ಆತ್ಮೀಯ ಅಭಿಮಾನಿ ಭಕ್ತರೆ
ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಜನ್ಮ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಡಾ. ಪಂ. ಪುಟ್ಟರಾಜ ಪುಟ್ಟರಾಜ ಸೇವಾ ಸಮಿತಿಯು, ಮನೆ ಮನೆಯಲ್ಲಿ “ಗಾನಯೋಗಿ ಆರಾಧನೆ ” ಮಠ ಮಂದಿರದ ಪ್ರಾಂಗಣದಲ್ಲಿ “ಗುರು ಕುಮಾರ ಪಂಚಾಕ್ಷರಿ ವಚನ ಸಂಗೀತೋತ್ಸವ ”, ಕನ್ನಡ ಪರ ಸಂಘಟನೆಗಳ ಸಹ ಯೋಗದೊಂದಿಗೆ ‘ನಾಡೋಜ ’ ಕವಿ ಪುಟ್ಟರಾಜ ಸಾಹಿತೋತ್ಸವ, ಅಭಿಮಾನಿ ಭಕ್ತರಿಂದ ಅಭಿಮಾನಿ ಭಕ್ತರಿಗಾಗಿ “ಗುರು ಪುಟ್ಟರಾಜರಿಗೆ ಸಾವಿರದ ಶರಣು ಸಮರ್ಪಣೆ ” ಪುಟ್ಟರಾಜರ ನಾಲ್ಕನೆಯ ಪುಣ್ಯ ಸ್ಮರಣೆಯ “ ಗುರು ಗುಣ ಗಾನ ” ಶಾಸ್ತ್ರೀಯ ಸಂಗೀತ ಸಮ್ಮೇಳನ, “ ಕಣ್ಣಿದ್ದರೇನಂತೆ ” ಪುಟ್ಟರಾಜರ ವಚನಗಳ ಹೊಳಹುಗಳು ಪುಸ್ತಕ ಪ್ರಕಟಣೆ, ಪಂಡಿತ ಪುಟ್ಟರಾಜ ಪ್ರಕಾಶನ ಸಂಸ್ಥೆ ಸ್ಥಾಪನೆ, ಸಮಿತಿಯ ಮುಖವಾಣಿ ‘ ಕನ್ನಡ ಮಾಸ ಪತ್ರಿಕೆ ’ ಪ್ರಕಟಣೆ , ಪುಟ್ಟರಾಜರ ಜನುಮ ದಿನದಂಗವಾಗಿ “ಕನ್ನಡ ಸಂಸ್ಕೃತಿ ಸಂಭ್ರಮ ” ಸಂಗೀತ ನೃತ್ಯ ಸಮ್ಮೇಳನ, ಪ್ರತಿ ತಿಂಗಳು ಎರಡು ಕಾರ್ಯಕ್ರಮ ರಾಜ್ಯದ ತುಂಬ ಹಮ್ಮಿಕೊಳ್ಳಲು ಕ್ರಿಯಾಯೋಜನೆ ಸಿದ್ದಪಡಿಸಿದೆ. ಈ ಅಪೂರ್ವ ಕಾರ್ಯಕ್ರಮ ನಿಮ್ಮಿಂದ ನಿಮಗಾಗಿ. ಬನ್ನಿ, ತನು ಮನ ಧನದಿಂದ ನಮ್ಮೊಂದಿಗೆ ಕೈಜೋಡಿಸಿ ಗುರುಸೆವೆಗೆ ಸಹಕರಿಸಿ. ಈ ಕಾರ್ಯಕ್ರಮಕ್ಕೆ ಧನ ಸಹಾಯ ನೀಡುವವರು ಕಲಾಲೋಕ ಗದಗ ಹೆಸರಲ್ಲಿ D.D. ಅಥವಾ ಚೆಕ್ಕ್ ಮೂಲಕ ಮಾತ್ರ ಸಂದಾಯ ಮಾಡಬೇಕು D.D. ಅಥವಾ ಚೆಕ್ ಸಂಚಾಲಕರು ಪುಟ್ಟರಾಜ ಸೇವಾ ಸಮಿತಿ (ರಿ) ಪಂಚಾಕ್ಷರಿ ನಗರ ೪ನೆ ಅಡ್ಡರಸ್ತೆ ಗದಗ -582101 ಇಲ್ಲಿಗೆ ಕಳಿಸಿಕೊಡಬಹುದು. ಹೆಚ್ಚಿನ ಮಾಹಿತಿಗಾಗಿ 08372-220432 ಗೆ ಕರೆ ಮಾಡಬಹುದು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ