ನವೆಂಬರ್ 19, 2013

ಸಮಿತಿಯ ಕಾರ್ಯಕ್ರಮ ಪಟ್ಟಿ

 ಚುಟುಕು ಕವಿ ಸಮ್ಮೇಳನ 
ದಿನಾಂಕ 27-3-2004 ರಂದು  ಗದಗ.

ಯುವತಾರಾ ಸಂಗಮ
ಯುವ ಜನ ಸಂಗೀತ ಸಾಹಿತ್ಯ ಚಿತ್ರಕಲಾ ಸಮ್ಮೇಳನ
ದಿನಾಂಕ 3 ಮತ್ತು 4 ಎಪ್ರೀಲ್ 2004 ಗದಗ 

ಯುವಜನ ಸಂಗೀತ ನೃತ್ಯ ಸಮ್ಮೇಳನ-2005 
ದಿನಾಂಕ 9ಮತ್ತು 10 ಎಪ್ರೀಲ್ 2005 ಗದಗ 

ಕಲಾಸಿರಿ-2006 
(ರಾಜ್ಯ ಯುವಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ)
ದಿನಾಂಕ 15 ಅಕ್ಟೋಬರ್ 2006 ಗದಗ 

ಕಲಾಸಿರಿ-2007
(ರಾಜ್ಯಯುವಜನಸಂಗೀತಸಾಹಿತ್ಯನೃತ್ಯಸಮ್ಮೇಳನ)
1ಮತ್ತು2ಅಗಷ್ಥ2007 ಗದಗ

ಕನ್ನಡ ಮತ್ತು ಸಂಸ್ಕೃತಿ ಸಂಭ್ರಮ-2008 
(ರಾಜ್ಯಯುವ ಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ)
ದಿನಾಂಕ12ಮತ್ತು 13 ಜುಲೈ 2008 ಗದಗ

ಕನ್ನಡ ಮತ್ತು ಸಂಸ್ಕೃತಿ ಸಂಭ್ರಮ-2009 
(ರಾಷ್ಟ್ರೀಯ ಯುವ ಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ),
ದಿನಾಂಕ 12 ಮತ್ತು 13 ಸಪ್ಟೆಂಬರ -2009 ಗದಗ

ಪೂಜ್ಯರಿಗೆ ಪದ್ಮ ಭೂಷಣ ಪ್ರಶಸ್ತಿ ಬಂದ ಸವಿ ನೆನಹುಗಾಗಿ
ಗುರು ವಂದನಾ ಸಮಾರಂಭ
97 ಜನರಿಂದ ನೇತ್ರದಾನ ರಕ್ತದಾನ 
13 ಜೂನ್ 2010  ಗದಗ

ಡಾ.ಪಂ.ಪುಟ್ಟರಾಜ ಸಾಹಿತ್ಯೋತ್ಸವ-2011
(ಕವಿಗೋಷ್ಠಿ ವಚನ ಗಾಯನ ಪ್ರಶಸ್ತಿ ಪ್ರದಾನ ಪುಸ್ತಕ ಬಿಡುಗಡೆ)
ದಿನಾಂಕ 12 ಜೂನ್ 2011 ಕರ್ನಾಟಕ ವಿದ್ಯಾವರ್ಧಕ ಸಂಘ ದಾರವಾಡ

ಗುರುಗುಣಗಾನ -2011
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ)
17 ಸಪ್ಟೆಂಬರ  2011 ಗದಗ 

ಡಾ.ಪಂ.ಪುಟ್ಟರಾಜ ಸಾಹಿತ್ಯೋತ್ಸವ -2012
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ ಪ್ರಶಸ್ತಿ ಪ್ರದಾನ)
16 ಮಾರ್ಚ 2012 ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಬಿಜಾಪುರ

ಡಾ.ಪಂ.ಪುಟ್ಟರಾಜರ ದ್ವಿತೀಯ ಪುಣ್ಯಸ್ಮರಣೆ 
ಗುರುಗುಣಗಾನ -2012 
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ)
17 ಸಪ್ಟೆಂಬರ 2012 ಗದಗ

ನವೆಂಬರ್ 18, 2013

ಪುಟ್ಟರಾಜ ಸೇವಾ ಸಮಿತಿ ಹುಟ್ಟು

ಗದಗ ಬೆಟಗೇರಿ ಅವಳಿನಗರದ ನಾಗರಿಕರೆಲ್ಲ ಸೇರಿ, ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ಹುಟ್ಟು ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸ ಬೇಕೆಂಬ ಸಂಕಲ್ಪ ಮಾಡಿ ಪೂಜ್ಯರ ಹುಟ್ಟುಹಬ್ಬದ ಆಚರಣೆಗೆ ಮಾತ್ರ ಸೀಮಿತವಾದ ಪುಟ್ಟರಾಜರ ಹುಟ್ಟುಹಬ್ಬ ಸೇವಾ ಸಮಿತಿ ಅಸ್ತಿತ್ವಕ್ಕೆ ತರಲಾಯಿತು. 2001 ರಲ್ಲಿ ಪೂಜ್ಯರ ಹುಟ್ಟುಹಬ್ಬವನ್ನು ಪ್ರಪ್ರಥಮ ಬಾರಿಗೆ ಗದಗ ಬೆಟಗೇರಿ ಅವಳಿ ನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಗುರುವರ್ಯರ ಹುಟ್ಟುಹಬ್ಬ ಸಾರ್ವಜನಿಕವಾಗಿ ಆಚರಣೆಗೆಯಾಗ ಬೇಕೆಂಬ ಹಂಬಲ ಹೊಂದಿದ್ದ ಗದುಗಿನ ಕಲಾವಿಕಾಸ ಪರಿಷತ್ ಮಾರ್ಗದರ್ಶನದಲ್ಲಿ 2004 ರವರೆಗೆ ಅತ್ಯಂತ ವೈಭವದಿಂದ ಪ್ರತಿವರ್ಷ ಗುರುವರ್ಯರ ಹುಟ್ಟುಹಬ್ಬ ಸಾರ್ವಜನಿಕವಾಗಿ ಆಚರಿಸಿಕೊಂಡು ಬರಲಾಯಿತು.ಪುಟ್ಟರಾಜರ ಹುಟ್ಟುಹಬ್ಬದ ಆಚರಣೆಗೆ ಮೀಸಲಾಗಿದ್ದ ಮತ್ತು ಗದಗ ಬೆಟಗೇರಿ ಅವಳಿ ನಗರಕ್ಕೆ  ಮಾತ್ರ ಸೀಮಿತವಾಗಿದ್ದ ಈ ಸಮಿತಿಯನ್ನು, ರಾಜ್ಯಾದ್ಯಂತ ಇರುವ, ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗವನ್ನು ಒಂದೇ ವೇದಿಕೆಯಲ್ಲಿ ತರುವುದು ಮತ್ತು ಮಾರ್ಚ 3 ರಂದೇ ರಾಜ್ಯಾದ್ಯಂತ ಪೂಜ್ಯರ ಹುಟ್ಟುಹಬ್ಬ ಆಚರಣೆಯಾಗ ಬೇಕೆಂಬ ಉದ್ದೇಶದಿಂದ,ಈ ಪುಟ್ಟರಾಜ ಹುಟ್ಟುಹಬ್ಬ ಸೇವಾ ಸಮಿತಿಯನ್ನು, ಹುಟ್ಟುಹಬ್ಬ ಆಚರಣೆಯ ಮೀಸಲಾತಿ ಚೌಕಟ್ಟಿನಿಂದ ಹೊರತಂದು, ಪೂಜ್ಯರ ಸಂಗೀತ,ಸಾಹಿತ್ಯ,ಧಾರ್ಮಿಕ,ಸಾಮಾಜಿಕ ಸೇವೆಯನ್ನು ಸ್ಮರಿಸುವ ಸಮಾಜ ಸೇವಾ ಸಂಸ್ಥೆಯನ್ನಾಗಿ ಯಾಕೆ ಕಟ್ಟಬಾರದೆಂದು ಸಮಾನ ಮನಸ್ಕ ಪೂಜ್ಯರ ಅಭಿಮಾನಿ ಭಕ್ತರೆಲ್ಲ ಸೇರಿ ವಿಚಾರಮಾಡಿ 2004 ರಲ್ಲಿ ಹುಟ್ಟುಹಬ್ಬ ಸಮಿತಿಗೆ ಡಾ.ಪಂ.ಪುಟ್ಟರಾಜ ಸೇವಾ ಸಮಿತಿ (ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗ) ಯಂದು ಪುನರ್ ನಾಮಕರಣ ಮಾಡಿ ಈ ಸಮಿತಿ ಅಸ್ಥಿತ್ವಕ್ಕೆ ತರಲಾಯಿತು.ಈ ಸೇವಾ ಸಮಿತಿಯು ಇಂದು ರಾಜ್ಯಾದ್ಯಂತ ತನ್ನ ಚಟುವಟಿಕೆ ವಿಸ್ತರಿಸಿಕೊಂಡಿದೆ ರಾಜ್ಯಾದ್ಯಂತ ಇರುವ ಪೂಜ್ಯರ ಅಭಿಮಾನಿ ಭಕ್ತರ ಪ್ರೀತಿ ಪಾತ್ರವಾಗಿದೆ.ರಾಜ್ಯಾದ್ಯಂತ ಮಾರ್ಚ 3 ರಂದೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪೂಜ್ಯರ ಹುಟ್ಟುಹಬ್ಬ ಆಚರಣೆಗೆ ಪ್ರೇರಕ ಶಕ್ತಿಯಾಗಿ ಯಸಶ್ವಿಯಾಗಿದೆ.ಈ ಸಮಿತಿಯುKaranataka Socitieties Registration Act,1960 (Karanataka Act of 1960) ಅಡಿಯಲ್ಲಿ ನೊಂದಾಯಿಸಲಾಗಿದೆ.(Reg No: DR/GDG/SOR-59/2011-12)ಈಗ ಈ ಸಮಿತಿಗೆ 2೦14 ಇಸವಿಗೆ ಹತ್ತು ವರ್ಷ ತುಂಬುತ್ತಿವೆ. ಅದೇರೀತಿ ಇದೇ ವರ್ಷ ಪುಟ್ಟರಾಜ ಗುರುವರ್ಯ ಶತಮಾನೋತ್ಸವ ವರ್ಷವೂ ಹೌದು.ಪೂಜ್ಯರ ಜನ್ಮಶತಮಾನೋತ್ಸವ ಸಮಿತಿಯ ದಶಮಾನೋತ್ಸವ ಎರಡನ್ನೂ ಅವಿಸ್ಮರಣೀಯವಾಗಿ ಆಚರಿಸಲು ಯೋಚಿಸಲಾಗಿದೆ. ಕಾರಣ ಸಮಿತಿಯು ಪೂಜ್ಯರ ಅಭಿಮಾನಿ ಭಕ್ತರ ಮಹಾಬಳಗದ ಸಲಹೆ ಸೂಚನೆ ಮಾರ್ಗದರ್ಶನ ಬಯಸುತ್ತದೆ.ಈ ಒಂದು ವರ್ಷದ ಅವಧಿಯಲ್ಲಿ ಅಭಿಮಾನಿ ಭಕ್ತರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಲು ಸದಸ್ಯತ್ವ ಅಭಿಯಾನ ಆರಂಭವಾಗಿದೆ ಪೂಜ್ಯರ ಅಭಿಮಾನಿ ಭಕ್ತರು ಮಹಾಬಳಗದ ಅಧಿಕೃತ ಸದಸ್ಯತ್ವ ಪಡೆದುಕೊಳ್ಳಲು ಈಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ ಮತ್ತು ಈ ಸಮಿತಿಯ ದಶಮಾನೋತ್ಸವ ಮತ್ತು ಪುಟ್ಟರಾಜರ ಜನ್ಮ ಶತಮಾನೋತ್ಸವಕ್ಕೆ ಪೂಜ್ಯರ ಅಭಿಮಾನಿಗಳಾದ ತಾವು ಸಹಕಾರ ನೀಡಲು ಕೋರುತ್ತೇವೆ.

ನವೆಂಬರ್ 16, 2013

ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಸಾಧಕ ಶ್ರೇಷ್ಠರು

2004 ರಿಂದ 2014 ರ ಅವಧಿಯಲ್ಲಿ 
"ಡಾ.ಪಂ.ಪುಟ್ಟರಾಜ ಕೃಪಾಭೂಷಣಯುವ ಪುರಸ್ಕಾರ"
ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಶ್ರೇಷ್ಠ ಸಾಧಕರು
========================================================================

ಶ್ರೀ ಪ್ರಕಾಶ ಸೊಂಟಕ್ಕೆ ಬೆಂಗಳೂರು ಶಾಸ್ತ್ರಿಯ ವಾದ್ಯ ಸಂಗೀತ ಗಿಟಾರ್
ಶ್ರೀ ಫಯಾಜ್ ಅಹ್ಮದ್ ಖಾನ್ ಬೆಂಗಳೂರು ಶಾಸ್ತ್ರಿಯ ವಾದ್ಯ ಸಂಗೀತ ಸಾರಂಗಿ
ಶ್ರೀ ಶಾಂತಲಿಂಗ ದೇಸಾಯಿಕಲ್ಲೂರ ಗುಲಬರ್ಗಾ ಶಾಸ್ತ್ರಿಯ ವಾದ್ಯ ಸಂಗೀತ ತಬಲಾ
ಶ್ರೀ ಧನಂಜಯ ಹೆಗಡೆ ಬೆಂಗಳೂರು ಶಾಸ್ತ್ರಿಯ ಸಂಗೀತ ಗಾಯನ
ಶ್ರೀ ಕೈವಲ್ಯಕುಮಾರ ಗುರವ ಧಾರವಾಡ ಶಾಸ್ತ್ರಿಯ ಸಂಗೀತ ಗಾಯನ
ಶ್ರೀ ಲಕ್ಷ್ಮೀಶ ರಾವ ಮುಂಬೈ ಶಾಸ್ತ್ರಿಯ ವಾದ್ಯ ಸಂಗೀತ ತಬಲಾ
ಶ್ರೀ ಬಸವರಾಜ ಎಲ್ ಜಾನೆ ಗುಲಬರ್ಗಾ ಚಿತ್ರ ಕಲೆ
ಶ್ರೀ ಸಿದ್ದರಾಮ ಪೋಲಿಸ ಪಾಟೀಲ್ ಗುಲಬರ್ಗಾ ಸುಗಮ ಸಂಗೀತ ಗಾಯನ
ಶ್ರೀ ಬಸವರಾಜ್ ಹೊಸಮನಿ ಬಾಗಲಕೋಟ ರಂಗ ಭೂಮಿ
ಶ್ರೀ ವೀರಭದ್ರ ಸಿಂಪಿ ಗುಲಬರ್ಗಾ ಸಾಹಿತ್ಯ ಸಂಘಟನೆ
ಶ್ರಿ ಮಂಜುನಾಥ ಆಚಾರ್ಯ ಬೆಂಗಳೂರು ಶಿಲ್ಪಕಲೆ
ಶ್ರೀ ಆರ್.ಆರ್.ದೇಸಾಯಿ ಗುಲಬರ್ಗಾ ಕಲಾಪೋಷಕರು
ಶ್ರೀಮತಿ ಶುಭಾ ಧನಂಜಯ ಬೆಂಗಳೂರು ಭರತ ನಾಟ್ಯ
ಶ್ರೀಮತಿ ಲಕ್ಷ್ಮೀ ಕೌಶಿಕ ಬೆಂಗಳೂರು ಭರತ ನಾಟ್ಯ
ಕರ್ನಾಟಕ ಸಂಘ ಮುಂಬೈ ಹೊರನಾಡು ಸಂಘ ಸಂಸ್ಥೆ
ಶ್ರೀಮತಿ ವೈಷ್ಣವಿ ಹಾನಗಲ್ ಮುಂಬೈ ಶಾಸ್ತ್ರಿಯ ಸಂಗೀತ ಗಾಯನ
ಶ್ರೀಮತಿ ರಾಜಶ್ರಿ ಉಳ್ಳಾಲ ಮಂಗಳೂರು ಭರತ ನಾಟ್ಯ
ಶ್ರೀ ಬೇಲೂರು ವೇಣುಗೊಪಾಲ ಹಾಸನ ಕರ್ನಾಟಕಿ ಸಂಗೀತ ವಾದನ
ಶ್ರೀಮತಿ ಬಿ.ಪುಷ್ಪಲತಾ ಮೈಸೂರು ಸುಗಮ ಸಂಗೀತ
ಶ್ರೀ ಟಿ. ಎಂ. ಶಿರೊಳಮಠ ಬಿಜಾಪುರ ಸಂಗೀತ ಶಿಕ್ಷಕ
ಶ್ರೀ ಶರಣಪ್ಪ ಜಿ ಕಲಬುರ್ಗಿ ಗದಗ ತಬಲಾ ವಾದನ
ಕುಮಾರಿ ದೀಪಾ ದಾವಣಗೆರೆ ಸಾಂಸ್ಕೃತಿಕ ಸಂಘಟನೆ
ಡಾ. ಮೃತ್ಯಂಜಯ ಅಗಡಿ ಧಾರವಾಡ ಶಾಸ್ತ್ರಿಯ ಸಂಗೀತ ಗಾಯನ
ಶ್ರೀ ಶಫೀಕ್ ಖಾನ ಧಾರವಾಡ ವಾದ್ಯ ಸಂಗೀತ ಸಿತಾರ್
ಕುಮಾರಿ ಶ್ವೇತಾ ಪ್ರಚಂಡೆ ಪುಣೆ ಭರತ ನಾಟ್ಯ
ಶ್ರೀಮತಿ ಸ್ಮೀತಾ ಬೆಳ್ಳೂರ ಬೆಂಗಳೂರು ಶಾಸ್ತ್ರಿಯ ಸಂಗೀತ ಗಾಯನ
ಶ್ರೀಮತಿ ಅನುಪಮ ಮಂಗಳವೇಡೆ ಮುಂಬೈ ಶಾಸ್ತ್ರಿಯ ಸಂಗೀತ ಗಾಯನ
ಡಾ.ಪಂಡಿತ ರಾಠೊಡ ಗದಗ ಸಾಹಿತ್ಯ


ಅಭಿಮಾನಿ ಭಕ್ತರಲ್ಲಿ ಒಂದು ವಿಜ್ಞಾಪನೆ


ಡಾ.ಪಂ.ಪುಟ್ಟರಾಜರ ಅಭಿಮಾನಿ ಭಕ್ತರಲ್ಲಿ 
ಒಂದು ವಿಜ್ಞಾಪನೆ

ಆತ್ಮೀಯ ಅಭಿಮಾನಿ ಭಕ್ತರೇ... 

ಗಾಗಲೇ ತಾವು ಈ ಸಮಿತಿಯಪೆಗೆ ಪಾತ್ರರಾಗಿದ್ದಿರಿ ಇದಕ್ಕಾಗಿ ತಮಗೆ ಅನಂತ ಕೃತಜ್ಞೆತೆಗಳು. ಈಗ ನಮ್ಮ  ಸಮಾರಂಭಗಳಲ್ಲಿ ಅತಿಥಿ, ಕಲಾವಿದ, ಪ್ರಶಸ್ತಿಪುರಸ್ಕೃತ, ಪ್ರತಿನಿಧಿ ಗಳಾಗಿ ಭಾಗವಹಿಸಿ ಸಮಿತಿಯ ಎಲ್ಲ ಸಮಾರಂಭಗಳು ಯಶಸ್ವಿಯಾಗಲು ಕಾರಣರಾಗಿ ಪೂಜ್ಯರ ಕೃಸಮಿತಿಯು ತಮ್ಮನ್ನೂ ಒಳಗೊಂಡಂತೆ ತಮ್ಮೂರಿನಲ್ಲಿ ಇರುವ ಪೂಜ್ಯರ ಅಭಿಮಾನಿ ಭಕ್ತರೆಲ್ಲಗೂ ಸಮಿತಿಯ ದಶಮಾನೋತ್ಸವ ಮತ್ತು ಪೂಜ್ಯ ಗುರು ಪುಟ್ಟರಾಜರ ಜನ್ಮ ಶತಮಾನೋತ್ಸವ ಆಚರಣೆಯ ಸುವರ್ಣ ಸೇವಾಭಾಗ್ಯ ಕಲ್ಪಿಸಲು ಮುಂದಾಗಿ ತಮ್ಮನ್ನು ಈ ಮೂಲಕ ಸಂಪರ್ಕಿಸುತಿದ್ದೇವೆ. ತಾವು ಸಕ್ರೀಯವಾಗಿ ಪಾಲ್ಗೊಳ್ಳುವ ವಿಶ್ವಾಸವನ್ನೂ ಹೊಂದಿದ್ದೇವೆ. ಕೆಲವರು ಪೂಜ್ಯರನ್ನು ನೋಡಿರಬಹುದು ನೋಡದೇ ಇರಬಹುದು ಆದರೆ ಪೂಜ್ಯರ ವೆಕ್ತಿತ್ವದ ಬಗ್ಗೆ ಸಾಧನೆ ಸಿಧ್ಧಿಯ ಬಗ್ಗೆ ಕೇಳದೇ ಇರಲಾರರು. ಪೂಜ್ಯರು ಸಮಸ್ತ ಮನುಕುಲದ ಪ್ರಾತಿನಿಧಿಕ ವ್ಯಕ್ತಿಯಾಗಿ, ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದವರು. ಇಂತಹ ವ್ಯಕ್ತಿ ಮನುಕುಲದ ಇತಿಹಾಸದಲ್ಲಿ ಹಿಂದೆ ಇರಲಿಲ್ಲ ಮುಂದೆಸಿಗುವದೂ ಇಲ್ಲ. ಇದು ನನ್ನ ಪಾಲಿನ ಸತ್ಯ. ಇಂತಹ ಮಹಾ ಮೇರು ಚೇತನ ನಮ್ಮೊಂದಿಗಿಲ್ಲ. ಅವರ ಸಾಧನೆ ನಮ್ಮೊಂದಿಗಿವೆ. ಪೂಜ್ಯರ ಸಾಧನೆಯ ದರ್ಶನ ಮುಂದಿನ ಪೀಳಿಗೆ ನೋಡಬೇಕು ಮಾತನಾಡಬೇಕು ಸ್ಮರಿಸಿಕೊಳ್ಳಬೇಕು. ಅದಕ್ಕಾಗಿಯೇ ಈ ಸಮಿತಿ 2014-2015 ರ ಸಾಲಿನಲ್ಲಿ ವರ್ಷ ಪೂರ್ತಿ ರಾಜ್ಯದ ಹನ್ನೆರಡು  ಜಿಲ್ಲೆಗಳಲ್ಲಿ ಹನ್ನೆರಡು ಅದ್ದೂರಿ ಸಮಾರಂಭ ಹಮ್ಮಿಕೊಳ್ಳಲು ತಿರ್ಮಾನಿಸಿದೆ. ಆಯ್ದ ಹನ್ನೆರಡು ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆಯು ಒಂದು. ನಡೆದಾಡುವ ದೇವರೆಂದೇ ಖ್ಯಾತರಾಗಿ ಈ ನೆಲದ ನಕ್ಷತ್ರವಾಗಿ ಮಿನುಗಿ ಮರೆಯಾಗಿ ಹೋದರು ಕೂಡಾ  ಗುರು ಪೂಜ್ಯ ಪುಟ್ಟರಾಜರು  ನಮ್ಮ ನಿಮ್ಮೆಲ್ಲರ ಹೃದಯ ಗದ್ದುಗೆಯಲ್ಲಿ ಶಾಶ್ವತ ಸ್ಥಾನ ಹೊಂದಿದ್ದಾರೆ.ಎಲ್ಲರು ಸೇರಿ ಪೂಜ್ಯರ ಜನ್ಮ ಶತಮಾನೋತ್ಸವ ಸಂಭ್ರಮದಿಂದ ಆಚರಿಸೋಣ ಗುರು ಕೃಪೆಗೆ ಪಾತ್ರರಾಗೋಣ. 

------------------------------------------------------------------------------------------------------------
ಸಹಕರಿಸುವುದು ಹೇಗೆ 
ಈ ಸಮಿತಿಯ ಯಾವುದಾದರು ಒಂದು ಸದಸ್ಯತ್ವ ಪಡೆಯುವುದು, 
ತಮ್ಮ ಆಪ್ತಮಿತ್ರರನ್ನು ಸದಸ್ಯರನ್ನಾಗಿ ಮಾಡುವುದು. 
ಶತಮಾನೋತ್ಸವ ಆಚರಣೆಯನಾಯಕತ್ವ ವಹಿಸಿಕೊಂಡು ಸಕ್ರೀಯವಾಗಿ ಭಾಗವಹಿಸುವುದು,
ಪ್ರಾಯೋಜಕರನ್ನು ಮತ್ತು ದಾನಿಗಳನ್ನು ಒದಗಿಸುವದು.
------------------------------------------------------------------------------------------------------------ 
ಡಾ.ಪಂ.ಪು.ಸೆವಾಸಮಿತಿಯ ಸದಸ್ಯತ್ವ ಶುಲ್ಕವಿವರ : ಸಾಮಾನ್ಯ 250/-ರೂಪಾಯಿ, ಆಜೀವ 500/-ರೂಪಾಯಿ, ದಾನಿಗಳು 1000/-ರೂಪಾಯಿ, ಪೋಷಕರು 2500/-ರೂಪಾಯಿ, ಮಹಾಪೋಷಕರು 5000/-ರೂಪಾಯಿಗಳುಮಾತ್ರ. ನಿಗದಿಪಡಿಸಿದ ಸದಸ್ಯತ್ವ ಅರ್ಜಿ ನಮೂನೆಗಾಗಿ ಕಲಾಲೋಕ ಗದಗ ಹೆಸರಿಗೆ ಡಿ.ಡಿ.ಅಥವಾ ಚಕ್ ಕಳುಹಿಸಿ ಅರ್ಜಿ ನಮೂನೆ ಪಡೆಯಬಹುದು. ವಿಳಾಸ : ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಶ್ರೀಗಿರಿ ನಿವಾಸ ಪಂಚಾಕ್ಷರಿ ನಗರ 4ನೆಯ ಅಡ್ಡರಸ್ತೆ ಪಂಚಾಕ್ಷರಿ ನಗರ ಪೋಸ್ಟ ಬಾಕ್ಸ ನಂ,49.ಗದಗ-582101.ಕಳುಹಿಸಿ ಕೊಡಬಹುದು.ಮಾಹಿತಿಗಾಗಿ ಕಾರ್ಯಾಲದ ವೇಳೆಯಲ್ಲಿ (08372)220432 ಗೆ ಸಂಪರ್ಕಿಸಬಹುದು.ವಂದನೆಗಳೊಂದಿಗೆ ರಾಜ್ಯ ಸಂಚಾಲಕರು.

ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟಿ


ಪಂ. ಪುಟ್ಟರಾಜ ಕವಿ ಗವಾಯಿಗಳವರ ಜನ್ಮದಿನದ ಅಂಗವಾಗಿ
ಹಮ್ಮಿಕೊಂಡು ಬಂದ. ರಾಷ್ಟ್ರೀಯ ಮಟ್ಟದ ಸಂಗೀತ , ನೃತ್ಯ ಸಮ್ಮೇಳನದ
 ಸರ್ವಾಧ್ಯಕ್ಷರಾಗಿ ಗೌರವ ಸ್ವಿಕರಿಸಿದ ಸಂಗೀತ ದಿಗ್ಗಜರು 

ಪಂ.ರಾಜಗುರು ಗುರುಸ್ವಾಮಿ ಕಲಿಕೆರಿ ಗದಗ 
ಡಾ.ಶಾಮಲಾ ಜಿ ಭಾವೆ ಬೆಂಗಳೂರು 
ಡಾ.ಪಂ.ರಾಜಶೇಖರ ಮನ್ಸೂರ ಬೆಂಗಳುರು
ಡಾ. ಗಂಗೂಬಾಯಿ ಹಾನಗಲ್ ಹುಬ್ಬಳ್ಳಿ 
ಪಂ.ಮಾಧವ ಗುಡಿ ಧಾರವಾಡ

ಸಮ್ಮೇಳನಗಳ ಉದ್ಘಾಟಕರಾಗಿ ಆಗಮಿಸಿ
ಗುರುಕೃಪೆಗೆ ಪಾತ್ರರಾದ ಸನ್ಮಾನ್ಯರು

ಡಾ.ಸಂಪದಾ ಭಟ್ಟ ಬೆಂಗಳೂರು,
ಶ್ರೀ ಅಲ್ಲಮ ಪ್ರಭು ಪಾಟೀಲ ಗುಲಬರ್ಗಾ,
ಕರವೇ ರಾಜ್ಯಾಧ್ಯಕ್ಷ ಟಿ.ನಾರಾಯಣ ಗೌಡ ಬೆಂಗಳೂರು,
ನಾಟಕಕಾರ ಎಚ್.ಎನ್.ಹೂಗಾರ ಗದಗ,
ಚಿತ್ರನಟ ಮದನ ಪಟೇಲ ಬೆಂಗಳೂರು,

ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ
ಸಮ್ಮೇಳನಗಳ ಗೌರವ ಹೆಚ್ಚಿಸಿದ ಸಾಹಿತ್ಯ ದಿಗ್ಗಜರು

ಡಾ.ಜಿ.ಎಸ್.ಆಮೂರ ಧಾರವಾಡ
ಡಾ.ಪಂಚಾಕ್ಷರಿ ಹಿರೇಮಠ ಧಾರವಾಡ
ಡಾ.ಕಮಲಾ ಹಮ್ಮಿಗೆ ಧಾರವಾಡ
ಡಾ.ವೀರಣ್ಣ ರಾಜೂರ ಧಾರವಾಡ
ಡಾ.ಪ್ರದೀಪ ಕುಮಾರ ಹೆಬ್ರಿ ಮಂಡ್ಯ,
ಡಾ.ಚನ್ನವೀರ ಕಣವಿ ಧಾರವಾಡ
ಸಮಿತಿಯ ಗೌರವ ಹೆಚ್ಚಿಸಿದ್ದಾರೆ.

ನವೆಂಬರ್ 11, 2013

ಸೇವಾ ಸಮಿತಿ ಕಾರ್ಯಕ್ರಮಗಳು


========================================================================
ಸಮಿತಿಯ ಅಂತರ ರಾಷ್ಟ್ರೀಯ ಮಟ್ಟದ  ಕಾರ್ಯಕ್ರಮಗಳ ಪಟ್ಟಿ
======================================================================== 

ರಾಜ್ಯಮಟ್ಟದ 
ಚುಟುಕು ಕವಿ ಸಮ್ಮೇಳನ -2004
27 ಮಾರ್ಚ 2004 ಗದಗ
------------------------------

ಯುವ ತಾರಾ ಸಂಗಮ -2004 
(ಯುವ ಜನ ಸಂಗೀತ ಸಾಹಿತ್ಯ ಚಿತ್ರಕಲಾ ಸಮ್ಮೇಳನ )
3 ಮತ್ತು 4 ಎಪ್ರೀಲ್  2004 ಗದಗ 
---------------------------------------

ಯುವಜನ ಸಂಗೀತ ನೃತ್ಯ ಸಮ್ಮೇಳನ -2005
9 ಮತ್ತು 10 ಎಪ್ರೀಲ್ 2005 ಗದಗ
----------------------------------------

ಕಲಾಸಿರಿ -2006
(ರಾಜ್ಯ ಯುವಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ)
15 ಅಕ್ಟೋಬರ್ 2006 ಗದಗ
-------------------------------

ಕಲಾಸಿರಿ -2007
(ರಾಜ್ಯಯುವಜನಸಂಗೀತಸಾಹಿತ್ಯನೃತ್ಯಸಮ್ಮೇಳನ)
1 ಮತ್ತು 2 ಆಗಷ್ಟ 2007 ಗದಗ
----------------------------------

ಕನ್ನಡ ಮತ್ತು ಸಂಸ್ಕೃತಿ ಸಂಭ್ರಮ -2008
(ರಾಜ್ಯಯುವ ಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ)
12 ಮತ್ತು 13 ಜುಲೈ 2008 ಗದಗ
------------------------------------

ಕನ್ನಡ ಮತ್ತು ಸಂಸ್ಕೃತಿ ಸಂಭ್ರಮ -2009
ರಾಷ್ಟ್ರೀಯ ಯುವ ಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ)
12 ಮತ್ತು 13 ಸಪ್ಟೆಂಬರ -2009 ಗದಗ
-----------------------------------------

ಗುರು ವಂದನಾ ಸಮಾರಂಭ -2010
(97 ಜನರಿಂದ ನೇತ್ರದಾನ 97 ಜನರಿಂದ ರಕ್ತದಾನ)
13 ಜೂನ್ 2010 ಗದಗ
--------------------------

ಡಾ.ಪಂ.ಪುಟ್ಟರಾಜ ಸಾಹಿತ್ಯೋತ್ಸವ -2011
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ ಪುಸ್ತಕ ಬಿಡುಗಡೆ)
12 ಜೂನ 2011 ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ 
-----------------------------------------------------------------

ಗುರುಗುಣಗಾನ -2011
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ)
17 ಸಪ್ಟೆಂಬರ  2011 ಗದಗ 
-------------------------------

ಡಾ.ಪಂ.ಪುಟ್ಟರಾಜ ಸಾಹಿತ್ಯೋತ್ಸವ -2012
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ ಪ್ರಶಸ್ತಿ ಪ್ರದಾನ)
16 ಮಾರ್ಚ 2012 ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಬಿಜಾಪುರ
------------------------------------------------------------------------------

ಡಾ.ಪಂ.ಪುಟ್ಟರಾಜರ ದ್ವಿತೀಯ ಪುಣ್ಯಸ್ಮರಣೆ 
ಗುರುಗುಣಗಾನ -2012 
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ)
17 ಸಪ್ಟೆಂಬರ 2012 ಗದಗ

ನವೆಂಬರ್ 08, 2013

ಡಾ.ಪಂ.ಪು ಸದಸ್ಯತ್ವ ಅಪೇಕ್ಷಾ ಪತ್ರ

ಡಾ.ಪಂ.ಪುಟ್ಟರಾಜ ಸೇವಾ ಸಮಿತಿ (ರಿ)
(ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗ)
  Regd.under the Karnataka Socities Registration Act 1960. Regd. No. 59/ 2004 
======================================================================
ಕೇಂದ್ರ ಕಚೇರಿ 'ಶ್ರೀಗಿರಿ ನಿವಾಸ' ಪಂಚಾಕ್ಷರಿ ನಗರ 4ನೇ ಅಡ್ಡರಸ್ತೆ ಅಂಚೆ ಪೆಟ್ಟಿಗೆ ಸಂಖ್ಯೆ 49, ಗದಗ- 582101
E-Mail :dppssamiti@yahoo.com. Cell : 8951420887
======================================================================

* ಸದಸ್ಯತ್ವ ಅಪೇಕ್ಷಾ ಪತ್ರ *
-------------------------------------------------------------------------
ಪೂರ್ಣ ಹೆಸರು :
------------------------------------------------------------------------------------------------------------
ತಂದೆಯ ಹೆಸರು : 
------------------------------------------------------------------------------------------------------------
ತಾಯಿಯ ಹೆಸರು :
------------------------------------------------------------------------------------------------------------
ಅಡ್ಡ ಹೆಸರು :
------------------------------------------------------------------------------------------------------------
ಜನ್ಮ ಸ್ಥಳ : 
------------------------------------------------------------------------------------------------------------
ಜನ್ಮ ದಿನಾಂಕ :
------------------------------------------------------------------------------------------------------------
ಉದ್ಯೋಗ : 
------------------------------------------------------------------------------------------------------------
ಕಲಾವಿದರೆ ? ಕಲಾಪ್ರಕಾರ :
-----------------------------------------------------------------------------------------------------------------
ಅಂಚೆ ವಿಳಾಸ :




------------------------------------------------------------------------------------------------------------------
ಮೊಬೈಲ್ ನಂ :
------------------------------------------------------------------------------------------------------------------
E-Mail :
--------------------------------------------------------------------------------------------------------------- --
ಸಮಿತಿಯ ನಿಭಂದನೆಗಳಿಗೆ ಬದ್ಧನಾಗಿರಲು ಒಪ್ಪಿ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ ಸದಸ್ಯತ್ವ ನೀಡಿ ಗುರು ಸೇವೆ ಮಾಡಲು ಅವಕಾಶ ಮಾಡಿಕೊಡಲು ವಿನಂತಿಸಿಕೊಳ್ಳುತ್ತೇನೆ                               ವಂದನೆ ಗಳೊಂದಿಗೆ 
                                                                                                           ಪೂಜ್ಯರ ಅಭಿಮಾನಿ ಭಕ್ತ. 

ಸ್ಥಳ        : 

ದಿನಾಂಕ  :                                                                                                ಅರ್ಜಿದಾರರ ಸಹಿ/-




ಸದಸ್ಯತ್ವ ನಿಭಂದನೆಗಳು 
==========================

ನಿಬಂದನೆ (4) 
ಸದಸ್ಯತ್ವ ವರ್ಗೀಕರಣ ಹಾಗೂ ಶುಲ್ಕವಿವರ 
========================================================================
ಸಾಮಾನ್ಯ: 250/- ರೂಗಳು. ಆಜೀವ: 500/- ರೂಗಳು. ದಾನಿಗಳು: 1000/- ರೂಗಳು. ಪೋಷಕರು: 2500/- ರೂಗಳು. ಮಹಾಪೋಷಕರು: 5000/- ರೂಗಳು. + ಪ್ರವೇಶ ಶುಲ್ಕ 25/-ರೂಗಳು
ಮಹಾ ಪೋಷಕರಿಗೆ " ಡಾ. ಪಂ. ಪುಟ್ಟರಾಜ ಕೃಪಾ ಭೂಷಣ " ಗೌರವ ಸನ್ಮಾನ ನೀಡಿ ಕಂಚಿನ ಪತ್ರ ಸಮರ್ಪಿಸಲಾಗುವುದು 
--------------------------------------------------------------------------------------------------------------------
ನಿಬಂದನೆ (5)
ಸದಸ್ಯತ್ವ ಅರ್ಹತೆ :
1) ಈ ಸಮಿತಿಯ ಸದಸ್ಯರಾಗಲು ಕನಿಷ್ಠ 18 ವರ್ಷ ಪೂರ್ಣ ವಾಗಿರ್ಬೇಕು ಅಭಿಮಾನಿ ಭಕ್ತರು ಶಿಷ್ಯ ಪ್ರಶಿಷ್ಯರಾಗಿರಬೇಕು ರಾಜ್ಯದ ಹೊರರಾಜ್ಯದ ರಾಷ್ಟ್ರದ ಹೊರ ರಾಷ್ಟ್ರದಲ್ಲಿ ನೆಲಸಿದವರು ಸದಸ್ಯರಾಗಬಹುದು ರಾಜ್ಯದ ಹೊರಗಿನವರಿಗೆ ಕಾರ್ಯ ಕಾರಿಣಿ ಸಮಿತಿಯಲ್ಲಿ ಪದಾಧಿಕಾರಿಯಾಗಳು ಅವಕಾಶವಿರುವದಿಲ್ಲ ಆದರೆ ತಮ್ಮ ರಾಜ್ಯ ಮತ್ತು ರಾಷ್ಟ್ರಗಳಲ್ಲಿ ಶಾಖೆಯನ್ನು ಸ್ಥಾಪಿಸಿಕೊಳ್ಳಬಹುದು 2) ಸಮಿತಿಯ ರಚನಾತ್ಮಕ ಕಾರ್ಯಕ್ರಮಗಳಲ್ಲಿ ವಿಶ್ವಾಸ,ನಿಷ್ಥೆಯುಳ್ಳವರಾಗಿರಬೆಕು 3) ಉತ್ತಮ ಚ್ಯಾರಿತ್ರೆ ಹೊಂದಿರಬೇಕು.  ಪೂಜ್ಯರ ಅಭಿಮಾನಿಗಳಾಗಿರಬೇಕು ಕಲಾವಿದರು, ಸಾಹಿತಿಗಳು, ಕನಿಷ್ಠಕಲಾ ಪೋಷಕರಾದರು ಆಗಿರಬೇಕು
------------------------------------------------------------------------------------------------------------ 
ನಿಬಂದನೆ (6) 
ಸದಸ್ಯತ್ವ ಪಡೆಯುವ ವಿಧಾನ 
ಸಮಿತಿಯ ಸದಸ್ಯತ್ವ ಪಡೆಯಬೇಕೆನ್ನುವವರು ನಿಗದಿಪಡಿಸಿದ ನಮೂನೆಯಲ್ಲಿ ವಿವರ ( ಅಪೆಕ್ಷಾ ಪತ್ರ ) ತುಂಬಿ ಸದಸ್ಯತ್ವ ವಂತಿಕೆ ಹಣವನ್ನು ಮತ್ತು ರೂಪಾಯಿ 25/-ಪ್ರವೇಶ ಶುಲ್ಕದೊಂದಿಗೆ ತುಂಬಿ ಕೊಡತಕ್ಕದ್ದು.  ಕಾರ್ಯ ಕಾರಿಣಿ ಸಮಿತಿಯು ಅಪೇಕ್ಷಾ  ಪತ್ರವನ್ನು ಪರೀಶಿಲಿಸಿ ಸದಸ್ಯತ್ವ ಒಪ್ಪಬಹುದು ಅಥವಾ ಬಿಡಬಹುದು ಇಲ್ಲವೆ  ತಿರಸ್ಕರಿಸಬಹುದು.  ಆದರೆ ಪ್ರವೇಶ
ಶುಲ್ಕ ಮಾತ್ರ ಹಿದುರುಗಿಸಲಾಗುವುದಿಲ್ಲ ವಂತಿಕೆ ಹಣವನ್ನು ಹಿಂತಿರುಗಿಸಲಾಗುವುದು   
========================================================================
ಸದಸ್ಯತ್ವ ಶುಲ್ಕ ಸಂದಾಯ ಮಾಡಬೇಕಾದ ವಿವರ :

MERCHNTS LIBERAL CO-OPERATIVE BANK LTD.GADAG ಶಾಖೆಯ
  ''KALALOKA'' Account No,176 ಹೆಸರಲ್ಲಿ D.D.ತಗೆಸಿ, ಭರ್ತಿ ಮಾಡಿದ ಈ ಅರ್ಜಿಯೊಂದಿಗೆ ಲಗತ್ತಿಸಿ ಮೇಲಿನ ವಿಳಾಸಕ್ಕೆ ಕಳಿಸಿಕೊಡಬಹುದು ನೆರವಾಗಿ ಹಣ ಸಂದಾಯ ಮಾಡುವವರು AXIS BANK GADAG
A/C NO.413010100002738 IFS Code UTIB0000413.ಇಲ್ಲಿಗೆ ನೆರವಾಗಿ ಹಣ ಕಳಿಸಬಹುದು. 
------------------------------------------------------------------------------------------------------------
ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ 
========================================================================   http://about.me/puttarajgavaihttp://puttarajsevasamiti.blogspot.in

ಅಕ್ಟೋಬರ್ 21, 2013

ಹುಟ್ಟು ಆಚರಣೆಗೆ ಚಾಲನೆಗೆ ಪ್ರೇರಕರಾದ ಭಕ್ತರು


ಹುಟ್ಟು ಆಚರಣೆಗೆ ಚಾಲನೆಗೆ ಪ್ರೇರಕರಾದ ಭಕ್ತರು ಶ್ರೀ ವಿಶ್ವನಾಥ ರಾಮಣಕೊಪ್ಪ. ಡಾ.ವ್ಹಿ.ಕೆ. ಚಿಂತಾಮಣಿ. ಡಾ.ಅನಂತ ಶಿವಪುರ. ಶ್ರೀ ಮಹೇಂದ್ರಕುಮಾರ ಸಂಗಾನಿ. ಶ್ರೀ ಗಂಗಾಧರ ಗಡ್ಡಿ. ಶ್ರೀ ಶಂಕರ ಹಾನಗಲ್. ಶ್ರೀ ರಮೇಶ ಹತ್ತಿಕಾಳ. ಶ್ರೀ ಶಿವಣ್ಣ ಮುಳಗುಂದ. ಶ್ರೀ ಮೋಹನ ಮಾಳಶಟ್ಟಿ. ಶ್ರೀ ಸುರೇಶ ಶಹಾ. ಶ್ರೀ ಪ್ರಕಾಶ ಬಾಕಳೆ. ಶ್ರೀ ಮಧು ಪುಣೇಕರ್. ಶ್ರೀ ಅಶೋಕ ಸಂಕಣ್ಣವರ. ಶ್ರೀ ಸಿದ್ದಲಿಂಗಪ್ಪ ಪಟ್ಟಣಶಟ್ಟಿ. ಶ್ರೀ ಛಗನ ಪಟೇಲ. ಶ್ರೀ ಶಶಿಧರ ಮಂಗಳೂರು. ಶ್ರೀ ಬಲರಾಮ ಬಸವಾ. ಶ್ರೀ ವಸಂತ ಪಡಗದ. ಶ್ರೀ ನಿಂಗಪ್ಪ ಕೆಂಗಾರ. ಪ್ರೊ.ಕೆ.ಎಚ್.ಬೇಲೂರ. ಶ್ರೀಮತಿ ಜಯಶ್ರೀ ಉಗಲಾಟದ. ಜನಾಬ ಶರಫರಾಜ ಉಮಚಗಿ. ಶ್ರೀ ಪ್ರೇಮನಾಥ ಗರಗ. ಶ್ರೀ ಚಿದಾನಂದ ಕಾಂಬ್ಳೆ. ಶ್ರೀ ಆನಂದ ಗೌಳಿ. ಶ್ರೀ ವಿಜಯ ಕುಮಾರ ಗಡ್ಡಿ. ಶ್ರೀ ಎಸ್.ಎಚ್.ಶಿವನ ಗೌಡ್ರ. ಶ್ರೀ ಎಲ್.ಡಿ.ಚಂದಾವರಿ. ಶ್ರೀ ಅಶೋಕ ಹಂಜಗಿ. ಶ್ರೀ ಶ್ರೀನಿವಾಸ ಹುಯಿಲಗೋಳ. ಶ್ರೀ ಜಯದೇವ ಮೆಣಸಗಿ. ಶ್ರೀ ಪ್ರೇಮನಾಥ ತೆರದಾಳ. ಶ್ರೀ ಎಂ.ಆಯ್. ನವಲಗುಂದ. ಶ್ರೀ ಪ್ರೊ.ಎಸ್.ವಾಯ್. ಚಿಕ್ಕಟ್ಟಿ. ಶ್ರೀ ಕಿರೀಟ ಕುಮಾರ ಸಂಗಾನಿ. ಶ್ರೀ ಈಶ್ವರಸಾ ಮೆಹರವಾಡೆ. ಶ್ರೀ ರಾಜು ಕುರಡಗಿ. ಶ್ರೀ ವಿಜಯಕುಮಾರ ಹಿರೇಮಠ. ಶ್ರೀ ರಾಜು ಹುಬ್ಬಳ್ಳಿಮಠ. ಶ್ರೀ ರಾಜು ರೋಖಡೆ. ಶ್ರೀ ಪ್ರಶಾಂತ ನಾಯ್ಕರ. ಮಂಜುನಾಥ ರೆಡ್ಡಿ. ಜನಾಬ ಶಿರಾಜ ಬಳ್ಳಾರಿ. ಶ್ರೀ ವೆಂಕಟೇಶ ದಾಸರ. ಶ್ರೀ ರವಿ ಓದುಗೌಡರ. ಶ್ರೀ ಸದು ಮದರಿ ಮಠ. 

ಅಕ್ಟೋಬರ್ 02, 2013

ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಹುಟ್ಟು ಬೆಳವಣಿಗೆ

ಪರಮಪೂಜ್ಯ ಹಾನಗಲ್ಲ ಗುರು ಕುಮಾರ ಶಿವಯೋಗಿಗಳಿಂದ ಸ್ಥಾಪಿಸಲ್ಪಟ್ಟ, ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳವರು ಸಂಚಾಲಕರಾಗಿದ್ದ, ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಚಾರಿ ಸಂಗೀತ ಪಾಠಶಾಲೆ, ಪಂ.ಪಂಚಾಕ್ಷರಿ ಗವಾಯಿಗಳವರು ಲಿಂಗೈಕ್ಯರಾದ ನಂತರ, ಬಸರಿಗಿಡದ ವೀರಪ್ಪನವರು ದಾನವಾಗಿ ನೀಡಿದ ಹೊಲದಲ್ಲಿ, ಈ ಸಂಚಾರಿ ಸಂಗೀತ ಶಾಲೆಗೆ ಶ್ರೀಗುರು ಕುಮಾರೇಶ್ವರ ಕೃಪಾಪೋಷಿತ ಶ್ರೀ ವೀರೇಶ್ವರ ಪುಣ್ಯಾಶ್ರಮ ಸಂಗೀತ ಸಾಹಿತ್ಯ ಮಹಾವಿದ್ಯಾಲಯವೆಂದು ಪುನರ್ನಾಮಕರಣ ಮಾಡಿ, ಗುರುವಿನ ಹಾದಿಯಲ್ಲಿಯೇ ಅಂಧ ಅನಾಥ ಮಕ್ಕಳ ಸೇವೆ ಮುಂದುವರಿಸಿ, ಪುಣ್ಯಾಶ್ರಮದ ಮೂಲಕ ಸಂಗೀತ, ಸಾಹಿತ್ಯ, ರಂಗಭೂಮಿ, ಚಲನಚಿತ್ರ, ಪ್ರಪಂಚಕ್ಕೆ ಅನೇಕ ಶಿಷ್ಯರನ್ನು ನೀಡಿದರು. ಸುಮಾರು ಅರವತ್ತೈದು ವರ್ಷಗಳ ಸುಧೀರ್ಘ ಸೇವೆಸಲ್ಲಿಸಿ 89 ವಸಂತ ಕಂಡಿದ್ದರೂ ಕೂಡಾ, ಗದುಗಿನಲ್ಲಿ ಪೂಜ್ಯರ ಹುಟ್ಟುಹಬ್ಬ ಆಚರಿಸಿರಲೇ ಇಲ್ಲ. ಅವಳಿ ನಗರದ ನಗರ ಸಭೆಯವರು ಒಂದು ನಾಗರಿಕ ಸನ್ಮಾನ ಮಾಡುವ ಗೋಜಿಗೆ ಹೋಗಲಿಲ್ಲ. ರಾಜ್ಯದ ಹೊರಗೆ ದಿಲ್ಲಿ, ವಾರಾಣಾಸಿ, ಕೇರಳ, ಮದ್ರಾಸ ಮೊದಲಾದ ಕಡೆ ಇವರ ಹುಟ್ಟುಹಬ್ಬ ನಡೆಯುತ್ತಿದ್ಡವೆ ಹೊರತು ಗದುಗಿನಲ್ಲಿ ಸಮಸ್ತ ನಾಗರಿಕರೆಲ್ಲ ಸೇರಿ ಒಂದೇ ಒಂದು ಬಾರಿಯೂ ಕೂಡಾ ಹುಟ್ಟುಹಬ್ಬ ಆಚರಿಸಿರಲಿಲ್ಲ.ಇದನ್ನು ಗಮನಿಸಿದ ಗದುಗಿನ ಪ್ರತಿಸ್ಠಿತ ಸಂಸ್ಥೆ ಕಲಾವಿಕಾಸ ಪರಿಷತ್ ನ ಸಂಸ್ಥಾಪಕ ಕಾರ್ಯಾಧ್ಯಕ್ಷ ಶ್ರೀ ಚನ್ನವೀರ ಶಾಸ್ತ್ರಿಗಳವರು, ಪರಿಷತ್ ಸದಸ್ಯರೊಂದಿಗೆ ಚರ್ಚಿಸಿ ಪುಟ್ಟರಾಜರ ಹುಟ್ಟುಹಬ್ಬ ಸಮಿತಿಯನ್ನು ರಚಿಸಿ, ಗಣ್ಯ ವರ್ತಕರಾದ ಶ್ರೀ ವಿಶ್ವನಾಥ ರಾಮನಕೊಪ್ಪ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಅವರ ಸ್ನೇಹಿತರನ್ನು ಸೇರಿಸಿಕೊಂಡು ಆವಳಿ ನಗರದ ಸಮಸ್ತ ನಗರಿಕರೆಲ್ಲ ಸೇರಿ ಪ್ರಪ್ರಥಮ ಬಾರಿಗೆ ಪೂಜ್ಯರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಅದೇರೀತಿ ಪ್ರತಿ ವರ್ಷ ಆಚರಿಸುತ್ತ ಬರಲಾಯಿತು. ಅವಳಿ ನಗರಕ್ಕೆ ಮಾತ್ರ ಸೀಮಿತವಾಗಿದ್ದ, ಪುಟ್ಟರಾಜರ ಹುಟ್ಟುಹಬ್ಬದ ಆಚರಣೆಗೆ ಮಾತ್ರ ಮೀಸಲಾಗಿದ್ದ, ಕಲಾವಿಕಾಸ ಸಹ ಸಮಿತಿಯಾಗಿದ್ದ, ಈ ಹುಟ್ಟುಹಬ್ಬ ಸಮಿತಿಯನ್ನು, ಪೂಜ್ಯರ, ಸಂಗೀತ,ಸಾಹಿತ್ಯ,ಧಾರ್ಮಿಕ,ಸಾಮಾಜಿಕ ಸೇವೆಯನ್ನು ಸ್ಮರಿಸುವ ಸಂಸ್ಥೆಯನ್ನಾಗಿ ಯಾಕೆ ಕಟ್ಟಬಾರದೆಂದು ಯೋಚನೆ ಮಾಡಿ, ಸಮಾನ ಮನಸ್ಕ ಪೂಜ್ಯರ ಅಭಿಮಾನಿ ಭಕ್ತರೆಲ್ಲರನ್ನು ಸೇರಿಸಿ, ಈ ಹುಟ್ಟುಹಬ್ಬ ಸಮಿತಿಗೆ 2004 ರಲ್ಲಿ ಡಾ.ಪಂ.ಪುಟ್ಟರಾಜ ಸೇವಾ ಸಮಿತಿ (ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗ) ಎಂದು ಪುನರ್ ನಾಮಕರಣ ಮಾಡಲಾಯಿತು,ಈ ಸೇವಾ ಸಮಿತಿಯು ಇಂದು ರಾಜ್ಯಾದ್ಯಂತ ತನ್ನ ಚಟುವಟಿಕೆ ವಿಸ್ತರಿಸಿಕೊಂಡಿದೆ ರಾಜ್ಯಾದ್ಯಂತ ಇರುವ ಪೂಜ್ಯರ ಅಭಿಮಾನಿ ಭಕ್ತರ ಪ್ರೀತಿ ಪಾತ್ರವಾಗಿದೆ.ರಾಜ್ಯಾದ್ಯಂತ ಇರುವ ಅವರ ಅಭಿಮಾನಿ ಭಕ್ತರೆಲ್ಲ ಸದಸ್ಯರಾಗಿ ಪೋಷಕರಾಗಿ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸನ್ಮಾನ್ಯ ಶ್ರೀ ಚಂದ್ರಕಾಂತ ಬೆಲ್ಲದ ಮಾಜಿ ಶಾಸಕರು ಧಾರವಾಡ ಇವರು ಗೌ ರವ ಅಧ್ಯಕ್ಷರಾಗಿದ್ದಾರೆ ಶ್ರೀ ವಿಶ್ವನಾಥ ಚ .ರಾಮನಕೊಪ್ಪ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.ಶ್ರೀ ಮೋಹನ ನಾಗಮ್ಮನವರ ಸಾಹಿತಿಗಳು ಧಾರವಾಡ ಮಹಾಪ್ರಧಾನ ಕಾರ್ಯದರ್ಶಿಯಾಗಿ, ಪ್ರಧಾನ ಕಾರ್ಯದರ್ಶಿ ಯಾಗಿ ಶ್ರೀ ಶಶಿಧರ ಮಂಗಳೂರ,ಸಂಚಾಲಕರಾಗಿ ಪಂ.ಸಿ.ಕೆ.ಹೆಚ್ .ಶಾಸ್ತ್ರಿ (ಕಡಣಿ) ಸೇವೆ ಸಲ್ಲಿಸುತ್ತಿದ್ದಾರೆ. ಮಾರ್ಚ 3 ರಂದೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪೂಜ್ಯರ ಹುಟ್ಟುಹಬ್ಬ ಆಚರಣೆ ಆಗಬೇಕೆಂಬ ಸಂಕಲ್ಪ ಇಂದು ಇಡೇರಿದೆ. ಇದೆ ಹತ್ತು ವರ್ಷಗಳ ಹಿಂದೆ ಯಾರು ಆಚರಿಸದವರು ಮನೆ ಮನೆಯಲ್ಲಿ ಆಚರಿಸಲಾಗುತ್ತಿದೆ ಇ ವಾತಾವರಣ ನಿರ್ಮಾಣಮಾಡಿದ ಸಮಿತಿಯ ಉದ್ದೇಶ ಇಡೇರಿದೆ.ಇದಕಿಂತ ಹೆಚ್ಚಿನದ್ದು ನಮಗಿನ್ನೇನು ಬೇಕು ? ಇ ಸಮಿತಿಯು ಪುಟ್ಟರಾಜರ ಲಿಂಗೈಕ್ಯ ದಿನ ಸಪ್ಟೆಂಬರ 17 ರಂದು ಅಂತರ ರಾಷ್ಠ್ರೀಯ ಮಟ್ಟದ ಸಂಗೀತ ಸಮಾರೋಹ ವನ್ನು ಹಮ್ಮಿಕೊಳ್ಳಲು ಪ್ರಯತ್ನಿಸುತ್ತಿದೆ. ಪೂಜ್ಯರ ಆಗಲಿಕೆಯ ದುಖದಿಂದ ಹೊರಬರಲಾಗದೆ ಸಣ್ಣ ಪ್ರಮಾಣದ ಸಮಾರಂಭ ಮಾತ್ರ ಹಮ್ಮಿ ಕೊಳ್ಳಲಾಗಿತ್ತುಮುಂದಿನ ದಿನಗಳಲ್ಲಿಸಪ್ಟೆಂಬರ17 ಅವಿಸ್ಮರಣೆದಿನವನ್ನಾಗಿ ಅಂದು ಎಲ್ಲದಾರಿಗಳು ಗದುಗಿನಕಡೆಗೆ ಎನ್ನುವ ರೀತಿಯಲ್ಲಿ ಸಮಾರಂಭಹಮ್ಮಿಕೊಳ್ಳಲಿದ್ದೇವೆ
ನಿಮ್ಮ ಸಹಕಾರದ ಶ್ರೀ ರಕ್ಷೆ ನಮಗಿದೆ ಎಂದು ನಂಬಿದ್ದೇವೆ.ಈ ಸಮಿತಿಯು (Regd,under the KarnatakaSocietiesRegstration Act 1960) ನೋಂದಾಯಿಸಲಾಗಿದೆ. ಸ್ಥಾಪನೆ:2001ನೋo,ಸಂಖೆ 59. ಸಮಿತಿಯ ಕೆಲವು ಮುಖ್ಯ ಉದ್ದೇಶಗಳು : ಪೂಜ್ಯರ, ಜೀವನ, ಸಾಧನೆ, ಸಂದೇಶ ಪ್ರಚಾರ ಮತ್ತು ಪ್ರಸಾರ. ಪೂಜ್ಯರ ಸಾಹಿತ್ಯ ಮರು ಮುದ್ರಣ, ಅಪ್ರಕಟಿತ ಸಾಹಿತ್ಯ ಪ್ರಕಟಣ. ಸಾಹಿತ್ಯ, ಸಂಗೀತ, ನೃತ್ಯ ಕಲಾ ಸಮ್ಮೇಳನ ಆಯೋಜನ. ಕವಿ, ಕಲಾವಿದ, ಸಾಹಿತಿ, ಸಮಾಜ ಸೇವಕರಿಗೆ ಮತ್ತು ಸಾಂಸ್ಕೃತಿಕ ಸಂಘಟಕರಿಗೆ ಸನ್ಮಾನ. ಸಮಿತಿಯ ಪ್ರತಿಷ್ಠಿತ ಪ್ರಶಸ್ತಿಗಳು : (1) ಡಾ.ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರ. ವರ್ಷದ ಶ್ರೇಷ್ಠ ಪುಸ್ತಕ ಪ್ರಶಸ್ತಿ.(2) ಡಾ.ಪಂ.ಪುಟ್ಟರಾಜ ಸಾಹಿತ್ಯ ಸಮ್ಮಾನ ಕವಿ,ಕಲಾವಿದ ಸಾಹಿತಿ ಸಂಘಟಕರ ಜೀವಮಾನದ ಶ್ರೇಷ್ಠ ಸಾಧನಾ ಗೌರವ ಪ್ರಶಸ್ತಿ.(3) ಡಾ.ಪಂ.ಪುಟ್ಟರಾಜ ಕೃಪಾಭೂಷಣ ಸತ್ಕಾರ ಸರ್ವ ಶ್ರೇಷ್ಠ ಅಬಿಮಾನಿ ಭಕ್ತ ನೀಡುವ ಪ್ರಶಸ್ತಿ.(4) ಡಾ.ಪಂ.ಪುಟ್ಟರಾಜ ಗವಾಯಿ ಯುವಪುರಸ್ಕಾರ ಸಂಗೀತ,ಸಾಹಿತ್ಯ,ನೃತ್ಯ ಕಲಾ ರಾಜ್ಯಪ್ರಶಸ್ತಿ. ಸಮಿತಿಯ ಪ್ರಮುಖ ಕಾರ್ಯಕ್ರಮಗಳು : ಮಾರ್ಚ ,3 ರಂದು ಪೂಜ್ಯರ ಜಯಂತೋತ್ಸವದ ಅಂಗವಾಗಿ ಸಾಹಿತ್ಯೋತ್ಸವ, ಸಪ್ಟೆಂಬರ 7 ರಂದು ಪುಣ್ಯಸ್ಮರಣೋತ್ಸವದ ಅಂಗವಾಗಿ ಸಂಗೀತೋತ್ಸವ. ಡಿಸೆಂಬರ 31ರಂದು ಹೊಸ ವರ್ಷಕ್ಕೆಸ್ವಾಗತಿಸುವ ಗುರು ಗುಣ ಗಾನ ಅಭಿಮಾನಿ ಭಕ್ತರ ಬೃಹತ ಸಮಾವೇಶ. ಯುವಜನ ಕಲಾ ಪ್ರತಿಭೋತ್ಸವ.     

ಸೆಪ್ಟೆಂಬರ್ 30, 2013

ಸಾಹಿತ್ಯ ಪುರಸ್ಕಾರ ಪತ್ರಿಕಾ ಪ್ರಕಟಣೆ



ಡಾ.ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರ ಪ್ರಶಸ್ತಿಗಾಗಿ ಕನ್ನಡದ ಪುಸ್ತಕಗಳ ಆಹ್ವಾನ
--------------------------------------------------------------------------------------- 
ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯು, ಪೂಜ್ಯ ಗುರು ಪುಟ್ಟರಾಜರ ಸಾಹಿತ್ಯ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ''ಡಾ.ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರ'' ಪ್ರಶಸ್ತಿ ಅಸ್ತಿತ್ವಕ್ಕೆ ತಂದು ಹತ್ತು ವರ್ಷಗಳಿಂದ ನೀಡುತ್ತಾ ಬಂದಿದೆ. ಪ್ರಸಕ್ತ ಸಾಲಿನ ಪ್ರಶಸ್ತಿಗಾಗಿ ಕನ್ನಡದ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಯು ನಗದು ಬಹುಮಾನ, ಮಾನಪತ್ರ, ಅಂಗ ವಸ್ತ್ರವನ್ನು ಒಳಗೊಂಡಿದೆ. ಸೇವಾ ಸಮಿತಿಯು ಹಮ್ಮಿಕೊಳ್ಳುವ ಡಾ.ಪಂ.ಪು.ಸಾಹಿತ್ಯೋತ್ಸವ ದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವರ್ಷದ ಉತ್ತಮ ಹತ್ತು ಕೃತಿಗಳಿಗೆ ಅಭಿನಂದನಾ ಪತ್ರಗಳನ್ನು ಕೂಡಾ ನೀಡಲಾಗುವುದು. ಇದೇ ಸಂದರ್ಭದಲ್ಲಿ ಸಾಹಿತಿ, ಸಾಹಿತ್ಯ ಪ್ರಕಾಶಕ ಮತ್ತು ಸಾಹಿತ್ಯಸಂಘಟಕರಿಗೆ ಜೀವಮಾನದ ಶ್ರೇಷ್ಠ ಸಾಧನೆಯನು ಗೌರವಿಸುವ ''ಡಾ.ಪಂ.ಪು.ಸಾಹಿತ್ಯ ಸಮ್ಮಾನ'' ನೀಡಿ ಗೌರವಿಸಲಾಗುತ್ತಿದೆ. ಈ ಗೌರವ ಸಮ್ಮಾನಕ್ಕೆ ಕನ್ನಡಮ್ಮನ ಸಾಹಿತಿ ಗುಪ್ತ ಭಕ್ತ, ಸಾಹಿತ್ಯ ಪ್ರಚಾರಕ ಮತ್ತು ಸಾಹಿತ್ಯ ಸಂಘಟಕರ ಹೆಸರುಗಳನ್ನು ಸಾರ್ವಜನಿಕರು ಸೂಚಿಸಬಹುದಾಗಿದೆ. ಹೆಸರು ಸೂಚಿಸುವವರು ಪೂರಕಮಾಹಿತಿಯನ್ನು ನಮ್ಮ dppssamiti@yahoo.com ಈ ಮೇಲ್ ಮೂಲಕ ಮಾತ್ರ ಕಳುಹಿಸಿಕೊಡಬಹುದು.
ಡಾ.ನಿರಂಜನ ವಾನಳ್ಳಿ ಮೈಸೂರು, ಡಾ.ಎಸ್.ಎಂ.ಹಿರೇಮಠ ಗುಲಬರ್ಗ, ಡಾ.ಪ್ರದೀಪಕುಮಾರ ಹೆಬ್ರಿ ಮಂಡ್ಯ, ಡಾ.ಮ.ನಿ.ಪ್ರ.ಚನ್ನಬಸವಸ್ವಾಮೀಜಿ ಜಮಖಂಡಿ, ಶ್ರೀ ಸಿದ್ದರಾಮ ಉಪ್ಪಿನ ಆಲಮೇಲ. ಶ್ರೀ ಗಣೇಶ ಅಮೀನಗಡ ಹುಬ್ಬಳ್ಳಿ, ಡಾ.ಎಚ್.ಟಿ.ಪೊತೆ ಕಲಬುರ್ಗಿ, ಮೊದಲಾದವರ ಕೃತಿಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2011 ನೇ ಸಾಲಿನಿಂದ ಇಲ್ಲಿವರೆಗೆ ಪ್ರಕಟವಾದ 3 ಪ್ರತಿಗಳು, ಪರಿಚಯಪತ್ರ, ಅಗತ್ಯ ಅಂಚೆ ಚೀಟಿ ಲಗತ್ತಿಸಿ ಸ್ವವಿಳಾಸ ಬರೆದ ಲಕೋಟೆ ಇರಿಸಿ ದಿನಾಂಕ 15 ಡಿಸೆಂಬರ 2013 ರ ಒಳಗಾಗಿ ಸಿ.ಕೆ.ಎಚ್.ಶಾಸ್ತ್ರಿ(ಕಡಣಿ)ಸಂಚಾಲಕರು, ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಪಂಚಾಕ್ಷರಿ ನಗರ ೪ನೇ ಆಡ್ಡರಸ್ತೆ ಅಂಚೆ ಪೆಟ್ಟಿಗೆ ಸಂಖೆ 49, ಗದಗ-582101 ಗೆ ಕಳುಹಿಸಿ ಕೊಡಲುಕೋರಲಾಗಿದೆ ಮಾಹಿತಿಗಾಗಿ ಸಂಚಾರಿ ದೂರವಾಣಿ ಸಂಖೆ : 8951420887 ಗೆ ಸಂಪರ್ಕಿಸಬಹುದು ಎಂದು ಡಾ.ಪಂ. ಪುಟ್ಟರಾಜ ಸೇವಾ ಸಮಿತಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 

------------------------------------------------------------------------------------------------------------ಮಾನ್ಯರೆ , 

ಈ ಸುದ್ದಿ ನಿಮ್ಮ ದಿನ ಪತ್ರಿಕೆಯ ರಾಜ್ಯ ವಿಭಾಗದಲ್ಲಿ ಪ್ರಕಟಿಸಿ ಗುರುಸೇವೆಯಲ್ಲಿ ನಮ್ಮೊಂದಿಗೆ  ಕೈ ಜೋಡಿಸಿ ಪುಟ್ಟರಾಜರ ಕೃಪೆಗೆ ಪಾತ್ರರಾಗಲು ಕೋರುತ್ತೇವೆ 


                      
ಗದಗ                                            
15 ನವಂಬರ -2013                                 ಪಂ.C.K.H ಶಾಸ್ತ್ರೀ (ಕಡಣಿ) 
                                                                                                        ರಾಜ್ಯ ಸಂಚಾಲಕರು
                                                                                                   ದೂರವಾಣಿ 08372220432


ಸೆಪ್ಟೆಂಬರ್ 29, 2013

ಡಾ.ಪಂ.ಪುಟ್ಟರಾಜ ಸಾಹಿತೋತ್ಸವ ಕುರಿತು

ಡಾ.ಪಂ.ಪುಟ್ಟರಾಜರ ಜೀವನ,ಸಾಧನೆ,ಸಂದೇಶ ಸ್ಮರಣೆಗಾಗಿ ಅವರ ಅಭಿಮಾನಿ ಬಳಗದವರು ಹುಟ್ಟು ಹಾಕಿದ ಸಂಸ್ಥೆ ಡಾ.ಪಂ.ಪುಟ್ಟರಾಜ ಸೇವಾ ಸಮಿತಿ.ಈ ಸೇವಾ ಸಮಿತಿಗೆ ದಶಮಾನದ ಸಂಭ್ರಮ. ಡಾ,ಪಂ.ಪುಟ್ಟರಾಜರು ಸಂಗೀತದಲ್ಲಿ ಮಾಡಿದಷ್ಟು ಸಾಧನೆ ಸಾಹಿತ್ಯ ಕ್ಷೇತ್ರದಲ್ಲಿಯೂ ಅನುಪಮ ಸಾಧನೆ ಮಾಡಿದ ಮಹಾ ಚೇತನವಾಗಿದ್ದರು. ಪೂಜ್ಯರು ಹುಟ್ಟು ಕುರುಡರಾಗಿದ್ದರು ಕೂಡಾ ನಾಲ್ಕು ಭಾಷೆಗಳಲ್ಲಿ ನೂರಾರು ಕೃತಿ ರಚಿಸಿ ಜ್ಞಾನಯೋಗಿಯಾಗಿದ್ದರು. ಸಾಹಿತ್ಯದ ವೈವಿಧ್ಯಮಯ ಪ್ರಕಾರದಲ್ಲಿ ಕನ್ನಡ,ಹಿಂದಿ,ಸಂಸ್ಕೃತ ಮತ್ತು ಬ್ರೇಲ್ ಭಾಷೆಯಲ್ಲಿ ಕೃತಿರಚನೆ ಮಾಡಿದವರಾಗಿದ್ದರು ಕೂಡಾ ಇವರ ಸಾಹಿತ್ಯ ಸೇವೆಗೆ ಅಷ್ಟಾಗಿ ಪ್ರಚಾರ ಸಿಗದೆಹೋಯಿತೇನೋ ಅನಿಸದೆ ಇರಲಾರದು. ನಮ್ಮ ಈ ಸಮಿತಿ ಪೂಜ್ಯರ ಸಾಹಿತ್ಯ ಸೇವೆ ಸ್ಮರಿಸಿಕೊಳ್ಳಲು  ಡಾ.ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಅಸ್ತಿತ್ವಕ್ಕೆ ತಂದು ಕನ್ನಡದ ಪುಸ್ತಕಗಳಿಗೆ ನೀಡುತ್ತ ಬರಲಾಗಿದೆ  ಮತ್ತು ಇದೇ ಸಂಧರ್ಭದಲ್ಲಿ ಯುವ ಸಾಹಿತಿಗಳಿಗೆ ಸತ್ಕರಿಸಿ ಪ್ರೋತಸಹಿಸುವ ಪರಂಪರೆ ಆರಂಭಿಸಲಾಗಿದೆ. ಇದುವರೆಗೆ ಬಹುಜನ ಸಾಹಿತಿಗಳ ಕನ್ನಡ ಕೃತಿಗಳಿಗೆ ಈ ಪುರಸ್ಕಾರ ನೀಡಿ ಗೌರವಿಸಲಾಗಿದೆ . (ಪ್ರಶಸ್ತಿ ಪುರಸ್ಕೃತರ ಪಟ್ಟಿ ಮುಂದೆ ನೀಡಲಾಗಿದೆ) ಅನೇಕ ಯುವ ಸಾಹಿತಿಗಳಿಗೆ ಸತ್ಕರಿಸಿ ಪ್ರೋತ್ಸಾಹ ನೀಡಲಾಗಿದೆ. ಈ ಸಮಿತಿ ರಾಜ್ಯಮಟ್ಟದ ಸಂಸ್ಥೆಯಾಗಿ ರೂಪಗೊಂಡ ನಂತರ ಪುಟ್ಟರಾಜ ಸಾಹಿತ್ಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಥಮ ಸಾಹಿತೋತ್ಸವ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ಅತ್ಯಂತ ವೈಭವದಿಂದ ಆಚರಿಸಿದರೆ, ಎರಡನೆಯ ಸಾಹಿತ್ಯೋತ್ಸವವನ್ನು ಕರ್ನಾಟಕ ಮಹಿಳಾ ವಿಶ್ವ ವಿದ್ಯಾಲಯ ಬಿಜಾಪುರದಲ್ಲಿ ಆಚರಿಸಲಾಯಿತು. ಈಗ ಮೂರನೆಯ ಸಾಹಿತ್ಯೋತ್ಸವ ಆಚರಣೆಗೆ ಸಿಧ್ಧತೆ ಮಾಡಿಕೊಳ್ಳಲಾಗುತ್ತಿದ್ದು ಮೊದಲ ಹಂತವಾಗಿ ಸಾಹಿತ್ಯ ಪುರಸ್ಕಾರಕ್ಕಾಗಿ ಕೃತಿಗಳನ್ನು ಆಹ್ವಾನಿಸಲಾಗಿದೆ. ಇನ್ನೊಂದು ವಿಷಯ ಈ ವರ್ಷ ಅಂದರೆ 2014 ನಮ್ಮ ಸಮಿತಿಗೆ ದಶಮಾನೋತ್ಸವ ವರ್ಷ ಹಾಗೆಯೇ ಪೂಜ್ಯ ಗುರು ಪುಟ್ಟರಾಜರ ಜನ್ಮ ಶತಮಾನೋತ್ಸವ ವರ್ಷವೂ ಹೌದು. ಕಾರಣ  ತೃತೀಯ ಪುಟ್ಟರಾಜ ಸಾಹಿತ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದೆ. ರಾಜ್ಯದ ರಾಜ್ಯಧಾನಿ ಬೆಂಗಳೂರು,ಗುಲಬರ್ಗಾ,ಹಾವೇರಿ ಮತ್ತು ದಾವಣಗೇರಿ ಜಿಲ್ಲೆಯ ಅಭಿಮಾನಿ ಭಕ್ತರು ಸಾಹಿತ್ಯೋತ್ಸವ ಆತಿಥ್ಯವಹಿಸಿಕೊಳ್ಳಲು ಮುಂದೆ ಬಂದಿದ್ದಾರೆ ಆದರೆ ಸ್ಥಳ ಅಂತಿಮವಾಗಿಲ್ಲ.
ಡಾ.ನಿರಂಜನ ವಾನಳ್ಳಿ ಮೈಸೂರು, ಡಾ.ಎಸ್.ಎಂ.ಹಿರೇಮಠ ಗುಲಬರ್ಗ, ಡಾ.ಪ್ರದೀಪಕುಮಾರ ಹೆಬ್ರಿ ಮಂಡ್ಯ, ಡಾ.ಮ.ನಿ.ಪ್ರ.ಚನ್ನಬಸವಸ್ವಾಮೀಜಿ ಜಮಖಂಡಿ, ಶ್ರೀ ಸಿದ್ದರಾಮ ಉಪ್ಪಿನ ಆಲಮೇಲ. ಶ್ರೀ ಗಣೇಶ ಅಮೀನಗಡ ಹುಬ್ಬಳ್ಳಿ, ಡಾ.ಎಚ್.ಟಿ.ಪೊತೆ ಕಲಬುರ್ಗಿ, ಮೊದಲಾದವರ ಕೃತಿಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  

ಸೆಪ್ಟೆಂಬರ್ 20, 2013

ಸಿಂಹಾವಲೋಕನ - ಮಾಹಿತಿ ಲೇಖನ - 3

ಡಾ.ಪಂ. ಪುಟ್ಟರಾಜ ಸೇವಸಮಿತಿ (ರಿ) ಗದಗ
ಪಂ ಪುಟ್ಟರಾಜರ 92 ನೇ ಹುಟ್ಟುಹಬ್ಬದ ಅಂಗವಾಗಿ
ಯುವಜನ ಸಂಗೀತ,ನೃತ್ಯ ಸಮ್ಮೇಳನ - 2005

----------------------------------------------------------------------
ದಿನಾಂಕ 9 ಮತ್ತು 10 ಎಪ್ರೀಲ್ 2005
ಜಗದ್ಗುರು ತೋಂಟದಾರ್ಯ ಕಲ್ಯಾಣ ಕೇಂದ್ರ ಗದಗ

-----------------------------------------------------------------------
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕಲಾ ಸೇವೆ ಸಲ್ಲಿಸಿದ ಪುಣ್ಯ ಜೀವಿ ಕಲಾವಿದರು
ಶ್ರೀ ಕೈವಲ್ಯಕುಮಾರ ಗುರವ ಧಾರವಾಡ (ಶಾಸ್ತ್ರಿಯ ಸಂಗೀತ ಗಾಯನ)
ಶ್ರೀ ಲಕ್ಷ್ಮೀಶ ರಾವ್ ಮುಂಬೈ (ತಬಲಾಸೋಲೋ)
ಶ್ರೀ ಸಿದ್ದರಾಮ ಪೋಲಿಸ ಪಾಟೀಲ್ ಗುಲಬರ್ಗಾ (ಸುಗಮ ಸಂಗೀತ)
ಶ್ರೀಮತಿ ಶುಭಾ ಧನಂಜಯ ಬೆಂಗಳೂರು (ಭರತ ನಾಟ್ಯ)
ಶ್ರೀಮತಿ ಲಕ್ಷ್ಮೀ ಕೌಶಿಕ ಬೆಂಗಳೂರು (ಭರತ ನಾಟ್ಯ)
ವಿದುಷಿ ರೂಪಾ ರಾಜೇಶ ಶಿವಮೊಗ್ಗ (ಭರತ ನಾಟ್ಯ)
ಕು.ರೂಪಶ್ರೀ ಭಟ್ ಮುಂಡಗೋಡ ಭರತ ನಾಟ್ಯ)
ಶ್ರೀ ಜೆ, ನಿರಂಜನ ಹುಬ್ಬಳ್ಳಿ (ಭರತನಾಟ್ಯ) (ಗಾಯನ)
ಕು.ಎ.ಮೇಘನಾ ಮಂಡ್ಯ
ಕು.ಮನಸ್ವಿ ಆರ್. ಆನೇಕಲ್ (ಸುಗಮ ಸಂಗೀತ)
ವಿದುಷಿ, ಸ್ವೆತಾ ಭಟ್ ಕಾಸನೂರು (ಭರತನಾಟ್ಯ)
ಶ್ರೀ ರಂಗನಾಥ ಬತ್ತಾಸಿ ಬಿಜಾಪುರ (ಕಥಕ)
ಶ್ರೀ ವಿಕಾಸ ನರೇಗಲ್ ಬೆಂಗಳೂರು (ತಬಲಾ ಸೋಲೋ)
ಶ್ರೀಮತಿ ಗಾಯತ್ರಿ ಮಂಜುನಾಥ ಬೆಂಗಳೂರು (ಭರತನಾಟ್ಯ)
ಶ್ರೀಮತಿ ಪವಿತ್ರಾ ಮಂಜುನಾಥ ಬೆಂಗಳೂರು (ಭರತನಾಟ್ಯ)
ಶ್ರೀ ಉದಯ ಕುಲಕರ್ಣಿ ಧಾರವಾಡ (ತಬಲಾ ಸೋಲೋ)
ಕುಮಾರಿ ಕವಿತಾ ಎಸ. ಗಂಗೂರಿ ಧಾರವಾಡ (ಗಾಯನ)
ಕುಮಾರಿ ರೇಶ್ಮಾ ಸವದತ್ತಿ ಧಾರವಾಡ (ಭರತನಾಟ್ಯ)
ಕುಮಾರಿ ಬಿ.ಕಾಮಾಕ್ಷಿ ಚಿತ್ರಪಳ್ಳಿ (ಸುಗಮ ಸಂಗೀತ)
ಕುಮಾರಿ ವೈ.ವಿ.ರೂಪಶ್ರೀ ಮೈಸೂರು (ಭರತನಾಟ್ಯ)
ಕುಮಾರಿ ವಿದ್ಯಾ ಎಸ್.ಜಕ್ಕನಗೌಡರ ಗದಗ (ಗಾಯನ)
ಕುಮಾರಿ ಸ್ನೇಹ ಭಟ್ ಸಿರ್ಸಿ (ಭರತನಾಟ್ಯ)
ಕುಮಾರಿ ಸುಷ್ಮಾ ನರಹರಿ ಬೆಂಗಳೂರು (ಭರತನಾಟ್ಯ)
ಶ್ರೀಮತಿ ಚಂದ್ರಿಕಾ ಕೆ.ಎ. ಮಂಗಳೂರು (ಭರತನಾಟ್ಯ)
ಶ್ರೀ ಎಚ್.ಎಸ. ನರಸಿಂಹಪ್ರಸಾದ ಬೆಂಗಳೂರು (ಹಾಡುಗಾರಿಕೆ)
ಕುಮಾರಿ ಕವಿತಾ ಮಠಪತಿ ಬೀದರ (ಗಾಯನ)
ಕುಮಾರಿ ಮೇಘನಾ ಹೆಗಡೆ ಸಿದ್ದಾಪುರ (ಭರತನಾಟ್ಯ)
ಶ್ರೀ ಬಿ ಆಯ್.ನಿರಂಜನ ಹಾರೊಗೇರಿ (ಸುಗಮ ಸಂಗೀತ)
ಶ್ರೀಮತಿ ರಾಧಿಕಾ ಜೋಗಳೇಕರ ಸಿರಸಿ (ಭರತನಾಟ್ಯ)
ಶ್ರೀ ಪಿ ಎಸ. ಉಪಾದ್ಯ ಬೆಳಗಾವಿ (ಭರತನಾಟ್ಯ)
ಕುಮಾರಿ ಕೌಸರ ಬಂದಗಿ ಕೆರೂರು (ಸುಗಮ ಸಂಗೀತ)
ಶ್ರೀಮತಿ ದೀಪಾ ಭಟ್ ಬೆಂಗಳೂರು (ಭರತನಾಟ್ಯ)
ಶ್ರೀ ನಾರಾಯಣ ಹಿರೆಕೊಳಚಿ ಗದಗ (ವಯಲಿನ್ ವಾದನ)
ಶ್ರೀ ಶರಣಕುಮಾರ ಕಲಬುರ್ಗಿ ಗದಗ (ತಬಲಾ ಸೋಲೋ)
ಶ್ರೀ ಜಿ.ಜಿ.ಸುತಾರ ಗದಗ (ತಬಲಾಸಾಥ)
ಶ್ರೀ ವೆಂಕಟೇಶ ಜೋಷಿ ಗದಗ (ತಬಲಾ ಸಾಥ)
ಕುಮಾರಿ ಕವಿತಾ ಪಾಟಿಲ ಹೊಸಪೇಟೆ (ಭರತನಾಟ್ಯ)

ಸಿಂಹಾವಲೋಕನ - ಮಾಹಿತಿ ಲೇಖನ - 2

ಡಾ.ಪಂ. ಪುಟ್ಟರಾಜ ಸೇವಸಮಿತಿ (ರಿ) ಗದಗ 
ದಿನಾಂಕ 3 ಮತ್ತು 4 ಎಪ್ರೀಲ್ 2004 ರಂದು ಗದುಗಿ 
ಚೇಂಬರ ಆಫ್ ಕಾಮರ್ಸ ನ ಎಸ.ಬಿ.ಸಂಕಣ್ಣವರ ಸಭಾ ಭವನದಲ್ಲಿ 
ಪುಟ್ಟರಾಜರ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ
ಯುವ ತಾರಾ ಸಂಗಮ -೦4 ಸಂಗೀತ ಸಮ್ಮೇಳನ ದಲ್ಲಿ
ಭಾಗವಹಿಸಿ ಸಂಗೀತ ಸೇವೆ ಸಲ್ಲಿಸಿದ ಕಲಾವಿದರು.
----------------------------------------------------------------------------------------------------------
  1. ಡಾ.ಸಂಪದಾ ಭಟ್ ಮರಬಳ್ಳಿ ಬೆಂಗಳೂರು
  2. ಡಾ.ಹನುಮಂತ ಬುರ್ಲಿ ಧಾರವಾಡ
  3. 'ವಿದ್ವಾನ'ಕೆ.ಎಸ್.ಮೋಹನಕುಮಾರ ಭದ್ರಾವತಿ 
  4. ಡಾ.ವ್ಹಿ.ಕೆ.ಚಿಂತಾಮಣಿ ಗದಗ
  5. 'ವಿದ್ವಾನ'ದ್ವಾರಕೀಶ ಎಂ ಚಿತ್ರದುರ್ಗ 
  6. ಪಂ.ಪ್ರಕಾಶ ಸೊಂಟಕ್ಕೆ ಬೆಂಗಳೂರು 
  7. ಉಸ್ತಾದ ಫೈಯಾಜ ಖಾನ ಬೆಂಗಳೂರು 
  8. ಪಂ.ಶಾಂತಲಿಂಗ ದೆಸಾಯಿಕಲ್ಲೂರು ಗುಲಬರ್ಗಾ 
  9. ಪಂ.ಧನಂಜಯ ಹೆಗಡೆ ಬೆಂಗಳೂರು 
  10. ಪಂ.ನಾರಾಯಣಕುಮಾರ ಹಿರೆಕೊಳಚಿ ಗದಗ
  11. ಶ್ರೀ ವಿಶ್ವನಾಥ ಗವಾಯಿಗಳು ಗದಗ 
  12. ಶ್ರೀ ಶರಣಕುಮಾರ ಗುತ್ತರಗಿ ಗದಗ
  13. ಶ್ರೀ ಶಿವಬಸಯ್ಯ ಗದ್ದದಮಠ ಗದಗ 
  14. ಶ್ರೀ ವೀರೇಶ ಹಿಟ್ನಾಳ ಹೊಸಪೇಟೆ
  15. ಶ್ರೀ ವೆಂಕಟೇಶ ಜೋಷಿ ಗದಗ 
  16. ಶ್ರೀ ಶ್ಯಾಮರಾವ ಫುಲಾರಿ ಗದಗ 
  17. ಶ್ರೀ ಮಂಜುನಾಥ ಭಟ್ ಗದಗ
  18. ಶ್ರೀಮತಿ ಲಕ್ಷ್ಮೀ ಶಂಕರ ಜೋಷಿ ಗುಲಬರ್ಗಾ 
  19. ಶ್ರೀಮತಿ ಸುಜಾತಾ ಕಮ್ಮಾರ ಧಾರವಾಡ 
  20. ಕುಮಾರಿ ರಾಜೇಶ್ವರಿ ಹುಂಬಿ ಹಾವೇರಿ
  21. ಶ್ರೀ ಶ್ರೀನಿವಾಸ ಕುಂದೂರ ದಾವಣಗೆರೆ  
  22. ಶ್ರೀ ವಿಕ್ರಮ ಜೋಷಿ ದಾವಣಗೆರೆ 
  23. ಶ್ರೀಮತಿ ಅನುರಾಧ ಬಾದ್ರಿ ಮೈಸೂರು 
  24. ಕುಮಾರಿ ಹನುಮಕ್ಕ ರಾಜಪುರೋಹಿತ ಕುಷ್ಟಗಿ 
  25. ಕುಮಾರಿ ಸುಮಾ ಚಕ್ರಪಾಣಿ ಬಳ್ಳಾರಿ 
  26. ಶ್ರೀಮತಿ ಮಾಲತಿ ಗೋಪಾಲಕೃಷ್ಣ ಮೈಸೂರು
  27. ಕುಮಾರಿ ಅಂಬಿಕಾ ಭಾಗ್ಯನಗರ ಕೊಪ್ಪಳ 
  28. ಕುಮಾರಿ ಗೀತಾ ಸೀತಾ ಮಠದ ಕೊಪ್ಪಳ 
  29. ಕುಮಾರಿ ಸುಷ್ಮೀತಾ ಪ್ರಕಾಶ ಬೆಂಗಳೂರು 
  30. ಕುಮಾರಿ ಪುರ್ಣೀಮಾ ಪಾಟೀಲ ಅಕ್ಕಿಆಲೂರು 
  31. ಶ್ರೀಮತಿ ಟಿ.ಹೆಚ್.ಇಂದುಮತಿ ಭದ್ರಾವತಿ
  32. ವಿದ್ವಾನ್ ಸತೀಶಕುಮಾರ ತಾಂಡವಮೂರ್ತಿ ಮಂಡ್ಯ 
  33. ಶ್ರೀ ಎಂ.ಎಸ್.ತ್ಯಾಗರಾಜ ಭದ್ರಾವತಿ 
  34. ಶ್ರೀ ಪ್ರಮೋದ ಕುಲಕರ್ಣಿ ಬೆಂಗಳೂರು 
  35. ಕುಮಾರಿ ರಮ್ಯಾ ಎಸ.ಗೌಡ ಹಾಸನ 
  36. ಶ್ರೀ ಜೇಸುದಾಸ ಎಸ್.ದಾವಣಗೆರೆ 
  37. ಕುಮಾರಿ ಸಾವಿತ್ರಿ ಮಲ್ಲಾಡದ ಬಾಲ ಪ್ರತಿಭೆ ಗದಗ 



ಸೆಪ್ಟೆಂಬರ್ 18, 2013

ಸಿಂಹಾವಲೋಕನ ಮಾಹಿತಿ ಲೇಖನ 1


ಡಾ.ಪಂ. ಪುಟ್ಟರಾಜ ಸೇವಾ ಸಮಿತಿ (ರಿ) ಗದಗ
ರಾಷ್ಟ್ರೀಯ ಸಂಗೀತ ನೃತ್ಯಸಮ್ಮೇಳನದ
"ಡಾ.ಪಂ.ಪುಟ್ಟರಾಜ ಕೃಪಾಭೂಷಣಯುವ ಪುರಸ್ಕಾರ" 
ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಸಾಧಕ ಶ್ರೇಷ್ಠರು
(೨೦೦೪ ರಿಂದ ೨೦೦೮ ) 

2004 ನೆ ಸಾಲಿನ ಪ್ರಶಸ್ತಿ ಗೌರವಕ್ಕೆ ಭಾಜನರಾದ ಉದಯೋನ್ಮುಖ ಕಲಾವಿದರು
  1. ಶ್ರೀ ಪ್ರಕಾಶ ಸೊಂಟಕ್ಕೆ ಬೆಂಗಳೂರು (ಶಾಸ್ತ್ರಿಯ ವಾದ್ಯ ಸಂಗೀತ ಗಿಟಾರ್ ) 
  2. ಶ್ರೀ ಫಯಾಜ್ ಅಹ್ಮದ್ ಖಾನ್ ಬೆಂಗಳೂರು (ಶಾಸ್ತ್ರಿಯ ವಾದ್ಯ ಸಂಗೀತಸಾರಂಗಿ  )  
  3. ಶ್ರೀ ಶಾಂತಲಿಂಗ ದೇಸಾಯಿ ಕಲ್ಲೂರ ಗುಲಬರ್ಗಾ (ಶಾಸ್ತ್ರಿಯ ವಾದ್ಯ ಸಂಗೀತ ತಬಲಾ )    
  4. ಶ್ರೀ ಧನಂಜಯ ಹೆಗಡೆ ಬೆಂಗಳೂರು (ಶಾಸ್ತ್ರಿಯ ಸಂಗೀತ ಗಾಯನ ) 
2005 ನೆ ಸಾಲಿನ ಪ್ರಶಸ್ತಿ ಗೌರವಕ್ಕೆ ಭಾಜನರಾದ ಉದಯೋನ್ಮುಖ ಕಲಾವಿದರು
  1. ಶ್ರೀ ಕೈವಲ್ಯಕುಮಾರ ಗುರವ ಧಾರವಾಡ (ಶಾಸ್ತ್ರಿಯ ಸಂಗೀತ ಗಾಯನ ) 
  2. ಶ್ರೀ ಲಕ್ಷ್ಮೀಶ ರಾವ್ ಮುಂಬೈ(ಶಾಸ್ತ್ರಿಯ ವಾದ್ಯ ಸಂಗೀತ ತಬಲಾ )  
  3. ಶ್ರೀ ಬಸವರಾಜ ಎಲ್ ಜಾನೆ ಗುಲಬರ್ಗಾ (ಚಿತ್ರ ಕಲೆ) 
  4. ಶ್ರೀ ಸಿದ್ದರಾಮ ಪೋಲಿಸ ಪಾಟೀಲ್ ಗುಲಬರ್ಗಾ (ಸುಗಮ ಸಂಗೀತ ಗಾಯನ ) 
  5. ಶ್ರೀ ಬಸವರಾಜ್ ಹೊಸಮನಿ ಬಾಗಲಕೋಟ (ರಂಗ ಭೂಮಿ ) 
  6. ಶ್ರೀ ವೀರಭದ್ರ ಸಿಂಪಿ ಗುಲಬರ್ಗಾ (ಸಾಹಿತ್ಯ ಸಂಘಟನೆ ) 
  7. ಶ್ರಿ ಮಂಜುನಾಥ ಆಚಾರ್ಯ ಬೆಂಗಳೂರು (ಶಿಲ್ಪಕಲೆ ) 
  8. ಶ್ರೀ ಆರ್.ಆರ್.ದೇಸಾಯಿ ಗುಲಬರ್ಗಾ (ಸಹಕಾರಿ ರಂಗ) 
  9. ಶ್ರೀಮತಿ ಸುನಿತಾ ದಿನಕರ ಬೆಂಗಳೂರು (ಕಲಾಪೋಷಕರು ) 
  10. ಶ್ರೀಮತಿ ಶುಭಾ ಧನಂಜಯ ಬೆಂಗಳೂರು(ಭರತ ನಾಟ್ಯ)
  11. ಶ್ರೀಮತಿ ಲಕ್ಷ್ಮೀ ಕೌಶಿಕ ಬೆಂಗಳೂರು(ಭರತ ನಾಟ್ಯ)
  12. ಕರ್ನಾಟಕ ಸಂಘ ಮುಂಬೈ (ಹೊರನಾಡು ಸಂಘ ಸಂಸ್ಥೆ) 
2006 ನೆ ಸಾಲಿನ ಪ್ರಶಸ್ತಿ ಗೌರವಕ್ಕೆ ಭಾಜನರಾದ ಉದಯೋನ್ಮುಖ ಕಲಾವಿದರು
  1. ಶ್ರೀಮತಿ ವೈಷ್ಣವಿ ಹಾನಗಲ್ ಮುಂಬೈ (ಶಾಸ್ತ್ರಿಯ ಸಂಗೀತ ಗಾಯನ ) 
  2. ಶ್ರೀಮತಿ ರಾಜಶ್ರಿ ಉಳ್ಳಾಲ ಮಂಗಳೂರು (ಭರತ ನಾಟ್ಯ) 
  3. ಶ್ರೀ ಬೇಲೂರು ವೇಣುಗೊಪಾಲ ಹಾಸನ (ಕರ್ನಾಟಕಿ ಸಂಗೀತ ವಾದನ ) 
  4. ಶ್ರೀಮತಿ ಬಿ.ಪುಷ್ಪಲತಾ ಮೈಸೂರು (ಸುಗಮ ಸಂಗೀತ ) 
  5. ಶ್ರೀ ಟಿ. ಎಂ. ಶಿರೊಳಮಠ ಬಿಜಾಪುರ (ಸಂಗೀತ ಶಿಕ್ಷಕ ) 
  6. ಶ್ರೀ ಶರಣಪ್ಪ ಜಿ ಕಲಬುರ್ಗಿ ಗದಗ (ತಬಲಾ ವಾದನ ) 
  7. ಕುಮಾರಿ ದೀಪಾ ದಾವಣಗೆರೆ (ಸಾಂಸ್ಕೃತಿಕ ಸಂಘಟನೆ)
2007ನೆ ಸಾಲಿನ ಪ್ರಶಸ್ತಿ ಗೌರವಕ್ಕೆ ಭಾಜನರಾದ ಉದಯೋನ್ಮುಖ ಕಲಾವಿದರು
  1. ಡಾ. ಮೃತ್ಯಂಜಯ ಅಗಡಿ ಧಾರವಾಡ ( ಶಾಸ್ತ್ರಿಯ ಸಂಗೀತ ಗಾಯನ ) 
  2. ಶ್ರೀ ಶಫೀಕ್ ಖಾನ ಧಾರವಾಡ ( ಶಾಸ್ತ್ರಿಯ ವಾದ್ಯ ಸಂಗೀತ ಸಿತಾರ್ ) 
  3. ಕುಮಾರಿ ಶ್ವೇತಾ ಪ್ರಚಂಡೆ ಪುಣೆ (ಭರತ ನಾಟ್ಯ)
  4. ಶ್ರೀಮತಿ ಸ್ಮೀತಾ ಬೆಳ್ಳೂರ ಬೆಂಗಳೂರು (ಶಾಸ್ತ್ರಿಯ ಸಂಗೀತ ಗಾಯನ )
2008 ನೆ ಸಾಲಿನ ಪ್ರಶಸ್ತಿ ಗೌರವಕ್ಕೆ ಭಾಜನರಾದ ಉದಯೋನ್ಮುಖ ಕಲಾವಿದರು 
  1. ಶ್ರೀಮತಿ ಅನುಪಮ ಮಂಗಳವೇಡೆ ಮುಂಬೈ(ಶಾಸ್ತ್ರಿಯ ಸಂಗೀತ ಗಾಯನ ) 
  2. ಡಾ.ಪಂಡಿತ ರಾಠೊಡ ಗದಗ (ಸಾಹಿತ್ಯ )















ಪುಟ್ಟರಾಜ ಅಮೃತವಾಣಿ

ಪುಟ್ಟರಾಜ ಅಮೃತವಾಣಿ

ಮನಮುಟ್ಟಿ ಪೂಜಿಸಿದ ಫಲ ಕೈಯ ಮೇಲೆ
ಕೂಡಲಸಂಗಮದೇವ ನಿಮ್ಮ ಮನಮುಟ್ಟಿ
ಅತ್ಯುತ್ಕಟೈ: ಪುಣ್ಯಪಾಪೈರಿಹೈವ ಫಲಮಶ್ನುತೇ l
(ತಾತ್ಪರ್ಯ : ಅತಿಶಯವಾದ ಪುಣ್ಯ ಪಾಪಗಳು ಇದೇ ಲೋಕದಲ್ಲಿಯೇ ಫಲಿಸುತ್ತವೆ).
ಈ ಶುಭಾಷಿತ ವಚನಕಿಂತಲೂ ಶ್ರೀ ಬಸವಣ್ಣನವರು ಇನ್ನೂ ಸೂಕ್ಷಮವಾಗಿವಿಚಾರಿಸಿ ಹೀಗೆ ಹೇಳುತ್ತಾರೆ.
ಹೊಯ್ದರೆ ಹೊಯ್ಗಳು ಕೈಯ ಮೇಲೆ 
ಬೈದರೆ ಬಯ್ಗಳು ಕೈಯ ಮೇಲೆ
ಹಿಂದಿನ ಲೆವೆನಾದಡಾಗಲಿ
ಇಂದಿನ ಫಲಭೋಗ ಕೈಯ ಮೇಲೆ
ಪೂಜಿಸಿದಫಲ ಕೈಯ ಮೇಲೆ.
ಬಸವಣ್ಣನವರು ಹಿಂದಿನ ಜನ್ಮದ ಫಲವನ್ನು ಅವರು ಈ ವಚನದಲ್ಲಿ ಒಪ್ಪುವದಿಲ್ಲ ಮನ ಮುಟ್ಟಿದ ಪೂಜೆ ತತ್ ಕ್ಷಣದಲ್ಲಿಯೇ ಫಲಿಸುವದೆಂದು ಈ ವಚನದ ತಾತ್ಪರ್ಯ. ಮಾಡುವ ಪುಣ್ಯವೆಲ್ಲವು ಪೂಜೆಯ ಪುಣ್ಯವೆಂದರೆ ಪರಹಿತ ಪರೋಪಕಾರ ಮಾಡುವ ಮನುಷ್ಯನು ಯಾವಾಗಲು ಅನ್ಯರ ಮನ ನೋಯದಂತೆ ವರ್ತಿಸಬೇಕು. ಪರರ ಮನ ನೋಯಿಸುವಡೆ ಪಾಪ. ಅದಕ್ಕಾಗಿಯೇ ಶ್ರೀ ಬಸವಣ್ಣನವರು "ಅಯ್ಯಾ ಎಂದಡೆ ಸ್ವರ್ಗ,ಎಲವೊ ಎಂದ ಡೆ ನರಕ,ಭಕ್ತ ಜಿಯಾಜಯ ಎಂಬಲ್ಲಿ ಕೈಲಾಸವುಂಟು ಕೂಡಲ ಸಂಗಮ ದೇವ"ಎಂದಿದ್ದಾರೆ.ಪುಣ್ಯ ಪಾಪಗಳ ವಿಷಯವು ಇಷ್ಟು ಸೂಕ್ಷಮವಾಗಿದೆ.ಆದ್ದರಿಂದ ನಾವು ನುಡಿಯಲ್ಲಿಯೂ, ನಡೆಯಲ್ಲಿಯೂ ಜಾಗರೂಕರಾಗಿ ಇರಬೇಕು.ಒಂದು ಮೃದುವಾದ ಮಾತು ಒಂದು ಮಹಾ ಮಂತ್ರದ ಜಪವಾಗಿ ಪರಿಣಮಿಸುತ್ತದೆ. ಅದಕ್ಕಾಗಿ ಶ್ರೀ ಬಸವಣ್ಣನವರು ಮೃದುವಚನವೇ ಸಕಲ ಜಪಂಗಳಯ್ಯ ಮೃದುವಚನವೇ ಸಕಲ ತಪಂಗಳಯ್ಯ ಸದುವಿನಯವೇ ಸದಾಶಿವನೊಲುಮೆಯೈ ಎಂದು ಜನರನ್ನು ಎಚ್ಚರಿಸಿದ್ದಾರೆ.ಅದರಂತೆ ತಮ್ಮ ಮತ್ತೊಂದು ವಚನದಲ್ಲಿ ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ಪ ಲಿಂಗವು ಘಟಸರ್ಪನೋಡಾ"ಎಂದಿದ್ದಾರೆ. ಆದ್ದರಿಂದ ನಾವು ನಮ್ಮ ನುಡಿ ನಡೆಗಳಿಂದ ಪರಹಿತವನ್ನು ಸಾಧಿಸುವದೆ ಜನ್ಮ ಸಾಫಲ್ಯದ ಮಾರ್ಗವು.

ಸರ್ವಂ ಭದ್ರಂ ಭೂಯಾತ್ 
ಸಂಪಾದಕ : ಸಿ.ಕೆ.ಎಚ್.ಶಾಸ್ತ್ರೀ (ಕಡಣಿ). 

ಜೂನ್ 24, 2013

ನೀನೋಲಿದಂತೆ ಹಾಡುವೆ


                     ॥ಪಲ್ಲವಿ  
ಸಂಗೀತ ಸಾಹಿತ್ಯ ಕಲಾ ಸರಸ್ವತಿಗೆ ತನ್ನ ಕಣ್ಣಿತ್ತು, ಕುರುಡನಾಗಿ ಈ ಧರೆಗೆ ಬಂದು,ತನ್ನಂತಹ ಅನಂತ ಕುರುಡರಿಗೆ ಕಣ್ಣಾದವರು ಮಾತ್ರವಲ್ಲದೆ ಕಣ್ಣಿದ್ದೂ ಕುರುಡರಂತಿದ್ದ ಅನೇಕ ಜನರ ಕಣ್ಣು ತೆರಸಿದ ಈ ಶತಮಾನದ ಅದ್ಭುತ ಮಹಾಚೇತನ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರು. ಇವರ ಜೀವನವೇ ಒಂದು ಸುಂದರ ಕವನ.ಪೂಜ್ಯರ ಹುಟ್ಟು ಬದುಕು ಸಾವು ಲೋಕದ ಜನರಂತೆ ಇದ್ದರೂ ಕೂಡಾ ಅದು ಕೇವಲ ಕಥೆಯಾಗದೆ ಲೀಲಾ ವಿಳಾಸವಾಗಿದೆ. ಹಾದಿ ಬೀದಿಯಲ್ಲಿ ಹಾಡು ಹೇಳಿ ಭಿಕ್ಷೆ ಬೇಡಿ ಬದುಕುವ ಜನರ ಉಧ್ಧಾರಕಾಗಿ ಕಾಡಶಟ್ಟಿ ಹಳ್ಳಿಯಲ್ಲಿ ಹುಟ್ಟಿದ ಕುರುಡ ಗದುಗಯ್ಯನನ್ನು ಕರೆತಂದು, ಗಾನಯೋಗಿ ಪಂಚಾಕ್ಷರಿ ಗವಾಯಿಯನ್ನಾಗಿ ಮಾಡಿ, ತನ್ನಂತಹ ಕುರುಡರ ಉಧ್ಧಾರದ ಸಮಾಜ ಸೇವಾ ಧೀಕ್ಷೆ ನೀಡಿ ಸಮಾಜಕ್ಕೆ ಸಮರ್ಪಿಸಿದವರು ಹಾನಗಲ್ಲ ಕುಮಾರ ಶಿವಯೋಗಿಗಳು. ಹಾನಗಲ್ಲ ಕುಮಾರೇಶನ ಸಂಕಲ್ಪದಂತೆ, ಗಾನಯೋಗಿ ಪಂಚಾಕ್ಷರಿ ಗವಾಯಿಗಳವರು ಅಂಧ ಅನಾಥರಿಗೆ ಸಂಗೀತ ವಿದ್ಯೆ ದಾನಮಾಡುತ್ತ, ಕುರುಡ ಕುಂಟರ ಕುಬೇರರಾದರು;ಅಂಧರ ಬಾಳಿಗೆ ಕೈಗೊಲಾದರು. ನಂತರ ಇದೆ ಮಾರ್ಗದಲ್ಲಿ ಮುನ್ನಡೆದ ಅವರ ಪಟ್ಟದ ಶಿಷ್ಯ ಪುಟ್ಟರಾಜರು ಗುರುವಿನ ಮೀರಿಸಿದ ಶಿಷ್ಯರಾಗಿ, ತಮ್ಮ ಬಹುಮುಖ ಸಮಾಜ ಸೇವೆಯಿಂದ, ನಡೆದಾಡುವ ದೇವ, ಭುವಿಯ ಭವಂತ, ಈ ನೆಲದ ನಕ್ಷತ್ರವೆನಿಸಿಕೊಂಡ ಈ ಶತಮಾನದ ಅದ್ಭುತ ವ್ಯಕ್ತಿ ಗುರು ಪುಟ್ಟರಾಜರ ಜೀವನ,ಅದು ಸಾಹಿತ್ಯ ಸರಸ್ವತಿ ರಚಿಸಿದ ಸುಂದರ ಕವನ. ಶ್ರೀ.ಮ.ನಿ.ಪ್ರ ಹಾನಗಲ್ಲ ಕುಮಾರ ಶಿವಯೋಗಿಗಳವರು, ಈ ಸಮಾಜ ಎಂದೂ ಮರೆಯದ ಕೊಡುಗೆಯಾಗಿ ಪ್ರಮುಖ ಮೂರು ಮುಖ್ಯ ಸಂಸ್ಥೆಗಳನ್ನು ಈ ನಾಡಿಗೆ ನೀಡಿದರು.ಒಂದನೆಯದ್ದು ಶಿವಯೋಗ ಮಂದಿರ ಎರಡನೆಯದ್ದು ಅಖಿಲ ಭಾರತ ವೀರಶೈವ ಮಹಾಸಭೆ ಮೂರನೆಯದ್ದು ಶ್ರೀ ವೀರೇಶ್ವರ ಪುಣ್ಯಾಶ್ರಮ.ಈ ಮೂರು ಸಂಸ್ಥೆಗಳು ಕುಮಾರೇಶನ ಕೊಡುಗೆಯಾಗಿ ನಾಡವರು ಗುರುತಿದ್ದಾರೆ. ಈಗಾಗಲೇ ಶಿವಯೋಗ ಮಂದಿರ ಮತ್ತು ಅಖಿಲ ಭಾರತ ವೀರಶೈವ ಮಹಾ ಸಭೆ ತಮ್ಮ ಜನ್ಮ ಶತಮಾನೋತ್ಸವ ವೈಭವದಿಂದ ಆಚರಿಸಿಕೊಂಡಿವೆ. ಈಗ ಪುಣ್ಯಾಶ್ರಮಕ್ಕೆ ಜನ್ಮಶತಮಾನೋತ್ಸವದ ಸಂಭ್ರಮ.ಶತಮಾನೋತ್ಸವದ ಹೊಸ್ತಿಲಲ್ಲಿ ಇರುವ ಆಶ್ರಮಕ್ಕೆ, ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಶಿವಯೋಗ ಮಂದಿರಕ್ಕೆ ಸಿಕ್ಕ ಪ್ರಾಧಾನ್ಯತೆ ಸಿಗದೇ ಇರುವದು ಅತ್ಯಂತ ಖೇದ ಪಡುವ ಸಂಗತಿ. ಶರಣರ ಇರುಹು ಮರಣದಲ್ಲಿ ಕಾಣು ಎನ್ನುವಹಾಗೆ ಪುಟ್ಟರಾಜರು ಲಿಂಗೈಕ್ಯರಾಗುವವರೆಗೆ ಪುಟ್ಟರಾಜರು ಏನಾಗಿದ್ದರು ಎಂಬುವುದನ್ನು ಸರಕಾರವಾಗಲಿ ಸಮಾಜದ ಪ್ರಮುಖರಾಗಲಿ ಗಮನಿಸಿರಲೇಯಿಲ್ಲ. ಯಾವ ಮದರ್ ಥೆರಿಸಾಗಿಂತ ಕಡಿಮೆಯಲ್ಲದ ಅನಾಥರ ಸೇವೆಮಾಡಿದ ಪುಟ್ಟರಾಜರಿಗೆ ಭಾರತ ರತ್ನ ನೀಡಿ ಗೌರವಿಸಬೇಕಾಗಿತ್ತೋ ಆನಿಟ್ಟಿನಲ್ಲಿ ಪ್ರಯತ್ನಗಳಾಗಲಿಲ್ಲ.ಯಾವ ಭೀಮಸೇನ ಜೋಶಿಯವರಿಗಿಂತ ಕಡಿಮೆಯಲ್ಲದ ಸಂಗೀತ ಸೇವೆ ಮತ್ತು ಶಿಷ್ಯ ಪ್ರಶಿಷ್ಯರನ್ನು ಭಾರತೀಯ ಸಂಗೀತ ಪ್ರಪಂಚಕ್ಕೆ ನೀಡಿದ್ದರೂ, ಕನ್ನಡಿಗರು ಮರೆತೇ ಹೋದ ಪುಣೆ ನಿವಾಸಿಯಾಗಿದ್ದ ಭೀಮಸೇನ ಜೋಶಿಯವರಿಗೆ ಅವರಿದ್ದಲಿಗೆ ಹೋಗಿ ನಮ್ಮ ಕರ್ನಾಟಕ ಸರಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿಬಂತು. ಇಲ್ಲಿರುವ ಪುಟ್ಟರಾಜರ ನೆನಪು ಆಗಲಿಲ್ಲ.ವಿಶ್ವಪ್ರಸಿದ್ಧ ಸಂಗೀತಗಾರರನ್ನು ಈ ದೇಶಿ ಸಂಗೀತ ಕ್ಷೇತ್ರಕ್ಕೆ ನೀಡಿದ, ವಿಶ್ವಕ್ಕೆ ಮಾದರಿಯಾದ ಗುರುಕುಲ ಮಾದರಿಯ ಸಂಗೀತ ಶಾಲೆಯೊಂದು ನೂರು ವರ್ಷಗಳ ಹಿಂದೆ ಸ್ಥಾಪಿಸಿ ಇಂದಿಗೂ ಕೂಡಾ ಮುಂದುವರಿಸಿಕೊಂಡು ಬಂದ ಈ ಹಿಂದೂಸ್ತಾನಿ ಶಾಸ್ತ್ರಿಯ ಸಂಗೀತ ಪರಂಪರೆಯ ಹರಿಕಾರರಾಗಿದ್ದ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ಹೆಸರಾಗಲಿ ಪುಟ್ಟರಾಜರ ಹೆಸರಾಗಲಿ ಹುಬ್ಬಳಿಯಲ್ಲಿ ಸ್ಥಾಪಿಸಿದ ಗುರುಕುಲಕ್ಕೆ ಡಾ.ಗಂಗೂಬಾಯಿ ಹಾನಗಲ್ಲರವರ ಹೆಸರಿಡುವಾಗ ಈ ಮಹಾಚೆತನಗಳ ನೆನಪಾಗಲಿಲ್ಲ. ಹುಬ್ಬಳ್ಳಿಯಲ್ಲಿಯ ಗುರು ಕುಲಕ್ಕೆ ಹಾನಗಲ್ಲವರ ಹೆಸರಿಟ್ಟಿದ್ದಿರಿ ದಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಿದ್ದಿರೀ ದಾರವಾಡದ ಅವರಮನೆ ಸ್ಮಾರಕಮಾಡಿದ್ದಿರಿ ಮೈಸೂರಲ್ಲಿ ಸ್ಥಾಪಿಸಲು ಉದ್ದೇಶಿಸಿದ ಸಂಗೀತ ವಿಶ್ವವಿದ್ಯಾಲಯಕ್ಕಾದರೂ ಪಂಚಾಕ್ಷರಿ ಗವಾಯಿಗಳವರ ಹೆಸರಿಡಿ ಎಂದು ಕೇಳಿದರೆ ಸರಕಾರದ ಕಿವಿಗೆ ಕೇಳಿಸಲೇ ಇಲ್ಲ.ದಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗಾನಯೋಗಿ ಪಂಚಾಕ್ಷರಿ ಗಾವಾಯಿ ಅಧ್ಯಯನ ಪೀಠ ಸ್ಥಾಪನೆಗೆ ಅನುಮತಿ ದೊರೆತಿದ್ದರು ಅದಕ್ಕೆ ಮೂಲ ಧನ ಸರಕಾರ ಬಿಡುಗಡೆಮಾಡದೆ ಆ ಕೆಲಸ ಅಲ್ಲೇ ನಿಂತಿದೆ. ಈ ಉಭಯ ಗಾನ ಗುರುಗಳ ಸೇವೆ ಪಡೆದ ಈ ಸಮಾಜ ಅವರಿಗೆ ಪ್ರತಿಯಾಗಿ ಸಲ್ಲಿಸಿದ ಕೊಡುಗೆಯೇನು? ಎಂದು ಪ್ರಶ್ನಿಸಿಕೊಂಡರೆ ಉತ್ತರ ಸೂನ್ಯ ಮತ್ತು ನಾಚಿಕೆ ಪಡುವಂತಹದ್ದು.ಈ ಸರಕಾರ ಸಮಾಜ ಏನಾದರು ಮಾಡಲಿ ಬಿಡಲಿ ನಾವಾದರೂ ಅಂದರೆ ಶಿಷ್ಯರಾದರು ಪೂಜ್ಯರ ಋಣ ತಿರಿಸುವ ಕೆಲಸವಾಗಿದೆಯೇ ಎಂದು ಪ್ರಶ್ನಿಸಿಕೊಂಡರೆ ಅಲ್ಲಿಯೂ ಉತ್ತರವಿಲ್ಲ.ಸಾಧ್ಯವಾದಷ್ಟು ಅವರ ಹೆಸರು ಬಳಸಿಕೊಂಡು ಬದುಕುತ್ತಿದ್ದೇವೆ. ಅದೂ ದುರ್ಬಳಕೆ ಮಾಡಿಕೊಳ್ಳುವ ಮೂಲಕ. ಒಂದೇ ಊರಲ್ಲಿ ಇದ್ದರು ಒಬ್ಬರಿಗೊಬ್ಬರು ಸೇರುವದಿಲ್ಲ ತಮಗೆ ಯಾವಾಗ ಬೇಕೊ ಆವಾಗ ಪೂಜ್ಯ್ರರ ಪುಣ್ಯ ಸ್ಮರಣೆ ಜಯಂತಿ ಮಾಡುವುದು ಹಣ ಸಂಗ್ರಹ ಮಾಡುವುದು ಒಬ್ಬರು ಮಾಡುವ ಕಾರ್ಯಕ್ಕೆ ಇನ್ನೊಬ್ಬರು ಕೈ ಜೋಡಿಸುವದಿಲ್ಲ ಒಬ್ಬರು ಮಾಡಿದ್ದಕ್ಕೆ ಇನ್ನೊಬ್ಬರಿಗೆ ಸೇರಿಕೆಯಿಲ್ಲ. ಇದರ ಲಾಭ ಹೆಗ್ಗಣ ರೂಪದಲ್ಲಿ ಯಾರಾರೋ ಸೇರಿಕೊಂಡು ಗುರು ಕೀರ್ತಿಗೆ ಕಳಂಕ ತರುವ ಕಾರ್ಯ ನಡೆಯುತ್ತಿದೆ.ಇತಿಹಾಸದ ಪ್ರಜ್ಞೆಯಿಲ್ಲದ ತಮ್ಮ ಸ್ವ ಹಿತಾಸಕ್ತಿಗೆ ಲಾಭತನಕ್ಕೆ ಕೆಲವು ಜನ ಪೂಜ್ಯರ ಚರಿತ್ರೆ ತಿರುಚಿ ಬರೆಯುವದು ಇತಹಾಸ ತಿರುಚಿ ಬರೆಯುವದು ಯಾರು ಬೇಕಾದವರು ಪುಜ್ಯರ ಗ್ರಂಥಗಳನ್ನು ತಮಗೆ ತಿಳಿದಹಾಗೆ ಸಂಪಾದಿಸಿ ಮಾರಾಟ ಮಾಡಿಕೊಳ್ಳುವುದು ನಡೆದೆಯಿದೆ. ಇದನ್ನೆಲ್ಲಾ ನೋಡಿಕೊಳ್ಳುವ ಹೊಣೆ ಶಿಷ್ಯರು ಹೊರಬೇಕಲ್ಲದೆ ಹೊರುವವರು ಯಾರು?. ನೂರು ವರ್ಷದ ಇತಿಹಾಸವಿರುವ ಈ ಸಂಸ್ಥೆಯ ಸಂಸ್ಥಾಪಕರು ಯಾರು? ಈಗುರುಕುಲದಲ್ಲಿ ಪಾಠ ಪ್ರವಚನ ಹೇಗೆ ನಡೆಯುತಿದ್ದವು? ಪೂಜ್ಯರು ಸಂಚಾರಕ್ಕೆ ಹೋಗಿ ಬಂದ ನಂತರ ಯಾವ ರೀತಿ ಕೈ ತೋಳಿಯುತ್ತಿದ್ದರು? ದಂತಮಂಜನ ಹೇಗೆ ಮಾಡುತಿದ್ದರು? ಯಾವ ಯಾವ ಆಸನಗಳು ಹಾಕುತಿದ್ದರು?ಅವರು ಪ್ರಸಾದ ಸೇವನೆ ಕ್ರಮ, ಬಳಸುವ ಪಾತ್ರೆ ಮೊದಲಾದ ಸಂಗತಿಗಳು ದಾಖಲೆಯಾಗಬೇಕು ಅದಾಗಿಲ್ಲ. ಅನೇಕರು ಸಂಶೋಧನಾ ಗ್ರಂಥ ಬರೆದಿದ್ದಾರೆ ಪತ್ರಿಕೆಯಲ್ಲಿ ಕೆಲವು ಆರ್ಟಿಕಲ್ ಬಂದಿವೆ ಆದರೆ ಅವು ಯಾವು ಪೂಜ್ಯರ ದಿನಚರಿ ದಾಖಲಿಸಿಲ್ಲ. ಈ ಇಂಟರ್ ನೆಟ್ ನಲ್ಲಿ ಪಂಚಾಕ್ಷರಿ ಗವಾಯಿಗಳ ಸಿನೆಮಾ ಕ್ಲಿಪ್ ಮತ್ತು ಪೂಜ್ಯರು ಲಿಂಗೈಕ್ಯರಾದಾಗಿನ ಛಾಯಾ ಚಿತ್ರಗಳನ್ನು ಬಿಟ್ಟರೆ ಎನು ಸಿಗುವದಿಲ್ಲ ಈ ಟಿ.ವಿ.ಯವರಿಗೆ ಪುಟ್ಟರಾಜರು ಯಾರು ಪಂಚಾಕ್ಷರಿ ಗವಾಯಿ ಯಾರು ಗೊತ್ತೆಯಿಲ್ಲ ಪುಟ್ಟರಾಜರ ಫೋಟೋ ತೋರಿಸಿ ಪಂಚಾಕ್ಷರಿ ಗವಾಯಿಗಳು ಅಂತಾ ಪಂಚಾಕ್ಷರಿ ಗವಾಯಿಗಳ ಫೋಟೋ ತೋರಿಸಿ ಪುಟ್ಟರಾಜ ಗವಾಯಿಗಳು ಅಂತ ಹೇಳುತ್ತಾರೆ.ಇತ್ತೀಚಿಗೆ ವೀಕಿಪೀಡಿಯಾದಲ್ಲಿ ಪೂಜ್ಯರ ಕುರಿತು ಪುಟ್ಟರಾಜರು ತಮ್ಮ ಪೂಜೆಯಲ್ಲಿ ಬೋಗೋನಿ ಎರಡೆರಡು ಗಂಟೆ ಉಪಯೋಗಿಸುತಿದ್ದರು ಅಂತ ಬರೆದಿದ್ದರು. ಕೆಲವರಂತೂ ತಾವುಬರೆದ ಚರಿತ್ರೆಯಲ್ಲಿ ತಮಗೆ ಬೇಕಾದವರ ಹೆಸರು ಹಾಕಿಕೊಂಡು ಇವರು ಪೂಜ್ಯರ ಮಹಾನ್ ಶಿಷ್ಯರು ಅಂತ ಬರೆದು ಅವರಿಂದ ತಮ್ಮ ಪುಸ್ತಕ ಮಾರಿಕೊಂಡದ್ದು ಕೇಳಿ ಬೇಸರವಾಯಿತು. ಹೀಗಾಗಿ ಕೆಲವು ಪ್ರಜ್ಞಾವಂತ ಶಿಷ್ಯರಿಗೆ ತುಂಬ ನೋವಾಗಿದ್ದುದು ಇದೆ. ಆದರೆ ಒಂದು ಸಂತೋಷದ ಸಿಹಿ ಸುದ್ದಿ ಏನಂದರೆ ಇತ್ತೀಚಿಗೆ ಪೂಜ್ಯಗುರು ಪುಟ್ಟರಾಜರ ಕುರಿತು ಪುಟ್ಟರಾಜ ಲೀಲಾ ವಿಳಾಸ ಪುರಾಣ ಕಾವ್ಯ ಲೋಕಾರ್ಪಣವಾಗಿದೆ. ಅದನ್ನು ರಚಿಸಿದವರು ಪಂ.ರಾಜಗುರು ಗುರುಸ್ವಾಮಿ ಕಲಿಕೇರಿಯವರು ಈ ಕಾವ್ಯ ಭಾಮಿನಿ ಷಟ್ಪದಿಯಲ್ಲಿ ಇದೆ ಇದನ್ನು ನಾನು ಓದಿದೆ ಈ ಪುರಾಣ ಪುರಾಣವಾಗಿರದೆ ಇತಿಹಾಸವಾಗಿದೆ ಇದನ್ನೇ ಆಧಾರವಾಗಿಟ್ಟುಕೊಂಡು ಸಂಪೂರ್ಣ ಕಾವ್ಯವನ್ನು ಸರಳಾನುವಾದ ಮಾಡಿ ಹೇಳ ಬೇಕೆಂದು ವಿಚಾರಮಾಡಿ ಹಿರಿಯ ಗುರುಬಂದುಯನ್ನುವದಕಿಂತಾ ನನ್ನತಂದೆಯ ಸ್ಥಾನದಲ್ಲಿರುವ ಪೂಜ್ಯ್ರ ಕಲಿಕೇರಿ ಗವಾಯಿಗಳವರಿಗೆ ನನ್ನ ಬಯಕೆ ವ್ಯಕ್ತ ಪಡಿಸಿದಾಗ ತುಂಬು ಹೃದಯದಿಂದ ಒಪ್ಪಿ ಪರವಾನಿಗೆ ನೀಡಿದ್ದಾರೆ ಈ ಮೂಲಕ ಪೂಜ್ಯರ ಅಬಿಮಾನಿ ಭಕ್ತರಿಗೆ ಪೂಜ್ಯರ ಲೀಲಾ ವಿಳಾಸವು ಪೂಜ್ಯ್ರರ ಜೀವನ ಕವನ ವಾಗಿಸಿ ನೀ ಒಲಿದಂತೆ ಹಾಡುವೆ ಎಂದು ಬಸವಣ್ಣ ಹೇಳಿದ ಹಾಗೆ ಗುರುಚರಿತೆ ತಮ್ಮೆಲ್ಲರ ಮನ ಮಂದಿರಕ್ಕೆ ತಲುಪಿಸುವ ಪ್ರಯತ್ನಮಾಡುವೆ ನಿಮ್ಮ ನಿಮ್ಮ ಹದುಳ ಹಾರೈಕೆ ಇರಲಿ ಎಂದು ಆಶಿಸುತ್ತ ಗುರು ಪುಟ್ಟರಾಜ ಹಾಡಿಸಿದಂತೆ ಹಾಡಲು ಆರಂಭಮಾಡುವೆ. 


ಸಿ. ಕೆ.ಹೆಚ್. ಶಾಸ್ತ್ರೀ (ಕಡಣಿ)