಿಯ ಸದಸ್ಯರು ಅಥವಾ ಸದಸ್ಯರಾಗಲು ಒಪ್ಪುವವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ೧. ಸಮಿತಿಯ ಸದಸ್ಯರಾಗಿರಬೇಕು ಅಥವಾ ಸದಸ್ಯರಾಗಲು ಬದ್ದರಾಗುರಬೇಕು. ೨. ನೇತ್ರದಾನ ಮಾಡಿರಬೇಕು ಅಥವಾ ನೇತ್ರದಾನ ಮಾಡಲು ಒಪ್ಪಿಕೊಳ್ಳಬೇಕು. ೩. ಪುಟ್ಟರಾಜರ ವಚನ ಸಾಹಿತ್ಯ ಕೃತಿ ಕನಿಷ್ಠ ೫೦ ಪುಸ್ತಕ ಉಚಿತ ವಿತರಣೆ ಮಾಡಿದವರಾಗಿರಬೇಕು (ಆ ಕೃತಿಗಳು ನಮ್ಮ ಸಮಿತಿಯ ಪ್ರಕಟಣೆ ಯಾಗಿರಬೇಕು) ಅಥವಾ  ವಿತರಣೆ ಮಾಡುವುದಕ್ಕೆ ಬದ್ದರಾಗಿರಬೇಕು.
ಈ ಸೇವೆ ನಿಮ್ಮಿಂದ ಸಾಧ್ಯವೇ ? ಸಾಧ್ಯವಾಗುವದಾದರೆ ಇಂದೆ ನಿಮ್ಮಹೆಸರು ನೊಂದಾಯಿಸಿಕೊಳ್ಳಿ ಈ ಅಪೂರ್ವ ಸಾವಿರದ ಸುವರ್ಣ ಸವಿ ನೆನಪು ನಿಮ್ಮದಾಗಿಸಿಕೊಳ್ಳಿ ಮಾಹಿತಿಗಾಗಿ ನಮ್ಮ puttarajasevasamiti@gamil.com ಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ. ವಂದನೆಗಳೊಂದಿಗೆ ಶ್ರೀ ವೇ. ಚನ್ನವೀರಸ್ವಾಮಿ ಹಿರೇಮಠ ಕಡಣಿ ಸಂಚಾಲಕರು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ) ಕೇಂದ್ರ ಸಮಿತಿ ಗದಗ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ